ಹೋರಾಟಕ್ಕೆ ಮಣಿದ ಅಕ್ಷಯ್ ಕುಮಾರ್: ಬಾಲಿವುಡ್ ಮಂದಿಯ ನಿದ್ದೆಗೆಡಿಸುತ್ತಿದೆ ಕರಣಿ ಸೇನಾ ಸಂಘಟನೆ

Public TV
1 Min Read
prithviraj film 1

ಬಾಲಿವುಡ್ ಮಂದಿಗೆ ಸಿಂಹಸಪ್ನವಾಗಿದೆ ಕರಣಿ ಸೇನಾ ಸಂಘಟನೆ. ಬಾಲಿವುಡ್ ನಲ್ಲಿ ರಜಪೂತ್ ಜನಾಂಗದ ಕುರಿತಾಗಿ ಮತ್ತು ಅಲ್ಲಿನ ಯೋಧರ ಕುರಿತಾಗಿ ಸಾಕಷ್ಟು ಸಿನಿಮಾಗಳು ಬರುತ್ತಿವೆ. ಈ ಸಿನಿಮಾದಲ್ಲಿ ರಜಪೂತ್ ಜನಾಂಗಕ್ಕೆ ಏನಾದರೂ ಅವಮಾನ ಅನಿಸಿದರೆ, ತಪ್ಪು ಸಂದೇಶ ರವಾನೆ ಆದರೆ, ಯಾವುದೇ ಕಾರಣಕ್ಕೂ ಕರಣಿ ಸೇನೆ ಸುಮ್ಮನೆ ಕೂರುವುದಿಲ್ಲ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

prithviraj film 3

ಈ ಹಿಂದೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದ ‘ಪದ್ಮಾವತ್’ ಸಿನಿಮಾಗೂ ಈ ಕರಣಿ ಸೇನಾ ಸಂಘಟನೆ ಸಾಕಷ್ಟು ಅಡಚಣೆ ಮಾಡಿತ್ತು. ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಪದ್ಮಾವತಿ ಎಂದಿದ್ದ ಹೆಸರನ್ನು ಬದಲಾಯಿಸುವಂತೆ ಹೋರಾಟ ಮಾಡಿದ್ದರು ಕರಣಿ ಸೇನಾ. ಕೊನೆಗೆ ಅದು ಪದ್ಮಾವತ್ ಎನ್ನುವ ಹೆಸರಿನಲ್ಲಿ ರಿಲೀಸ್ ಆಯಿತು. ಕೆಲವು ಕಡೆ ಸಿನಿಮಾ ಬಿಡುಗಡೆ ಆಗದಂತೆ ನೋಡಿಕೊಳ್ಳಲಾಯಿತು. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

prithviraj film 4

ಇದೀಗ ಕರಣಿ ಸೇನಾ ಸಂಘಟನೆಯ ಕಣ್ಣು ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯ ‘ಪೃಥ್ವಿರಾಜ್’ ಸಿನಿಮಾದ ಮೇಲೆ ಬಿದ್ದಿದೆ. ಈ ಟೈಟಲ್ ಅನ್ನು ಬದಲಾಯಿಸುವಂತೆ ಹೋರಾಟ ನಡೆಯುತ್ತಿದೆ. ಟೈಟಲ್ ಬದಲಾಯಿಸದೇ ಇದ್ದರೆ, ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೇಳಲಾಗಿತ್ತು. ಹಾಗಾಗಿ ಸಿನಿಮಾದ ಶೀರ್ಷಿಕೆಯನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಯಶ್ ರಾಜ್ ಫಿಲ್ಮ್ಸ್. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

prithviraj film 2

ಪೃಥ್ವಿರಾಜ್ ಬದಲಾಗಿ ‘ವೀರಯೋಧ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್’ ಎಂದು ಪೂರ್ಣ ಹೆಸರಿಟ್ಟು ಈ ಸಿನಿಮಾ ರಿಲೀಸ್ ಮಾಡಬೇಕು ಎನ್ನುವುದು ಕರಣಿ ಸೇನೆಯ ಆಗ್ರಹವಾಗಿತ್ತು. ಆದರೆ, ಇಷ್ಟೊಂದು ಸಿನಿಮಾ ಹೆಸರು ಇಡುವುದು ವ್ಯಾಪಾರ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ ಎಂದು ಮನವಿ ಮಾಡಿಕೊಂಡು ‘ಸಾಮ್ರಾಟ್ ಪೃಥ್ವಿರಾಜ್’ ಹೆಸರಿನಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರಂತೆ ಚಿತ್ರತಂಡ.

Share This Article
Leave a Comment

Leave a Reply

Your email address will not be published. Required fields are marked *