Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bagalkot

ಮಗುವಿನಂತೆ ಆರೈಕೆ ಮಾಡಿದ್ದ ನರ್ಸ್ ಗಾಗಿ 20 ವರ್ಷದಿಂದ ಕಾಯ್ತಿದ್ದಾರೆ ಮಾಜಿ ಸೈನಿಕ

Public TV
Last updated: July 26, 2019 11:27 am
Public TV
Share
3 Min Read
KARIL
SHARE

– 2 ಕೈ, 1 ಕಾಲು ಕಳೆದುಕೊಂಡ ಯೋಧನ ಕರುಣಾಜನಕ ಕಥೆ ಓದಿ

ಬಾಗಲಕೋಟೆ: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಒಬ್ಬೊಬ್ಬ ಯೋಧನ ಕಥೆ ಒಂದೊಂದು ರೀತಿ ಇದೆ. ಆದರೆ ಇಲ್ಲೊಬ್ಬರು ಯೋಧನ ಕಥೆ ತುಂಬಾ ವಿಭಿನ್ನವಾಗಿದ್ದು, ಇವರು ಮಾರಣಾಂತಿಕವಾಗಿ ಗಾಯಗೊಂಡ ವೇಳೆ ತಾಯಿಯಂತೆ ಆರೈಕೆ ಮಾಡಿದ್ದ ಓರ್ವ ಸ್ಟಾಪ್ ನರ್ಸ್ ಭೇಟಿಗಾಗಿ ಮಗುವಿನಂತೆ 20 ವರ್ಷಗಳಿಂದಲೂ ಕಾಯುತ್ತಿದ್ದಾರೆ. ಇದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹುಲಸಗೇರಿ ಗ್ರಾಮದ ನಿವಾಸಿ ರಂಗಪ್ಪ ಆಲೂರ ವೀರಯೋಧನ ಕರುಣಾಜನಕ ಕಥೆಯಾಗಿದೆ.

ಕಾರ್ಗಿಲ್ ಯುದ್ದ ನಡೆದು ಈಗ 20 ವರ್ಷಗಳು ಗತಿಸಿವೆ. ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಗೆಲುವಿನ ನಗೆ ಬೀರಿದ ದಿನ ಇಂದು. ಅಂತಹ ಭಯಾನಕ ಯುದ್ಧದಲ್ಲಿ 21 ದಿನಗಳ ಕಾಲ ರಂಗಪ್ಪ ಆಲೂರ ಅವರು ಹೋರಾಡಿ ಶತ್ರುಗಳ ಸದೆಬಡಿದವರು. ರಂಗಪ್ಪ ಆಲೂರು 1993ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿದ್ದರು. ನೇಮಕಗೊಂಡ 6 ವರ್ಷದಲ್ಲಿ ಕಾರ್ಗಿಲ್ ಯುದ್ಧ ಶುರುವಾಗಿದ್ದು, ಈ ಯುದ್ಧದಲ್ಲಿ 21 ದಿನಗಳ ಕಾಲ ಭಾಗಿಯಾಗಿದ್ದ ರಂಗಪ್ಪ ಆಲೂರು 21 ನೇ ದಿನ ಶತ್ರುಗಳ ಮಿಸೈಲ್‍ಗೆ ತುತ್ತಾಗಿ ತಮ್ಮ ಎರಡು ಕೈ ಹಾಗೂ ಒಂದು ಕಾಲನ್ನು ಕಳೆದುಕೊಂಡಿದ್ದರು. ಸೇನೆಯಲ್ಲಿ ಇವರ ಸೇವೆಗೆ ಸರ್ಕಾರದಿಂದ ಸಿಗಬೇಕಾದ ಭೂಮಿ ಸೈಟ್, ಪರಿಹಾರ ಧನ ಎಲ್ಲವೂ ಸಿಕ್ಕಿದೆ. ಆದರೆ ಇವರ ತುಡಿತವೇ ಬೇರೆಯಾಗಿದೆ.

