ಚಿಕ್ಕಬಳ್ಳಾಪುರ: ಆರ್ಟಿಓ ಇನ್ಸ್ಪೆಕ್ಟರ್ (RTO Inspector) ಒಬ್ಬರು, ತಮ್ಮ ಅಧಿಕಾರ ವ್ಯಾಪ್ತಿಗೆ ಬರದಿದ್ದರೂ ಅನ್ಯ ಜಿಲ್ಲೆಯ ಪೊಲೀಸ್ ಠಾಣೆಗೆ ಸೇರಿದ ವಾಹನವೊಂದಕ್ಕೆ, ಪರಿಶೀಲನಾ ವರದಿ ನೀಡಿದ್ದಾರೆ. ದೇವನಹಳ್ಳಿಯಲ್ಲಿ ಕೆಲಸ ಮಾಡ್ತಿದ್ದು, ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಲ್ಲಿ ತಮ್ಮ ಅಧಿಕಾರ ಚಲಾವಣೆ ಮಾಡಿ ಈಗ ಈಗ ಪೇಚಿಗೆ ಸಿಲುಕಿದ್ದಾರೆ.
KA 40,TB2054 ನಂಬರ್ನ ಟ್ರ್ಯಾಕ್ಟರ್ವೊಂದು ಅಪಘಾತ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಸುಪರ್ಧಿಯಲ್ಲಿತ್ತು. ಇದ್ರಿಂದ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು, ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು KA 40,TB2054 ನಂಬರ್ ನ ಟ್ರ್ಯಾಕ್ಟರ್ ಪರಿಶೀಲನಾ ವರದಿ ನೀಡುವಂತೆ ಮನವಿ ಸಲ್ಲಿಸಿದ್ರು. ಇದನ್ನೂ ಓದಿ: Viral Video | ವಿಷ್ಣುವರ್ಧನ್ಗೆ ಪುಂಡರಿಂದ ಅಪಮಾನ – ವಿದ್ಯಾರ್ಥಿಗಳ ತಪ್ಪಿಗೆ ಪೋಷಕರಿಂದ ಕ್ಷಮೆಯಾಚನೆ
ಆದ್ರೆ ಯಾವುದೆ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯ ಸಾರಿಗೆ ಇಲಾಖೆಗೆ ಸಂಬಂಧವಿಲ್ಲದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಶ್ವೇತಾ, ಆರ್ಟಿಓ ಏಜೆಂಟ್ ರಿಂದ 5 ಸಾವಿರ ರೂಪಾಯಿ ಲಂಚ ಪಡೆದು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಪಘಾತ ವಾಹನಕ್ಕೆ ಪರಿಶೀಲನಾ ವರದಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಾಡಿದ ಎಡವಟ್ಟು ಹೊರಬಂದ ನಂತರ ಈಗ ಕೊಟ್ಟಿರೋ ತಪಾಸಣಾ ವರದಿ ವಾಪಾಸ್ ಕೊಡುವಂತೆ ಗೌರಿಬಿದನೂರು ಪೊಲೀಸರ ಬೆನ್ನು ಬಿದ್ದಿದು, ಈಗ ಪೇಚಿಗೆ ಸಿಲುಕಿದ್ದಾರೆ.

ಇನ್ನೂ ದೇವನಹಳ್ಳಿ ಪೊಲೀಸ್ ಇನ್ಸ್ ಫೆಕ್ಟರ್ ಶ್ವೇತಾ ನೀಡಿದ ವರದಿಯನ್ನೇ ಸ್ವೀಕಾರ ಮಾಡಿರುವ ಗೌರಿಬಿದನೂರು ಪೊಲೀಸರು, ವಾಹನವನ್ನು ಬಿಟ್ಟು ಕಳುಹಿಸಿದ್ರು. ಇನ್ನೂ ಶ್ವೇತಾ ಯಡವಟ್ಟಿನ ದಾಖಲೆಗಳು, ʻಪಬ್ಲಿಕ್ ಟಿವಿʼಗೆ ಲಭ್ಯವಾಗುತ್ತಿದ್ದಂತೆ, ತಾವು ಅನಧಿಕೃತವಾಗಿ ನೀಡಿರುವ ಪರಿಶೀಲನಾ ವರದಿಯನ್ನ ವಾಪಸ್ ಕೊಡುವಂತೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ದುಂಬಾಲು ಬಿದ್ದಿದ್ದಾರೆ. ಇದನ್ನೂ ಓದಿ: ಮೈಸೂರು | ಪೆಟ್ರೋಲ್ ಬಂಕ್ಗೆ ನುಗ್ಗಿ ದರೋಡೆ – ಎದೆ ಝಲ್ ಎನಿಸುತ್ತೆ ವಿಡಿಯೋ
ಮತ್ತೊಂದೆಡೆ ಪೊಲೀಸರು ಬಿಟ್ಟು ಕಳುಹಿಸಿದ ಟ್ರ್ಯಾಕ್ಟರನ್ನು ಮತ್ತೆ ವಾಪಸ್ ತಂದು ಠಾಣೆ ಬಳಿ ನಿಲ್ಲಿಸಿದ್ದಾರೆ. ಇನ್ನೊಂದೆಡೆ ಮತ್ತೆ ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು ಹೊಸದಾಗಿ ಪರಿಶೀಲನಾ ವರದಿ ನೀಡುವಂತೆ ಮನವಿ ಮಾಡಿದ್ದಾರೆ. ಈ ರೀತಿ ಮಾಡಲು ಬರುವುದೆ ಇಲ್ಲ, ಇದನ್ನ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರವುದಾಗಿ ಚಿಕ್ಕಬಳ್ಳಾಪುರ ಆರ್ಟಿಓ ತಿಳಿಸಿದ್ರು.

