ಇಸ್ಲಮಾಬಾದ್: ಹಿಂದೂ ಕುಂಟುಂಬವೊಂದರ ಐವರರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಮೃತರನ್ನು ಬೀರ್ಬಲ್ ದಾಸ್, ಮೇಘ್ವಾಲ್ ಹಾಗೂ ರಾಮ್ ಛಾಂದ್ ಎಂದು ಗುರತಿಸಲಾಗಿದೆ. ಟೈಲರಿಂಗ್ ಅಂಗಡಿಯನ್ನು ನಡೆಸಿ ಜೀವನ ನಡೆಸುತ್ತಿದ್ದರು. ಆದರೆ ಐವರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.
ಪಾಕ್ ನಗರದ ರೀಮ್ ಯಾರ್ ಖಾನ್ನಿಂದ 15 ಕೀ.ಮೀ ದೂರವಿರುವ ಅಬುದಾಬಿ ಕಾಲನಿಯಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಹರಿತವಾದ ಆಯುಧಗಳಿಂದ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಐವರ ಸಾವಿನಿಂದ ಸ್ಥಳೀಯರು ಶಾಕ್ ಆಗಿದ್ದಾರೆ.