vlcsnap 2019 07 26 08h56m39s245

ಅಂದು ಯುದ್ಧದಲ್ಲಿ ಗಾಯಗೊಂಡು ಎರಡು ವರ್ಷಗಳ ಕಾಲ ಚಿಕಿತ್ಸೆಗೆ ಒಳಗಾದ ವೇಳೆ ನನ್ನನ್ನು ಮಗುವಿನಂತೆ ಕನ್ನಡತಿ ಸ್ಟಾಪ್ ನರ್ಸ್ ಗೀತಾ ಆರೈಕೆ ಮಾಡಿದ್ದರು. ಚಂಡೀಗಢದ ಮಿಲಿಟರಿ ಆಸ್ಪತ್ರೆಯಲ್ಲಿ ಎರಡು ವರ್ಷ ಆರೈಕೆ ಮಾಡಿದ ಗೀತಾ ಅವರನ್ನು ಭೇಟಿಯಾಗಬೇಕೆಂದು 20 ವರ್ಷದಿಂದ ಕಾದಿದ್ದೇನೆ. ಹೇಗೋ ಮಾಡಿ ಅವರ ನಂಬರ್ ಪಡೆದಿದ್ದು, ಇದೇ ತಿಂಗಳು 29ರಂದು ಅವರನ್ನು ಭೇಟಿ ಮಾಡಲು ಹೊಗಲಿದ್ದೇನೆ. ಅವರು ನನ್ನ ತಾಯಿ, ಅವರೇ ನನ್ನ ಪಾಲಿನ ಭಾರತಮಾತೆ. ಅವರನ್ನು ಭೇಟಿಯಾದಾಗಲೇ ನನ್ನ ಜೀವನ ಸಾರ್ಥಕ ಎಂದು ರಂಗಪ್ಪ ಆಲೂರ ಹೇಳಿದ್ದಾರೆ.

ರಂಗಪ್ಪ ಆಲೂರ ಅವರಿಗೆ ಎರಡು ಕೈಗಳಿಲ್ಲ, ಒಂದು ಕಾಲು ಇಲ್ಲ. ಇದರಿಂದ ಪ್ರತಿನಿತ್ಯ ಇವರಿಗೆ ಕುಟುಂಬಸ್ಥರ ಸಹಕಾರ ಬೇಕೇ ಬೇಕು. ಕುಟುಂಬಸ್ಥರು ಕೂಡ ಇವರನ್ನು ತುಂಬಾ ಕಾಳಜಿಯಿಂದ ಆರೈಕೆ ಮಾಡುತ್ತಿದ್ದಾರೆ. ತಮ್ಮ ಪರಿಸ್ಥಿತಿ ವೈಕಲ್ಯತನದಿಂದ ಕೂಡಿದ ಕಾರಣ ಮತ್ತೊಬ್ಬರಿಗೆ ಹೊರೆಯಾಗಬಾರದೆಂದು ಇವರು ಮದುವೆ ಕೂಡ ಆಗಿಲ್ಲ. ಆದರೆ ಇವರ ಮನದಲ್ಲಿ ಸದಾ ಕಾಡುತ್ತಿರುವ ಕೊರಗು ಸ್ಟಾಪ್ ನರ್ಸ್ ಗೀತಾ ಅವರನ್ನು ಭೇಟಿಯಾಗುವುದು ಮಾತ್ರ. ದೇಹದಲ್ಲಿ ಒಟ್ಟು 28 ಆಪರೇಷನ್ ಆಗಿದ್ದು, ಇವರ ಎರಡು ವರ್ಷದ ಚಿಕಿತ್ಸಾ ಅವಧಿಯಲ್ಲಿ ತಮ್ಮ ಸ್ವಂತ ಮಗುವಿನಂತೆ ಗೀತಾ ಅವರು ಈ ಯೋಧನನ್ನು ಆರೈಕೆ ಮಾಡಿದ್ದಾರೆ. ವೀರಯೋಧ ಎಂಬ ಅಭಿಮಾನ ಜೊತೆಗೆ ನಮ್ಮ ಕನ್ನಡಿಗ ಎಂಬ ಕಾಳಜಿ ಎಲ್ಲಕ್ಕಿಂತಲೂ ತಾಯಿ ಹೃದಯ, ತಾಯಿ ಪ್ರೀತಿ ತೋರಿಸಿ ಇವರು ಗುಣಮುಖವಾಗಲು ಕಾಣರಾಗಿದ್ದು ಗೀತಾ ಎಂದು ಸಂಬಂಧಿಕರಾದ ಶ್ರೀಕಾಂತ್ ತಿಳಿಸಿದ್ದಾರೆ.

