Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘ಪಾದರಾಯ’ ಸಿನಿಮಾ ಹೆಸರಿನಲ್ಲಿ ಹಣದ ದಂಧೆ: ಎಚ್ಚರಿಕೆ ಕೊಟ್ಟ ನಿರ್ದೇಶಕ ಡಿ.ಜೆ.ಚಕ್ರವರ್ತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ‘ಪಾದರಾಯ’ ಸಿನಿಮಾ ಹೆಸರಿನಲ್ಲಿ ಹಣದ ದಂಧೆ: ಎಚ್ಚರಿಕೆ ಕೊಟ್ಟ ನಿರ್ದೇಶಕ ಡಿ.ಜೆ.ಚಕ್ರವರ್ತಿ

Cinema

‘ಪಾದರಾಯ’ ಸಿನಿಮಾ ಹೆಸರಿನಲ್ಲಿ ಹಣದ ದಂಧೆ: ಎಚ್ಚರಿಕೆ ಕೊಟ್ಟ ನಿರ್ದೇಶಕ ಡಿ.ಜೆ.ಚಕ್ರವರ್ತಿ

Public TV
Last updated: February 26, 2023 11:07 am
Public TV
Share
4 Min Read
Padaraya 5
SHARE

ನಾಗಶೇಖರ್ (Nagasekhar) ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ (Chakraborty Chandrachuda) ಕಾಂಬಿನೇಷನ್ ನಲ್ಲಿ ‘ಪಾದರಾಯ’ (Padaraya) ಸಿನಿಮಾ ಮೂಡಿ ಬರಲಿದೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಈ ಸಿನಿಮಾಗೆ ಜಾಕ್ ಮಂಜು (Jack Manju) ಅವರೇ ನಿರ್ಮಾಪಕರು ಎನ್ನಲಾಗಿತ್ತು. ಈ ಸಿನಿಮಾಗಾಗಿ ನಾಗಶೇಖರ್ ಅಂಜನಾದ್ರಿ ಬೆಟ್ಟ ಹತ್ತಿ, ವ್ರತ ಮಾಡಿ ತಯಾರಿ ಆಗುತ್ತಿದ್ದಾರೆ ಎನ್ನುವ ವಿಚಾರವೂ ತಿಳಿದು ಬಂದಿತ್ತು. ಆದರೆ, ಈ ಎಲ್ಲ ಸನ್ನಿವೇಶಗಳು ಬದಲಾದಂತೆ ಕಾಣುತ್ತಿದೆ. ಪಾದರಾಯ ಹೆಸರಿನಲ್ಲಿ ಹಲವರು ಹಣ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಮಾಡಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅದರ ಸಾರಾಂಶ ಹೀಗಿದೆ..

Padaraya 2

ಓವರ್ ಟು ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ..

ನಾಲ್ಕು ತಿಂಗಳ ಹಿಂದೆ “ಪಾದರಾಯ “ಎಂಬ ಶೀರ್ಷಿಕೆ ಅಡಿ ಒಂದು ಸಿನಿಮಾ ಘೋಷಣೆಯಾಯ್ತು.ಇದು ಕೇವಲ ಘೋಷಣೆಯಾಗಿಯೇ ಉಳಿಯಿತು, ಛಾಯಾಗ್ರಹಣ ಸತ್ಯ ಹೆಗಡೆ ಸಂಗೀತ ಅಜನೀಶ್ ಲೋಕನಾಥ್ ಎಡಿಟರ್ ಆಂಟೋನಿ ನಾಯಕಿಯಾಗಿ ತೆಲುಗಿನ ಗಾಯಕಿ ಮಂಗ್ಲಿ, ನಾಯಕ ನಟರಾಗಿ ನಿರ್ದೇಶಕ, ನಟ ನಾಗಶೇಖರ್ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಚಕ್ರವರ್ತಿ ಡಿಜೆ ಎಂಬ ನಾನು ಎಂದು ನಿಕ್ಕಿಯಾಗಿತ್ತು. ಇವಿಷ್ಟೂ ಘೋಷಣೆಯ ಹಂತದಲ್ಲೇ ಉಳಿದವು. ಮೇಲ್ಕಂಡ ಯಾರೊಬ್ಬರಿಗೂ ಈ ಸಿನಿಮಾ ಕುರಿತಂತೆ ಯಾವುದೇ ಒಪ್ಪಂದಗಳಾಗಲಿ. ಹಣಕಾಸಿನ ಮುಂಗಡವಾಗಲಿ ನಿರ್ದೇಶಕನಾದ ನನ್ನ ಅರಿವಿಗೆ ಬಂದಂತೆ ಆಗಿರುವುದಿಲ್ಲ. ಈ ನಡುವೆ ನಾಗಶೇಖರ್ ಹಾಗೂ ಜಾಕ್ ಮಂಜು ಅವರು ನಿರ್ಮಾಪಕರೆಂದು ಹೇಳಲಾಗಿತ್ತು. ಅಲ್ಲದೇ ಎರಡೂವರೆ ತಿಂಗಳ ಹಿಂದೆಯೇ ನಿರ್ಮಾಪಕರಾದ ಜಾಕ್ ಮಂಜು ಅವರು ನಾನು ಈ ಸಿನಿಮಾ ನಿರ್ಮಿಸುತ್ತಿಲ್ಲವೆಂದು ಮೌಖಿಕವಾಗಿ ಅವರ ಜೆಪಿ ನಗರದ ಕಛೇರಿಯಲ್ಲಿ ನನಗೂ ಹಾಗೂ ನಾಗಶೇಖರ್ ಅವರಿಗೂ ವ್ಯವಹಾರಿಕ ಕಾರಣಗಳ ನೀಡಿ  ಸ್ಪಷ್ಟಪಡಿಸಿದರು.

