ನಿಜಗುಣಾನಂದ ಸ್ವಾಮೀಜಿಯ ನಾಲಿಗೆ ಶುದ್ಧವಿಲ್ಲ: ಬಸವರಾಜದೇವರು ಸ್ವಾಮೀಜಿ ತಿರುಗೇಟು

Public TV
1 Min Read
Nijagunanda Swamiji

ಬಾಗಲಕೋಟೆ: ಮುಂಡರಗಿ ಮಠದ ನಿಜಗುಣಾನಂದ ಸ್ವಾಮೀಜಿಯವರ ನಾಲಿಗೆ ಶುದ್ಧವಿಲ್ಲ. ತಾವು ಉಣ್ಣುವ ಅನ್ನಕ್ಕೆ ಮಹಾದ್ರೋಹ ಮಾಡಿದ್ದಾರೆ ಎಂದು ರೇವಣಸಿದ್ಧೇಶ್ವರ ಮಠದ ಬಸವರಾಜು ಸ್ವಾಮೀಜಿ ವಾಟ್ಸಪ್ ಮೂಲಕ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಮೋಜು ಮಸ್ತಿಗಾಗಿ ಸಾಲ ಮಾಡಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಇಡೀ ರೈತ ಸಮಾಜಕ್ಕೆ ನಿಜಗುಣಾನಂದ ಸ್ವಾಮೀಜಿಯವರಯ ಅವಮಾನ ಮಾಡಿದ್ದಾರೆ. ಆಚಾರಶೀಲರಾಗಿ, ಧಾರ್ಮಿಕ ಮುಖಂಡರಾಗಿ ಈ ರೀತಿ ಮಾತಾಡೋದು ಮಹಾಪರಾಧ ಆಗುತ್ತದೆ ಅಂದ್ರು.

vlcsnap 2018 06 25 11h29m23s119

ಸಾಲಮನ್ನಾ ವಿಚಾರ ರಾಜ್ಯದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದೆ. ರೈತರು, ಮಹಿಳೆಯರ, ಬಡವರ ಕಷ್ಟಗಳ ಬಗ್ಗೆ ಸ್ವಾಮೀಜಿಗಳಿಗೆ ಅರಿವು ಇರಬೇಕಾಗುತ್ತದೆ. ನಿಜಗುಣಾನಂದ ಶ್ರೀಗಳು ಬಸವಧರ್ಮೀಯರು ಆಗಿದ್ದು, ಅವರ ಹೇಳಿಕೆ ಬಸವಧರ್ಮಕ್ಕೆ ವಿರೋಧವಾದದ್ದು ಅಂತಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ನಿಜಗುಣಾನಂದ ಸ್ವಾಮೀಜಿ ಹೇಳಿದ್ದೇನು?:
`ದೇವರು ಬಹಳ ಡೇಂಜರ್ ಅದಾನ. ನಾಲ್ಕು ಪ್ಯಾಂಟ್-ಶರ್ಟ್, 1 ರೊಟ್ಟಿ, ಒಂದಿಷ್ಟು ಲೋಟಾ ಹಾಲು, ಮಲಗೋಕೆ ಅರ್ಧ ಮಂಚ ಈ ಕಡೆ ತಿರುಗಿದ್ರೆ ಆ ಕಡೆಯಿಲ್ಲ ಎಲ್ಲಾ ದೇವರು ಕೊಟ್ಟಿದ್ದಾನೆ. 60 ವರ್ಷ ಆದ್ಮೇಲೆ ಶುಗರ್, ಬಿಪಿ ಬರುತ್ತೆ. ರೈತ ನಿನಗೆ ಸಾಲ ಯಾಕೆ ಬಂತು? ಇಸ್ಪೀಟ್ ಆಡೋದ್ರಿಂದ ಸಾಲ ಬಂತು, ವ್ಯಸನದಿಂದ ಸಾಲ ಬಂತು, ದೊಡ್ಡಸ್ಥನದಿಂದ ಸಾಲು ಬಂತು. ನಿನ್ನ ಸುಖಕ್ಕಾಗಿ ನೀನು ಸಾಲ ಮಾಡಿ ಈಗ ನೀನು ಉರುಳು ಹಾಕೊಂಡ್ರೆ ನಾನೇನು ಮಾಡಲಿ. ಅಷ್ಟೆ ಅಲ್ಲದೆ, ದೇವರು ಎಲ್ಲಾ ಕಷ್ಟಕ್ಕೂ ಪರಿಹಾರ ಕೊಡುವುದಾದರೆ ರೈತರ ಸಾಲಮನ್ನಾಕ್ಕೂ ಪರಿಹಾರ ಕೊಡ್ಲಿ ನೋಡೋಣ. ಒಟ್ಟಿನಲ್ಲಿ ಹಿತಮಿತ ಜೀವನವಿರಲಿ ಎಂಬ ಸಲಹೆ ನೀಡಿ ಪರೋಕ್ಷವಾಗಿ ಸಾಲಮನ್ನಾವನ್ನು ವಿರೋಧಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *