ಕಲಾವಿದರು ದೇವರಲ್ಲ: ಅಪ್ಪು ಅಭಿಮಾನಿಯ ನಡೆಗೆ ಬೇಸರಿಸಿಕೊಂಡ ಪ್ರಥಮ್

Public TV
2 Min Read
FotoJet 68

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ (Hospet) ಅಪ್ಪು ಹುಡುಗರು ಡಾ.ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿ ಬಳಗದ ವತಿಯಿಂದ ‘ಅಪ್ಪು ದೇವರ ಮಾಲೆ ವ್ರತ’ ಆಚರಣೆಯನ್ನು ಮಾಡಲಾಗುತ್ತಿದೆ. ಅಯ್ಯಪ್ಪ ಸ್ವಾಮಿಗೆ ವ್ರತ ಆಚರಿಸುವಂತೆ, ಅಪ್ಪು ದೇವರ ಮಾಲೆ ವ್ರತದಲ್ಲೂ ಹಲವು ನಿಯಮಗಳನ್ನು ಮತ್ತು ಆಚರಣೆಯ ಮಾಡುವ ವಿಧಾನದ ಕುರಿತು ಬಳಗವು ಪೋಸ್ಟರ್ ಪ್ರಿಂಟ್ ಮಾಡಿದೆ. ಈ ಕುರಿತು ಬಿಗ್ ಬಾಸ್ ವಿನ್ನರ್ ಪ್ರಥಮ್ (Pratham) ಕಿಡಿಕಾರಿದ್ದಾರೆ. ಕಲಾವಿದರನ್ನು ದೇವರು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

FotoJet 1 48

ಅಪ್ಪು ದೇವರ ಮಾಲೆ ಧರಿಸಿ ವ್ರತ ಆಚರಣೆ ಮಾಡುವವರು ಹತ್ತು ಹಲವು ನಿಯಮಗಳನ್ನು ಪಾಲಿಸಬೇಕು ಎನ್ನುವುದು ಪೋಸ್ಟರ್ ನಲ್ಲಿ ತಿಳಿಸಲಾಗಿದೆ. ಪೋಸ್ಟರ್ ನಲ್ಲಿರುವ ವಿಧಾನಕ್ಕೂ ಮತ್ತು ಅಯ್ಯಪ್ಪ ಮಾಲೆ (Ayyappa Male) ಹಾಕುವವರು ಆಚರಿಸುವ ನಿಯಮಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ. ಹಾಗಾಗಿ ಪ್ರಥಮ್ ಬೇಸರಿಸಿಕೊಂಡಿದ್ದಾರೆ. ‘ದೇವರ ಮೇಲೆ ಭಕ್ತಿ ಇರಲಿ. ಕಲಾವಿದರ ಮೇಲೆ ಪ್ರೀತಿ, ಅಭಿಮಾನವಿರಲಿ. ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ. ಬಹಳ ಶಿಸ್ತುಗಳನ್ನು ಪಾಲಿಸಿ, ಶ್ರದ್ಧಾ ಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು. ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ. ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

e0b2a7e0b2bee0b2b0e0b 2

ಪ್ರಥಮ್ ಮಾತಿಗೆ ಕೆಲವರು ಬೆಂಬಲ ಸೂಚಿಸಿದ್ದೂ, ಇನ್ನೂ ಕೆಲವರು ವಿರೋಧಿಸಿದ್ದಾರೆ. ನಮ್ಮ ಪಾಲಿಗೆ ಪುನೀತ್ ಅವರೇ ದೇವರು. ಹಾಗಾಗಿ ನಾವು ವ್ರತ ಮಾಡುತ್ತೇವೆ. ಕೇಳುವುದಕ್ಕೆ ನೀನ್ಯಾರು? ಅಂದವರೂ ಇದ್ದಾರೆ. ವ್ರತ ಆಚರಿಸಿದರೆ ಇದರಲ್ಲಿ ಧಾರ್ಮಿಕ ನಂಬಿಕೆಯ ಅತಿರೇಕ ಹೇಗೆ ಆಗುತ್ತದೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಈ ಕುರಿತು ಆರೋಗ್ಯಕರ ಚರ್ಚೆಯಂತೂ ಸೋಷಿಯಲ್ ಮೀಡಿಯಾದಲ್ಲಿ ನಡೆದಿದೆ. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

e0b2aae0b382e0b29ce0b

ಚರ್ಚೆಗಳು ಏನೇ ನಡೆದರೂ, ಮಾರ್ಚ್ 1 ರಿಂದ ಮಾರ್ಚ್ 17ರ ತನಕ ಈ ಆಚರಣೆಯನ್ನು ಮಾಡಲು ಪುನೀತ್ ಅಭಿಮಾನಿಗಳು ತಯಾರಾಗಿದ್ದಾರೆ. ಹೊಸಪೇಟೆಯ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ಮಾಲೆ ಧರಿಸುವುದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *