ಕುಮಾರಸ್ವಾಮಿ ಏಕಪತ್ನಿ ವ್ರತಸ್ಥ ಅಲ್ಲ, ಎಲ್ಲರಿಗೂ ಗೊತ್ತಿರುವ ವಿಚಾರ: ಗಾಲಿ ಸೋಮಶೇಖರ್ ರೆಡ್ಡಿ

Public TV
1 Min Read
G Somashekara Reddy

ಬಳ್ಳಾರಿ: RSS ವಿರುದ್ಧ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಗಾಲಿ ಸೋಮಶೇಖರ್ ರೆಡ್ಡಿ ಗುಡುಗಿದ್ದಾರೆ. ಅವರು ಏಕ ಪತ್ನಿ ವ್ರತಸ್ಥ ಅಲ್ಲ, ಈ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

RSS medium

ಬಳ್ಳಾರಿಯ ವಾಲ್ಮೀಕಿ ಭವನದಲ್ಲಿ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅವರಿಗೆ ಆಗಾಗ ತೆಲೆ ಕೆಟ್ಟು ಮಾನಸಿಕ ಸ್ಥಿಮಿತ ಕಳೆದುಕೊಂಡು ಬುದ್ದಿ ಮಾಂದ್ಯನ ಹಾಗೆ ಮಾತನಾಡುತ್ತಾರೆ. ಅಶ್ಲೀಲ ಚಿತ್ರ ನೋಡಲು ಆರ್‍ಎಸ್‍ಎಸ್ ಸೇರಬೇಕಾ ಎಂಬ ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಅವರು ಹೀಗೆ ಮಾತನಾಡಲು ಅವರು ಏಕಪತ್ನಿ ವ್ರತಸ್ಥ ಅಲ್ಲಾ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೆ ಕಾಫಿನಾಡ ಯುವಕನೇ ಸಾರಥಿ

ramanagar hdk

ಒಂದು ಸಾರಿಯಾದರೂ  RSS ಕಾರ್ಯಕ್ರಮದಲ್ಲಿ ಭಾಗವಹಿಸಲಿ ಆಗ ಅವರಿಗೆ ತಿಳಿಯುತ್ತದೆ. ಇನ್ನು ಅವರೊಬ್ಬ ಮಾಜಿ ಮುಖ್ಯಮಂತ್ರಿ ಅವರು ಹೀಗೆಲ್ಲಾ ಮಾತನಾಡಬಾರದು. ಮೊದಲು ಮಾತನಾಡುವಾಗ ಒಂದು ಸಾರಿ ಯೋಚನೆ ಮಾಡಲಿ. ಇನ್ನು ಪ್ರತಿ ಸಾರಿ ಚುನಾವಣಾ ಬಂದಾಗ ಅವರಿಗೆ ತಲೆ ಕೆಟ್ಟು, ಬುದ್ಧಿ ಭ್ರಮಣೆ ಆಗುತ್ತೆ ಎಂದಿದ್ದಾರೆ.  ಇದನ್ನೂ ಓದಿ: ಹೆಸರು ಬದಲಿಸಲು ಚಿಂತಿಸಿದ ಫೇಸ್‍ಬುಕ್

Share This Article
Leave a Comment

Leave a Reply

Your email address will not be published. Required fields are marked *