ಸಂಕ್ರಾಂತಿಗೆ ಶಿವನಂದಿ ಅವತಾರದಲ್ಲಿ ಯಜಮಾನ

Public TV
1 Min Read
DARSHAN 1

ಬೆಂಗಳೂರು: ಚಂದನವನದ ಚಕ್ರವರ್ತಿ, ಡಿ ಬಾಸ್ ದರ್ಶನ್ ಸಂಕ್ರಾಂತಿ ಹಬ್ಬಕ್ಕಾಗಿ ಶಿವನಂದಿ ಅವತಾರದಲ್ಲಿ ನಿಮ್ಮ ಮುಂದೆ ಆಗಮಿಸಲಿದ್ದಾರೆ. ಯಜಮಾನ ಚಿತ್ರದ ಮೊದಲ ಹಾಡು ಮಕರ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗಲಿದೆ.

ಯಜಮಾನ ಸಿನಿಮಾದ ಮೊದಲ ಹಾಡು ಇದಾಗಿದ್ದು, ಶಿವನಂದಿ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರಂತೆ. ಇದೇ ಹಾಡು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ. ನಾಯಕ ನಟನನ್ನು ಪರಿಚಯಿಸುವ ಹಾಡು ಇದಾಗಿದ್ದು, ಶಿವನಂದಿ ಎಂಬ ಶೀರ್ಷಿಕೆಯನ್ನು ಹೊಂದಿದೆ. ಶಿವನಂದಿ ಹಾಡು ಚೇತನ್‍ಕುಮಾರ್ ಲೇಖನಿಯಲ್ಲಿ ಮೂಡಿಬಂದಿದೆ. ಹರಿಕೃಷ್ಣ ಹಾಗೂ ಪಿ.ಕುಮಾರ್ ನಿರ್ದೇಶನದ ಯಜಮಾನ ಚಿತ್ರವನ್ನ ಬಿ. ಸುರೇಶ್ ಹಾಗೂ ಅವರ ಪತ್ನಿ ಶೈಲಜ ನಾಗ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ದರ್ಶನ್‍ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಪೋಸ್ಟರ್ ಗಳ ಮೂಲಕ ನಿರೀಕ್ಷೆಗಳನ್ನು ಹುಟ್ಟಿಹಾಕಿರುವ ಯಜಮಾನ ಸಿನಿಮಾ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಈ ಮೊದಲು ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ದರ್ಶನ್ ಅವರ 50ನೇ ಸಿನಿಮಾ ಅಂತಾ ಹೇಳಲಾಗಿತ್ತು. ಕುರುಕ್ಷೇತ್ರಕ್ಕೂ ಮೊದಲೇ ಯಜಮಾನ ತನ್ನ ಆಟವನ್ನು ಆರಂಭಿಸುವ ಸಾಧ್ಯತೆಗಳು ಹೆಚ್ಚಿವೆ. ಕುರುಕ್ಷೇತ್ರ ಬಹು ಬಜೆಟ್ ಸಿನಿಮಾ ಆಗಿದ್ದು, ಉನ್ನತ ಮಟ್ಟದ ಸಿಜೆಯನ್ನು ಒಳಗೊಂಡಿದೆ. ಹೀಗಾಗಿ ನಿರ್ಮಾಪಕ ಮುನಿರತ್ನ ಅವರು ಪ್ರತಿಯೊಂದು ಕೆಲಸದಲ್ಲಿ ಅಚ್ಚುಕಟ್ಟತೆ ನೋಡುತ್ತಿದ್ದು, ಹಾಗಾಗಿ ಸಿನಿಮಾ ಬಿಡುಗಡೆ ದಿನ ಮುಂದಕ್ಕೆ ಹೋಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *