ಬೆಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪೆದ್ದ್ ತಾಂಕಿದಿನ ಅಪ್ಪೆ ಲೆಕ ಮಟ್ಟೆಲ್ ಡ್ ಮಾನಾಯಿನ ಅಪ್ಪೆ ಬಾಸೆಗ್ ರಾಜ್ಯ ಬಾಸೆದ ಮಾನಾದಿಗೆ ತಿಕ್ಕೊಡು ಪನ್ಪಿನ ಪೊರಂಬಾಟಗ್ ಎನ್ನ ಬೆರಿಸಾಯ ಉಂಡು. ತುಲು ಬಾಸೆನ್ 8ನೇ ಪರಿಚ್ಛೇದಗ್ ಸೇರ್ಪಾವರೆ ಸರಕಾದೊಟ್ಟುಗು ಪಾತೆರಕತೆ ಆವೊಂದುಂಡು.(1)#TuluofficialinKA_KL #ತುಳುನಾಡು #ತುಳುಭಾಷೆ #TuluTo8thSchedule
— Nalinkumar Kateel (@nalinkateel) June 13, 2021
ಈ ವಿಚಾರವಾಗಿ ತುಳುವಿನಲ್ಲಿ ಟ್ವೀಟ್ ಮಾಡಿದ ಅವರು ನನ್ನ ಮಾತೃ ಭಾಷೆಗೆ ರಾಜ್ಯ ಭಾಷೆ ಸಂಬಂಧ ನಡೆಯುವ ಆಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆಯಿನಾತ್ ಬೇಗ ಮಲ್ಪೋಡು ಪನ್ಪಿನ ಎಂಕ್ಲೆನ ಒತ್ತಾಯ..ಜೈ ತುಳುನಾಡು
— Ravidas Gowda (@RavidasT1) June 13, 2021
ಕಟೀಲ್ ಟ್ವೀಟ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಮಾತಿನಲ್ಲಿ ಮಾತ್ರ ಈ ಹೇಳಿಕೆ ಬರುತ್ತಿದೆ. ಕೃತಿಯಲ್ಲಿ ಯಾವಾಗ ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಗೆ ಧರ್ಮಾಧಿಕಾರಿ ಮನವಿ
ನಮ್ಮ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಮಾಡಬೇಕಾದುದನ್ನು ಪ್ರತಿ ಬಾರಿಯೂ ಟ್ವೀಟರಿನಲ್ಲಿ ನಮ್ಮ ಹಾಗೆ ಮನವಿ ಮಾಡುವುದಾದರೆ ಅಧಿವೇಶನದಲ್ಲಿ ತುಳುವಿಗಾಗಿ ಧ್ವನಿ ಎತ್ತುವವರು ಯಾರು?#TuluOfficialinKA_KL @nalinkateel @vedavyasbjp @URajeshNaik @HPoonja @RaghupathiBhat @karkalasunil @KotasBJP @BSYBJP
— Charanraj Poojary (@CharanrajPooja9) June 13, 2021
ನಮ್ಮ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಮಾಡಬೇಕಾದುದನ್ನು ಪ್ರತಿ ಬಾರಿಯೂ ಟ್ವಿಟ್ಟರಿನಲ್ಲಿ ನಮ್ಮ ಹಾಗೆ ಮನವಿ ಮಾಡುವುದಾದರೆ ಅಧಿವೇಶನದಲ್ಲಿ ತುಳುವಿಗಾಗಿ ಧ್ವನಿ ಎತ್ತುವವರು ಯಾರು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.