Padaraya 3

ಈ ನಡುವೆ ನಿರ್ಮಾಪಕ – ನಿರ್ದೇಶಕರಾದ ಆರ್.ಚಂದ್ರು ಅವರು ನಿರ್ಮಾಣ ಮಾಡುತ್ತೇನೆಂದು ಮೌಖಿಕವಾಗಿ ಹೇಳಿದರಾದರೂ ಯಾವುದೇ ಒಪ್ಪಂದ ಮಾಡಿಕೊಂಡಿರುವುದಿಲ್ಲ. ರಚನೆಕಾರ ನಿರ್ದೇಶಕನಾದ ನನಗೆ ಈವರೆಗೂ ಈ ಮೇಲ್ಕಂಡ ಯಾವುದೇ ತಂತ್ರಜ್ಞರು, ನಿರ್ಮಾಪಕರಿಂದ ಯಾವುದೇ ಒಪ್ಪಂದ ಪತ್ರ, ಮುಂಗಡ ಹಣ, ಸಿನಿಮಾ ತಯಾರಿ ಯಾವುದರ ಕುರಿತಾಗಿ ಯಾವೊಂದು ವಿಷಯವೂ ನಡೆದಿರುವುದಿಲ್ಲ. ಈ ನಡುವೆ ಸಿನಿಮಾಗೆ ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ನಾಗಶೇಖರ್ ಅವರಿಗೆ ಅವರ ವೈಯಕ್ತಿಕವಾಗಿ ಎರಡೂ ಲಕ್ಷದ ನಲವತ್ತು ಸಾವಿರ ರುಪಾಯಿ ಹಣ ಕೊಟ್ಟಿರುವ ದಾಖಲಾತಿ ಹಿಡಿದುಕೊಂಡು ನಾನೇ ಈ ಸಿನಿಮಾದ ನಿರ್ಮಾಪಕ. ಆರ್ ಚಂದ್ರು ಅವರಿಂದ ನಾಗಶೇಖರ್ ಗೆ ಐದುಕೋಟಿ ರುಪಾಯಿ ಹಣದ ಒಪ್ಪಂದ ಈ ಸಿನಿಮಾದ ಕಥೆಯ ಮೇಲಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ.

