ಲಕ್ನೋ: ವರ ತಾಳಿ ಕಟ್ಟುವಾಗಲೇ ವಧು ಸಾವನ್ನಪ್ಪಿದ್ದಾಳೆ. ಅದೇ ಮುಹೂರ್ತದಲ್ಲಿ ವರ ವಧುವಿನ ತಂಗಿಗೆ ತಾಳಿ ಕಟ್ಟಿರುವ ಘಟನೆ ಉತ್ತರ ಪ್ರದೇಶದ ಇಟವಾ ಜಿಲ್ಲೆಯ ಸನಾದ್ಪುರದಲ್ಲಿ ನಡೆದಿದೆ. ಇದನ್ನೂ ಓದಿ: ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್
- Advertisement 2
ಸನಾದ್ಪುರದ ನಿವಾಸಿ ಮನೋಜ್ ಕುಮಾರ್ ಎನ್ನುವ ವರನಿಗೆ ಸುರಭಿ ಎನ್ನುವ ಹುಡುಗಿಯ ಜೊತೆ ವಿವಾಹ ನಿಶ್ಚಯವಾಗಿತ್ತು, ಹೂ ಮಾಲೆ ಹಾಕಿದ ನಂತರ ಇದ್ದಕ್ಕಿದ್ದಂತೆ ಸುರಭಿ ಕುಸಿದು ಬಿದ್ದಳು. ತಕ್ಷಣ ವೈದ್ಯಕೀಯ ಚಿಕಿತ್ಸೆ ಮಾಡಲಾಯಿತು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಸುರಭಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಯಿಯ ಶವದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಗ
- Advertisement 3
- Advertisement 4
ವಿವಾಹದ ಒತ್ತಡದ ಕಾರಣ ಸುರಭಿಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದರು. ವಧು ಮೃತಪಟ್ಟ ಕಾರಣ ವಿವಾಹವನ್ನು ನಿಲ್ಲಿಸಬೇಕೇ, ಬೇಡವೇ ಎನ್ನುವ ಚರ್ಚೆ ಆರಂಭವಾಯಿತು. ಕೊನೆಗೆ ವಧುವಿನ ತಂಗಿಯನ್ನು ವರನಿಗೆ ಮದುವೆ ಮಾಡಿಕೊಡುವ ಮೂಲಕ ಈ ವಿವಾಹವನ್ನು ನಿಲ್ಲಿಸದೆ ಮುಂದುವರಿಸುವ ನಿರ್ಣಯಕ್ಕೆ ಎರಡೂ ಕಡೆಯ ಹಿರಿಯರು ನಿರ್ಧಾರ ಮಾಡಿದರು. ಇದನ್ನೂ ಓದಿ: ಬಿರಿಯಾನಿಯಲ್ಲಿ ಲೆಗ್ ಪೀಸ್ ಕಡಿಮೆ ಇದೆ-ಸಚಿವರನ್ನು ಟ್ಯಾಗ್ ಮಾಡಿ ದೂರು ನೀಡಿದ ವ್ಯಕ್ತಿ
ನಿಶಾಳನ್ನು ವಿವಾಹವಾಗಲು ವರ ಮನೋಜ್ ಕುಮಾರ್ ಒಪ್ಪಿಗೆ ಸೂಚಿಸಿದರು. ನಿಶಾ ಕೂಡ ಈ ವಿವಾಹಕ್ಕೆ ಸಮ್ಮತಿ ಸೂಚಿಸಿದರು. ಮೃತದೇಹವನ್ನು ಕೋಣೆಯಲ್ಲಿ ಇರಿಸಲಾಗಿತ್ತು. ನಂತರ ಮನೋಜ್ ಕುಮಾರ್ ಅವರ ವಿವಾಹವನ್ನು ಸುರಭಿ ಅವರ ಸಹೋದರಿ ನಿಶಾ ಅವರೊಂದಿಗೆ ನಡೆಸಲಾಯಿತು. ಮದುವೆಯ ನಂತರ, ದಿಬ್ಬಣ ಹೊರಟು ಹೋದ ಮೇಲೆ ಸುರಭಿ ಅವರ ಅಂತ್ಯ ಸಂಸ್ಕಾರವನ್ನು ಕೈಗೊಳ್ಳಲಾಯಿತು ಎಂದು ಸುರಭಿ ಅವರ ಸಹೋದರ ಸೌರಭ್ ಹೇಳಿದ್ದಾರೆ. ಒಂದು ಮಗಳು ಕೋಣೆಯಲ್ಲಿ ಸತ್ತು ಮಲಗಿದ್ದರೆ ಇನ್ನೊಂದು ಮಗಳ ವಿವಾಹವನ್ನು ಇನ್ನೊಂದು ಕೋಣೆಯಲ್ಲಿ ನಡೆಸಲಾಗುತ್ತಿತ್ತು ಎಂದು ಹೇಳುತ್ತಾ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ದೂರವಿರಲು ಹಾವು ತಿಂದ