Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

Public TV
Last updated: June 26, 2025 5:14 pm
Public TV
Share
4 Min Read
International Space Station 2
SHARE

– ಹ್ಯಾಚ್ ತೆರೆಯುವ ಪ್ರಕ್ರಿಯೆಯ ಹಂತಗಳು ಹೇಗಿರಲಿದೆ?

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಇತಿಹಾಸ ನಿರ್ಮಿಸಿದ್ದಾರೆ. ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಐತಿಹಾಸಿಕ ಕ್ಷಣವನ್ನು ಇಡೀ ಭಾರತವೇ ಕೊಂಡಾಡುತ್ತಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ನ ʻಡ್ರ್ಯಾಗನ್‌ʼ ನೌಕೆ (Dragon Capsule Docks) ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ ಆಗಿದೆ. ಸಂಜೆ 6 ಗಂಟೆ ವೇಳೆಗೆ ಹ್ಯಾಚ್ (ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಪ್ರವೇಶಿಸಲು ತೆರೆಯುವ ಬಾಗಿಲು) ತೆರೆಯಲಿದೆ.

ಬುಧವಾರ (ಜೂ.25) ಮಧ್ಯಾಹ್ನ 12:03ರ ವೇಳೆಗೆ ಉಡಾವಣೆ ಆಗಿದ್ದ ಆಕ್ಸಿಯಂ-4 ನೌಕೆ ಗುರುವಾರ (ಜೂ.26) ಸಂಜೆ 4 ಗಂಟೆ ವೇಳೆಗೆ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ (ಕೂಡಿಸುವುದು) ಆಗಿದೆ. ಕೆಲವು ನಿಮಿಷಗಳಲ್ಲೇ ಡಾಕಿಂಗ್‌ ಮುಂದಿನ ಪ್ರಕ್ರಿಯೆ ಶುರುವಾಗಿದ್ದು, ಸಂಜೆ 6 ಗಂಟೆ ವೇಳೆಗೆ ಹ್ಯಾಚ್‌ ತೆರೆಯಲಿದ್ದು, ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದೊಳಕ್ಕೆ (International Space Station) ಪ್ರವೇಶಿಸಲಿದ್ದಾರೆ.