Padaraya 1

ಅಲ್ಲದೇ ನಾಗಶೇಖರ್ ಅವರು ಆಡಿಯೋ ರೈಟ್ಸ್ ಮಾರಾಟ ಮಾಡಿದ್ದಾರೆ. ಯಾರೂ ಈ ಸಿನಿಮಾ ಮಾಡಬೇಡಿ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಓರ್ವ ನಿರ್ದೇಶಕನ ಗಮನಕ್ಕೇ ಬಾರದೇ ಆಡಿಯೋ ರೈಟ್ಸ್ ಮಾರಾಟ, ಐದು ಕೋಟಿ ಒಪ್ಪಂದ ಅಥವಾ ಯಾವುದೇ ಹಣದ ವ್ಯವಹಾರ ಮಾಡುವುದು ಅಕ್ಷಮ್ಯ ಅಪರಾಧ. ಈ ಕುರಿತು ವಿಚಾರಿಸಲಾಗಿ ಈ ಬಗೆಯ ಪ್ರಯತ್ನಗಳು ನಡೆಯಿತು. ಆದರೆ ಸಫಲವಾಗಿಲ್ಲವೆಂದು ತಿಳಿದು ಬಂತು. ಈ ಕಥೆಯನ್ನೂ ನಾನು ಚಿತ್ರಕಥೆಯ ಸಹಿತ 2019 ರಲ್ಲೇ the cinematograph act 1952 ಪ್ರಕಾರ ನೊಂದಾಯಿಸಿ ಸಮಸ್ತ ದಾಖಲಾತಿ ಮಾಡಿಟ್ಟಿದ್ದೆ. (ನನ್ನ ಪುಣ್ಯ ) ಈ ಕಥೆ ಅಂಜನಾದ್ರಿ ಸುತ್ತಮುತ್ತಲಿನ ಭಾಗದ ಚಪ್ಪಲಿ ಕಳ್ಳ ಮತ್ತವನ ಹೆಂಡತಿಯ ಕಥೆಯಾಗಿರುತ್ತದೆ. ಇದನ್ನು ರೂಪಿಸಲು ಮೂರೂವರೆ ವರ್ಷದಲ್ಲಿ ಏಳು ರಾಜ್ಯ ಸುತ್ತಿದ್ದೇನೆ. ಹಲವಾರು ಗ್ರಂಥ ಓದಿದ್ದೇನೆ. ನನ್ನ ಹಣ, ಬೆವರು, ಹಸಿವು ಕಟ್ಟಿ ಕನಸುಗಣ್ಣುಗಳಿಂದ ಬರೆದಿಟ್ಟುಕೊಂಡಿದ್ದೇನೆ. ಹೊಟ್ಟೆಗೆ ಸಿನಿಮಾ ಸೆಟ್ ನ ಇಡ್ಲಿಯೋ ಅನ್ನವನ್ನೊ ತಿಂದಿರುವ ಯಾವೊಬ್ಬ ವ್ಯಕ್ತಿಯೂ ಕಂಡವರ ಕಣ್ಣಿಂದ ಉದುರಿದ ಕನಸುಗಳನ್ನು ಕಣ್ಣೀರಾಗಿಸುವುದಿಲ್ಲ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ

Padaraya 4

ಈ ಕಥೆ ಮತ್ತು ಸಿನಿಮಾದ ಹಕ್ಕು ಸಂಪೂರ್ಣ ಡಿ ಜೆ ಚಕ್ರವರ್ತಿ (ಚಂದ್ರಚೂಡ್ ) ಎಂಬ ನನ್ನದೇ ಆಗಿರುತ್ತದೆ. ಯಾರಾದರೂ ಈ ವಿಷಯದಲ್ಲಿ ಯಾರಿಗೇ ಹಣಕೊಟ್ಟಿದ್ದರೂ ನಾನು ಹೊಣೆಯಲ್ಲ. ನಾನು ಮುಂದಿನ ದಿನಗಳಲ್ಲಿ ಪಾದರಾಯ ಎಂದು ನಾಮಕರಣ ಮಾಡಿದ ಈ ಚಿತ್ರವನ್ನು ನಾನೇ ನಟಿಸಿ ನಿರ್ದೇಶಿಸಲಿದ್ದೇನೆ ಅಥವಾ ನನ್ನ ವಿವೇಚನೆಗೆ ತಕ್ಕಂತಹ ತಂಡದೊಂದಿಗೆ ಮಾಡಬಹುದು. ಈ ಕುರಿತಾಗಿ ದೂರವಾಣಿ ಸಂಭಾಷಣೆಯ ಮುಖಾಂತರ ಆರ್.ಚಂದ್ರು ಅವರಲ್ಲಿ ಚರ್ಚಿಸಲಾಗಿ ನಾನು ನಾಗಶೇಖರ್ ಅವರಿಗೆ ಯಾವುದೇ ಮಾತುಕೊಟ್ಟಿಲ್ಲ. ಐದು ಕೋಟಿ ಕೊಟ್ಟು ಸಿನಿಮಾ ಮಾಡುತ್ತೇನೆಂದು ಯಾವುದೇ ರೀತಿಯಲ್ಲಿ ಮುಂದಾಗಿಲ್ಲವೆಂದು ಸ್ಪಷ್ಟನೆ ಕೊಟ್ಟಿರುತ್ತಾರೆ.