vlcsnap 2019 07 26 08h57m19s101

ಮಹಾತಾಯಿಯನ್ನು ಭೇಟಿ ಮಾಡಲು ಇವರು ಬರೋಬ್ಬರಿ 20 ವರ್ಷ ಕಾದಿದ್ದಾರೆ. ಕೊನೆಗೂ ಸತತ ಪ್ರಯತ್ನದ ಮೇರೆಗೆ ಇತ್ತೀಚೆಗೆ ಅವರ ಫೋನ್ ನಂಬರ್ ಪಡೆದು ಒಂದು ಫೋಟೋ ಪಡೆದಿದ್ದಾರೆ. ದಿನಾಲೂ ಅವರ ಮೊಬೈಲ್‍ನಲ್ಲಿ ಗೀತಾ ಅವರ ಫೋಟೋ ನೋಡಿಯೇ ಇವರು ಜೀವನ ಆರಂಭಿಸುತ್ತಾರೆ. ಇದರ ಜೊತೆಗೆ ಇಂದಿಗೂ ಸೇನೆ ಬಗ್ಗೆ ಅಭಿಮಾನ ದೇಶ ಕಾಯಬೇಕೆಂಬ ತುಡಿತವಿದೆ. ಇದಕ್ಕಾಗಿ ಸಮಯ ಸಿಕ್ಕಾಗಲೆಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಕಾರ್ಗಿಲ್ ಯುದ್ಧದ ಬಗ್ಗೆ ಅನುಭವ ಹಂಚಿಕೊಳ್ಳುತ್ತಾರೆ. ಸೇನೆಗೆ ಸೇರುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಾ ಸೈನ್ಯಕ್ಕೆ ಸೇರಲು ಹೇಗೆಲ್ಲ ತಯಾರಾಗಬೇಕೆಂದು ಸಲಹೆ ನೀಡುತ್ತಾರೆ. ಇವರನ್ನು ಕಂಡರೆ ವಿದ್ಯಾರ್ಥಿಗಳಿಗೆ, ಸ್ಥಳೀಯರಿಗೆ ಮತ್ತು ಕುಟುಂಬಸ್ಥರಿಗೆ ಎಲ್ಲರಿಗೂ ಹೆಮ್ಮೆಯಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ವಿದ್ಯಾರ್ಥಿ ಸಮರ್ಥ್ ಹೇಳಿದ್ದಾನೆ.

TAGGED:bagalakoteKargil warnursePublic TVsoldierಕಾರ್ಗಿಲ್ ಯುದ್ಧನರ್ಸ್ಪಬ್ಲಿಕ್ ಟಿವಿಬಾಗಲಕೋಟೆಸೈನಿಕ
Share This Article
Facebook Whatsapp Whatsapp Telegram

Cinema Updates

Kamal Haasan
ಅಹಂಕಾರಿ ಕಮಲ್‌ಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ
15 hours ago
Kamal Haasan
ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ
18 hours ago
Thug Life 2
ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ
22 hours ago
Ananth Nag MODI
ಹೈ ಟೀ ಸಮಾರಂಭದಲ್ಲಿ ಮೋದಿ ಭೇಟಿಯಾದ ಅನಂತ್‌ನಾಗ್‌
1 day ago

You Might Also Like

08
Belgaum

IPL Champions | ರಾಜ್ಯದೆಲ್ಲೆಡೆ ಊರ ಹಬ್ಬದಂತೆ ಆರ್‌ಸಿಬಿ ಗೆಲುವು ಸಂಭ್ರಮಿಸಿದ ಫ್ಯಾನ್ಸ್‌

Public TV
By Public TV
2 hours ago
Vitar
Cricket

IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

Public TV
By Public TV
2 hours ago
Virat Kohli 02
Cricket

ನನ್ನ ಹೃದಯ, ಆತ್ಮ ಬೆಂಗಳೂರಿಗಾಗಿ… ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡ್ತೀನಿ – ಕೊಹ್ಲಿ ಭಾವುಕ

Public TV
By Public TV
2 hours ago
RCB Win 00
Cricket

IPL Champions | ಚುಟುಕು ಕದನದಲ್ಲಿ ಈವರೆಗೆ ಚಾಂಪಿಯನ್ಸ್‌ ಪಟ್ಟ ಗೆದ್ದವರ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ…

Public TV
By Public TV
3 hours ago
Virat Kohli 1
Bengaluru City

ನಮ್ಮ ಬೆಂಗಳೂರು ಕಾಯುತ್ತಿದೆ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳೊಟ್ಟಿಗೆ ಆನಂದಿಸಬೇಕು – ಬೆಂಗ್ಳೂರು ಮರೆಯದ ಕೊಹ್ಲಿ

Public TV
By Public TV
3 hours ago
Sai sudharsan 2
Cricket

18 ಆವೃತ್ತಿಗಳಲ್ಲಿ ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್‌ಗಳ ಕಂಪ್ಲೀಟ್‌ ಲಿಸ್ಟ್‌ ನೋಡಿ…

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?