International Space Station

ಸದ್ಯ ಬಾಹ್ಯಾಕಾಶದಲ್ಲಿ ಸುರಕ್ಷತೆ ಮತ್ತು ಗಾಳಿಯ ವಾತಾವರಣ ನಿರ್ಣಾಯಕವಾಗಿರುವುದರಿಂದ ಡಾಕಿಂಗ್‌ ನಂತರದ ಪ್ರಕ್ರಿಯೆ ಪೂರ್ಣಗೊಳ್ಳಲು 2 ಗಂಟೆಗಳ ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಹ್ಯಾಚ್ ತೆರೆಯುವ ಪ್ರಕ್ರಿಯೆಯ ಹಂತಗಳು:
* ಸಾಫ್ಟ್ ಕ್ಯಾಪ್ಚರ್ (ಡಾಕಿಂಗ್ ಪೂರ್ಣ) – ಮೊದಲಿಗೆ ಡಾಕಿಂಗ್‌ ಪೂರ್ಣಗೊಂಡ ನಂತರ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಸಂಪರ್ಕಗೊಳ್ಳುತ್ತದೆ.
* ಹಾರ್ಡ್ ಮೇಟ್ (ಮೆಕ್ಯಾನಿಕಲ್ ಲಾಚಿಂಗ್) – ಅಂದ್ರೆ ಐಎಸ್‌ಎಸ್‌ ಮತ್ತು ನೌಕೆಯ ನಡುವೆ ಸೀಲ್ ಭದ್ರಪಡಿಸಿಕೊಳ್ಳಲು ಲಾಚ್‌ಗಳು ಮತ್ತು ಹುಕ್ಸ್‌ ಜೋಡಿಸಲಾಗುತ್ತದೆ. ಬಳಿಕ ನೌಕೆಯಲ್ಲಿ ಯಾವುದೇ ರೀತಿಯ ಸೋರಿಕೆಯಾಗುತ್ತಿದೆಯೇ ಅನ್ನೋದನ್ನ ಪರಿಶೀಲಿಸಿಕೊಳ್ಳಲಾಗುತ್ತದೆ.
* ಸುರಕ್ಷಿತ ವಾತಾವರಣ ಖಚಿತಪಡಿಸಿಕೊಳ್ಳಲು ಬಾಹ್ಯಾಕಾಶ ನೌಕೆ ಮತ್ತು ಬಾಹ್ಯಾಕಾಶ ನಿಲ್ದಾಣದ ನಡುವಿನ ಒತ್ತಡವನ್ನು ಸಮೀಕರಿಸಲಾಗುತ್ತದೆ.
* ಸೂಟ್ ಡಾಫಿಂಗ್ ಮತ್ತು ಸಿಸ್ಟಮ್: ಇದೆಲ್ಲ ಮುಗಿದ ಬಳಿಕ ಗಗನಯಾತ್ರಿಗಳು ತಮ್ಮ ಹೆಲ್ಮೆಟ್‌, ಸೂಟ್‌ಗಳನ್ನು ತೆಗೆದುಹಾಕಿ ಎಲ್ಲ ವ್ಯವಸ್ಥೆಗಳು ಸ್ಥಿರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.
* ಇದೆಲ್ಲ ಪ್ರಕ್ರಿಯೆ ಮುಗಿದ ಬಳಿಕ ಹ್ಯಾಚ್‌ ತೆರೆಯಲಾಗುತ್ತದೆ, ಬಳಿಕ ಗಗನಯಾತ್ರಿಗಳು ಅಧಿಕೃತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಧಿಕೃತವಾಗಿ ಪ್ರವೇಶಿಸಲಿದ್ದಾರೆ.

LIVE: @Axiom_Space‘s #Ax4 mission is scheduled to dock with the @Space_Station at approximately 6:30am ET (1030 UTC). Watch with us as the multinational crew starts their two-week stay aboard the orbiting laboratory. https://t.co/NrThYrmRrN

— NASA (@NASA) June 26, 2025

41 ವರ್ಷದ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಬಾಹ್ಯಾಕಾಶವನ್ನು ತಲುಪಿದ 2ನೇ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ. 1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದರು. ಇದಾದ 4 ದಶಕಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ 2ನೇ ಭಾರತೀಯ ಗಗನಯಾತ್ರಿಯಾಗಿದ್ದಾರೆ.

ಗಮನಿಸಬೇಕಾದ ಮುಖ್ಯಾಂಶಗಳು
ನಾಲ್ವರು ಗಗನಯಾನಿಗಳು 14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಇರಲಿದ್ದಾರೆ. ಈ ವೇಳೆ ಗಗನಯಾನಿಗಳು ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಹಾಗೂ ಬಾಹ್ಯಾಕಾಶ ಕ್ಷೇತ್ರದ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ನಡೆಸಲಿದ್ದಾರೆ. ಶುಕ್ಲಾ ಅವರು ಐಎಸ್‌ಎಸ್‌ನಲ್ಲಿ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲಿದ್ದಾರೆ. ಇಸ್ರೋ ಹಾಗೂ ಬಯೊಟೆಕ್ನಾಲಜಿ ಇಲಾಖೆ ಇದಕ್ಕೆ ಸಹಯೋಗ ನೀಡಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

axiom 4 launch shubhanshu shukla

ಬಾಹ್ಯಾಕಾಶದಿಂದ ಭೂಮಿಗೆ ʻಶುಕ್ಲʼ ಸಂದೇಶ
ಇದಕ್ಕೂ ಮುನ್ನ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ತಮ್ಮ ಚೊಚ್ಚಲ ಸುಂದರ ಅನುಭವಗಳನ್ನು ಬಾಹ್ಯಾಕಾಶದಿಂದಲೇ ಹಂಚಿಕೊಂಡಿದ್ದರು. ಡ್ರ್ಯಾಗನ್‌ ಕ್ಯಾಪ್ಸೂಲ್‌ ನೌಕೆಯಲ್ಲಿ ಕೂತು ಮಾತನಾಡಿದ್ದ ಶುಕ್ಲ ಬಾಹ್ಯಾಕಾಶದಿಂದ ನಮಸ್ಕಾರ! ಈ ಅದ್ಭುತ ಸವಾರಿಯಲ್ಲಿ ನಾನು ಒಬ್ಬ ಅನುಭವಿ ಮತ್ತು ಮೂವರು ಹೊಸಬರು ಇದ್ದುದರಿಂದ ನಾನು ಇಲ್ಲಿಗೆ ಬರಲು ತುಂಬಾ ರೋಮಾಂಚನಗೊಂಡಿದ್ದೇನೆ. ಲಾಂಚ್‌ಪ್ಯಾಡ್‌ನಲ್ಲಿ ಕುಳಿತಾಗ, ನಾನು ಯೋಚಿಸುತ್ತಿದ್ದದ್ದು ಹೋಗೋಣ ಎಂದಷ್ಟೇ. 30 ದಿನಗಳ ಕ್ವಾರಂಟೈನ್ ನಂತರ, ನಾನು ಸಿದ್ಧನಾಗಿದ್ದೆ. ಉಡಾವಣೆ ಬೇರೇನೋ ಆಗಿತ್ತು. ನಂತರ ಇದ್ದಕ್ಕಿದ್ದಂತೆ ಮೌನ.. ನಿರ್ವಾತದಲ್ಲಿ ನಾನು ತೇಲುತ್ತಿದ್ದೆ. ಅದು ವರ್ಣನಾತೀತ. ಅದ್ಭುತ, ವಿನಮ್ರ ಭಾವನೆ ಎಂದು ಅನುಭವ ಹಂಚಿಕೊಂಡಿದ್ದರು.

ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದು ಕೇವಲ ನನ್ನ ಸಾಧನೆಯಲ್ಲ, ಇದು ನಮ್ಮ ದೇಶದಲ್ಲಿ ಹಲವಾರು ಜನರು ಹಂಚಿಕೊಂಡ ಸಾಮೂಹಿಕ ಸಾಧನೆ. ನಾನು ಇಲ್ಲಿ ಬಹಳಷ್ಟು ನಿದ್ದೆ ಮಾಡುತ್ತಿದ್ದೇನೆ. ನಾನು ಇನ್ನೂ ಶೂನ್ಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುತ್ತಿದ್ದೇನೆ. ಬಾಹ್ಯಾಕಾಶದಲ್ಲಿ ಹೇಗೆ ನಡೆಯುವುದು, ತಿನ್ನುವುದು ಎಂಬುದನ್ನೆಲ್ಲ ಮಗುವಿನಂತೆ ಕಲಿಯುತ್ತಿದ್ದೇನೆ. ನಾನು ಪ್ರತಿ ಕ್ಷಣವನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ತಪ್ಪುಗಳನ್ನು ಮಾಡುವುದು, ಸರಿ ಮಾಡುವುದು, ವಾಸ್ತವವಾಗಿ ಬೇರೆಯವರು ಸಹ ಅವುಗಳನ್ನು ಮಾಡುವುದನ್ನು ನೋಡುವುದು ಇನ್ನೂ ಹೆಚ್ಚು ಖುಷಿಯಾಗುತ್ತದೆ. ಇಲ್ಲಿಯವರೆಗೆ ಒಂದು ಮೋಜಿನ, ಅವಾಸ್ತವಿಕ ಸಮಯ ಕಳೆದಿದೆ. ಮುಂದೆ ಇನ್ನೂ ಹೆಚ್ಚಿನದು ಇರಲಿದೆ ಎಂದು ನನಗೆ ಖಚಿತವಾಗಿದೆ. ಮುಂದೆ ಏನಾಗುತ್ತದೆ ಎಂದು ಎದುರು ನೋಡುತ್ತಿದ್ದೇನೆ ಎಂದು ಶುಕ್ಲಾ ತಮಗಾದ ಅನುಭವ ಬಿಚ್ಚಿಟ್ಟಿದ್ದರು.

TAGGED:AstronautDragon Capsule DocksInternational Space StationISRONASANASA Axiom-4 Missionಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಇಸ್ರೋನಾಸಾ
Share This Article
Facebook Whatsapp Whatsapp Telegram

Cinema News

kiccha sudeep birthday Bigg Boss promo released
ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌
Cinema Latest Main Post TV Shows
Pushpa Arunkumar Deepika Das
ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್
Cinema Latest Sandalwood
Actresses request for posthumous Karnataka Ratna award for late Dr. Vishnuvardhan Sarojadevi
ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ
Bengaluru City Cinema Karnataka Latest Sandalwood Top Stories
darshan ballari jail 1
ಬಳ್ಳಾರಿಯಿಂದ ಪದೇ ಪದೇ ಕರೆತರಲು ಸಾಧ್ಯವಿಲ್ಲ: ದರ್ಶನ್‌ ಪರ ವಕೀಲ
Cinema Court Latest Main Post
Bharathi vishnuvardhan
ವಿಷ್ಣು ಸ್ಮಾರಕ ವಿಚಾರ – ನಾಳೆ ಸಿಎಂ ಭೇಟಿಯಾಗಲಿರುವ ಭಾರತಿ ವಿಷ್ಣುವರ್ಧನ್
Cinema Karnataka Latest National Sandalwood Top Stories

You Might Also Like

End of BBMP era 500 members to be elected to Greater Bengaluru Authority
Bengaluru City

ಇತಿಹಾಸದ ಪುಟ ಸೇರಿದ ಬಿಬಿಎಂಪಿ – ಜಿಬಿಎಗೆ ಆಯ್ಕೆಯಾಗಲಿದ್ದಾರೆ 500 ಸದಸ್ಯರು

Public TV
By Public TV
23 minutes ago
KC Veerendra Pappi ED Raid
Chitradurga

‘ಕೈ’ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇ.ಡಿ ದಾಳಿ – ಆರು ಐಷಾರಾಮಿ ಕಾರುಗಳು ವಶಕ್ಕೆ

Public TV
By Public TV
25 minutes ago
Koppal Mother death 1
Districts

ಸಂತಾನಹರಣ ಚಿಕಿತ್ಸೆ ವೇಳೆ ತಾಯಿ ಸಾವು – ಅನಸ್ತೇಶಿಯಾ ನೀಡದೇ ಶಸ್ತ್ರಚಿಕಿತ್ಸೆ ಮಾಡಿದ್ದಾಗಿ ಕುಟುಂಬಸ್ಥರ ಆರೋಪ

Public TV
By Public TV
3 hours ago
Bagalkote District Magistrates property seized for not paying compensation to farmers
Bagalkot

ರೈತರಿಗೆ ಪರಿಹಾರ ಹಣ ನೀಡದ ಸರ್ಕಾರ – ಬಾಗಲಕೋಟೆ ಜಿಲ್ಲಾಧಿಕಾರಿಗಳ ವಸ್ತುಗಳು ಜಪ್ತಿ

Public TV
By Public TV
3 hours ago
Chitradurga Croploss
Chitradurga

ಚಿತ್ರದುರ್ಗದಲ್ಲಿ ನಿರಂತರ ಮಳೆಗೆ ಬೆಳೆಹಾನಿ – ಜಮೀನುಗಳಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

Public TV
By Public TV
4 hours ago
Dr Manjunath
Districts

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?