kabzaa 4 1

ಕೆಲವು ದುಷ್ಕರ್ಮಿಗಳು ವಿಕೃತರು ಈ ಕಥೆಯನ್ನೇ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ನಾನು ಕಥೆಯನ್ನು ನಿರ್ಮಾಪಕರಿಗೆ ತಂತ್ರಜ್ಞರಿಗೆ ಚರ್ಚೆಯಲ್ಲಿ ರೀಡಿಂಗ್ ಕೊಡುವ ಧ್ವನಿ ಮುದ್ರಿಸಿ ಹೊರತಂದು ಸಿನಿಮಾ -ಮಾನವೀಯತೆಗೆ ದ್ರೋಹ ಬಗೆಯುವ ಪ್ರಯತ್ನ ಪಡುವುದೂ ಗಮನಕ್ಕೆ ಬಂದಿದೆ, ಅಂಥದ್ದೇನಾದರೂ ಕಂಡು ಬಂದರೆ ಉಗ್ರ ಕಾನೂನು ಕ್ರಮಕ್ಕೂ ಮುಂದಾಗಲು ಈಗಾಗಲೇ ಸರ್ವ ತಯಾರಿ ನಡೆದಿದೆ. ಈ ಕುರಿತಾಗಿ ಯಾರೂ ಯಾವುದೇ ಹಣಕಾಸಿನ ವ್ಯವಹಾರಗಳನ್ನು ಮಾಡಿ ತೊಂದರೆಗೀಡಾಗಬಾರದೆಂದು ಮತ್ತು ಈ ಬಗೆಯ ಪ್ರಯತ್ನಗಳು ನಡೆದರೆ ನನ್ನ ಗಮನಕ್ಕೆ ತರಲು ವಿನಂತಿಸುತ್ತೇನೆ.

TAGGED:Chakraborty ChandrachudaControversyjack manjuMangliNagasekharPadarayaಚಕ್ರವರ್ತಿ ಚಂದ್ರಚೂಡಜಾಕ್ ಮಂಜುನಾಗಶೇಖರ್ಪಾದರಾಯಮಂಗ್ಲಿವಿವಾದ
Share This Article
Facebook Whatsapp Whatsapp Telegram

Cinema news

Alpha Trailor Srimurali
ಅಲ್ಫಾ ಟ್ರೈಲರ್ ಮೆಚ್ಚಿ ಪ್ರಶಂಸಿಸಿದ ನಟ ಶ್ರೀಮುರಳಿ
Cinema Latest Top Stories
CHANDRACHUD
ಅಸಂವಿಧಾನಿಕ ಪದಬಳಕೆ ಆರೋಪ – ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಎಫ್ಐಆರ್
Bengaluru City Cinema Crime Karnataka Latest Sandalwood Top Stories
santosh kumar sukhibhava movie
‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್
Cinema Latest Sandalwood Top Stories
Bengaluru International Film Festival
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ ಚಿತ್ರಕ್ಕೆ ಪ್ರಶಸ್ತಿ ಗರಿ
Bengaluru City Cinema Karnataka Latest Sandalwood States Top Stories

You Might Also Like

entrepreneur Dhruv Dutt Sharma
Crime

500 ಕೋಟಿ ರೂ. ವಂಚನೆ ಕೇಸ್‌; 32ನೇ ಅವೆನ್ಯೂ ಸಿಇಒ ಬಂಧನ

Public TV
By Public TV
16 minutes ago
Namma Metro Greenline
Bengaluru City

ಮೆಟ್ರೋ ಟಿಕೆಟ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ ಭೀತಿ – ಪೊಲೀಸರ ಮೊರೆ ಹೋದ ಬಿಎಂಆರ್‌ಸಿಎಲ್‌

Public TV
By Public TV
43 minutes ago
Farm Pond
Latest

ಕೃಷಿ ಹೊಂಡದಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

Public TV
By Public TV
1 hour ago
suchitra kamalakar bhat case
Crime

ಗಂಡನಿಲ್ಲದ ವೇಳೆ ಜಮೀನ್ದಾರ್‌ಗೆ ಸುಚಿತ್ರಾ ಬುಲಾವ್; ಕಲಬುರಗಿ ಜಮೀನ್ದಾರ ಜೊತೆ 3 ವರ್ಷ ಲವ್ವಿ-ಡವ್ವಿ

Public TV
By Public TV
2 hours ago
Crime 3
Crime

6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ

Public TV
By Public TV
2 hours ago
Sandalwood Farmer protest against government in Chikkamagaluru Tarikere
Chikkamagaluru

ಬದುಕಿದ್ದಾಗಲೇ ವೈಕುಂಠ ಸಮಾರಾಧನೆಗೆ ಅಧಿಕಾರಿಗಳಿಗೆ ಆಹ್ವಾನ – ಶ್ರೀಗಂಧ ಬೆಳೆಗಾರನ ವಿನೂತನ ಪ್ರತಿಭಟನೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?