ಬೆಂಗಳೂರು: ಬಿಜೆಪಿಯಲ್ಲಿ ನಾಯಕತ್ವ ಗೊಂದಲ ವಿಚಾರದ ಬೆನ್ನಲ್ಲೇ ಬೇರೆ ಬೇರೆ ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ. ಕಳೆದ ಭಾನುವಾರವಷ್ಟೇ ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ನೀಡಲು ಸಿದ್ಧ ಎಂದು ಬಿಎಸ್ ವೈ ಸ್ಫೋಟಕ ಹೇಳಿಕೆ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿವೆ. ಈಗ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮಠಗಳಿಗೆ ಭೇಟಿ ಕೊಡ್ತಿರುವ ವಿಚಾರಕ್ಕೆ ರೆಕ್ಕೆಪುಕ್ಕ ಹರಡಿಕೊಂಡಿವೆ.
- Advertisement 2
ಮಠಗಳ ಯಾತ್ರೆ ಮುಂದುವರಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಆದಿಚುಂಚನಗಿರಿ ಮಠ, ಸಿದ್ದಗಂಗಾಮಠ, ಮುರುಘಾ ಮಠ, ಸಿರಿಗೆರೆ ಮಠ ಸೇರಿದಂತೆ ಹಲವು ಮಠಗಳಿಗೆ ಭೇಟಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಸ್ವಾಮೀಜಿಗಳ ಜೊತೆ ಕುಳಿತು ಚರ್ಚಿಸಿ ಭೋಜನ ಸೇವನೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗ್ತಿದೆ. ಇದನ್ನೂ ಓದಿ: ಮಠಾಧೀಶರಿಗೆ ಬಿಜೆಪಿ ಸಚಿವರು ಲ್ಯಾಪ್ಟಾಪ್ ತೋರಿಸಿದ್ದಾರೆ: ಡಿಕೆಶಿ
- Advertisement 3
- Advertisement 4
ಈ ನಡುವೆ ಬಿಸ್ವೈಗೆ ಶ್ರೀ ರಕ್ಷೆಗೆ ಮಠಾಧೀಶರು ಇದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಜಯೇಂದ್ರ, ಬಿಎಸ್ ವೈ ಅಭಿಮಾನಿಗಳಿಂದ ಪೋಸ್ಟರ್ ಹಾಕಿದ್ದಾರೆ. ಮಠಾಧೀಶರು, ಮತದಾರರ ಆಶೀರ್ವಾದಗಳೇ ಬಿಎಸ್ ವೈಗೆ ಶ್ರೀರಕ್ಷೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಅಬ್ಬರ ಜೋರಾಗಿಯೇ ಇದೆ.
ಯಡಿಯೂರಪ್ಪನವರನ್ನ ಪದಚ್ಯುತಿಗೊಳಿಸಲು ಹುನ್ನಾರ ನಡೆಸುತ್ತಿರುವವರಿಗೆ ಸದ್ಬುದ್ಧಿ ಕೊಡಲಿ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಇದರ ಜೊತೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಫೇಸ್ ಬುಕ್ ನಲ್ಲಿ ವಿಜಯೇಂದ್ರ ಮಠಾಧೀಶರ ಭೇಟಿ ಫೋಟೋಗಳನ್ನು ಹಾಕಿ ಏನನ್ನೂ ಹೇಳದೇ ಕುತೂಹಲ ಹುಟ್ಟಿಸಿದ್ದಾರೆ.