ಶಿವಮೊಗ್ಗ: ಕಡಿದು ಹಾಕಲು ಉದ್ದೇಶಿಸಿದ್ದ 80ಕ್ಕೂ ಹೆಚ್ಚು ಮರಗಳನ್ನು ಮರು ನೆಡುವ ಮೂಲಕ ಅವುಗಳಿಗೆ ಪುನರ್ಜನ್ಮ ನೀಡಿದ ಅಪರೂಪದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗುತ್ತಿದೆ. ಸ್ಮಾರ್ಟ್ ಸಿಟಿಗೆ 24 ಗಂಟೆಯೂ ನೀರು ಸರಬರಾಜು ಮಾಡಲು ನೂತನ ಪೈಪ್ ಲೈನ್ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಬಸ್ ನಿಲ್ದಾಣದಿಂದ ಐಬಿ ಸರ್ಕಲ್ ವರೆಗೆ ನೆಟ್ಟಿದ್ದ ನಾಲ್ಕೈದು ವರ್ಷದ 10-15 ಅಡಿ ಎತ್ತರ ಬೆಳೆದು ನಿಂತಿದ್ದ ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು. ಆದರೆ ಶಿವಮೊಗ್ಗದ ಅರಣ್ಯ ಇಲಾಖೆ ಹಾಗೂ ಪರಿಸರ ಸಂಘಟನೆಗಳು ಒಟ್ಟಾಗಿ ಮರಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿ ಈ ಕಾರ್ಯ ಮಾಡಿದ್ದಾರೆ.
ರಾಜ್ಯದಲ್ಲಿ ಜೆಸಿಬಿ ಮೂಲಕ 80 ಮರಗಳನ್ನು ನೆಟ್ಟ ಉದಾಹರಣೆಯೇ ಎಲ್ಲೂ ಇಲ್ಲ. ಅರಣ್ಯ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ಉತ್ತಿಷ್ಠ ಭಾರತ, ಸ್ವಾಭಿಮಾನ ಆಂದೋಲನ ಮತ್ತು ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಕೈಜೋಡಿಸಿದ್ದಾರೆ.
ರಸ್ತೆ ಪಕ್ಕ ಕೊಡಲಿ ಏಟಿಗೆ ಸಿಗಬೇಕಿದ್ದ ಮರಗಳನ್ನು ಮೆಗ್ಗಾನ್ ಆಸ್ಪತ್ರೆ ಆವರಣ ಮತ್ತು ಪೊಲೀಸ್ ಠಾಣೆ ಆವರಣದಲ್ಲಿ ಮರುನೆಡಲಾಗುತ್ತಿದೆ. ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗ ಮಾಡುವಾಗ ಬೃಹತ್ ಯಂತ್ರಗಳನ್ನು ಬಳಸಿ ಮರಗಳನ್ನು ಮರು ನೆಡಲಾಗಿತ್ತು. ಎರಡು ಜೆಸಿಬಿ ಬಳಸಿ 80ಕ್ಕೂ ಹೆಚ್ಚು ಮರಗಳನ್ನು ಮರುನೆಡಲಾಗಿದೆ. ಹಳೆಯ ಮರಗಳನ್ನು ಜೆಸಿಬಿ ಮೂಲಕ ಎತ್ತಿ ಹೇಗೆ ನೆಡುತ್ತಾರೆ ಎಂಬುದರ ವಿಡಿಯೋ ಇಲ್ಲಿದೆ.
https://www.youtube.com/watch?v=163MAqTn6BM
https://www.youtube.com/watch?v=zHk7PvLvx48