ಲೈವ್ ಸೂಸೈಡ್: ಹಾಲು ಕುಡ್ದ ಮಕ್ಕಳೇ ಬದುಕಲ್ಲ ಎಂದು ಹಾಡಿ ಕಂಠಪೂರ್ತಿ ಕುಡಿದು ನದಿಗೆ ಹಾರಿದ

Public TV
1 Min Read
UDP SUICIDE

ಉಡುಪಿ: ಹಾಲು ಕುಡ್ದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಕುಡ್ದೋರ್ ಉಳಿತಾರಾ… ಎಂಬ ಸಾಂಗ್ ಹಾಡಿಕೊಂಡು ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ರೈಲ್ವೆ ಬ್ರಿಡ್ಜ್ ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಕ್ಕುಂಜೆಯ ಪೆರಂಪಳ್ಳಿ ರೈಲ್ವೆ ಸೇತುವೆ ಬಳಿ ನಡೆದಿದೆ.

ಹುಬ್ಬಳ್ಳಿ ಮೂಲದ ಕಾಪು ನಿವಾಸಿ ಸಾದಿಕ್, ಎಣ್ಣೆ ಹಾಡು ಹಾಡುತ್ತಲೇ ಸ್ವರ್ಣ ನದಿಗೆ ಜಿಗಿದು ಕುಡಿದ ಮತ್ತಿನಲ್ಲಿ ಈಜಲಾಗದೇ ಸಾವನ್ನಪ್ಪಿದ ಯುವಕ.

UDP SUICIDE 1

ಪೆರಂಪಳ್ಳಿ ರೈಲ್ವೇ ಪಟ್ಟಿಯ ಕೆಳಗೆ ಇರುವ ಪಿಲ್ಲರ್ ನ ಮೇಲೆ ಯುವಕರ ತಂಡವೊಂದು ಕುಳಿತು ಪಾರ್ಟಿ ಮಾಡುತ್ತಿದ್ದರು. ಮನಸೋ ಇಚ್ಛೆ ಬಂದಂತೆ ಕುಡಿದು ಮೋಜು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಾದಿಕ್ ಎಂಬ ಯುವಕ ಕಂಠಪೂರ್ತಿ ಕುಡಿದು ಹಾಲು ಕುಡ್ದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಕುಡ್ದೋರ್ ಉಳಿತಾರಾ ಎಂಬ ಹಾಡು ಹಾಡ್ತಾ ಹಾಡ್ತಾ ನೋಡ ನೋಡುತ್ತಿದ್ದಂತೆ ಸ್ವರ್ಣ ನದಿಗೆ ಜಿಗಿದಿದ್ದಾನೆ.

ಸಾದಿಕ್‍ನನ್ನು ರಕ್ಷಿಸಲು ಜೊತೆಗಿದ್ದ ಸಿಯಾನ್ ಎಂಬ ಯುವಕ ತಕ್ಷಣ ನದಿಗೆ ಹಾರಿದ್ದಾನೆ. ಆದರೆ ಸಾದಿಕ್‍ನನ್ನು ರಕ್ಷಿಸಲು ಸಾಧ್ಯವಾಗದೇ ಅಸ್ವಸ್ಥಗೊಂಡಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಗೆಳೆಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

UDP SUICIDE 16

ಈ ಸಂಬಂಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯುವಕರ ಮೋಜುಮಸ್ತಿ ಮಿತಿ ಮೀರಿದ್ದು, ಕುಡಿತ ಮತ್ತು ಗಾಂಜಾ ಸೇವಿಸಲು ಬಂದಿರಬಹುದು ಎಂದು ಶಂಕಿಸಲಾಗಿದೆ. ಅಷ್ಟೇ ಅಲ್ಲದೇ ಸಾದಿಕ್ ನದಿಗೆ ಹಾರುವ ಮೊದಲು ಹಗ್ಗಕಟ್ಟಿ ಸೇತುವೆಯಿಂದ ಕೆಳಗಿಳಿಯುವ ಯೋಚನೆಯನ್ನು ಕೂಡ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

UDP SUICIDE 24

UDP SUICIDE 23

UDP SUICIDE 22

UDP SUICIDE 17

UDP SUICIDE 15

UDP SUICIDE 14

UDP SUICIDE 13

UDP SUICIDE 10

UDP SUICIDE 8

UDP SUICIDE 7

UDP SUICIDE 6

UDP SUICIDE 5

UDP SUICIDE 4

UDP SUICIDE 2

Share This Article
Leave a Comment

Leave a Reply

Your email address will not be published. Required fields are marked *