ಕೊಪ್ಪಳ: ಆತ್ಮವನ್ನೇ ಕಳೆದುಕೊಂಡ ನಿರ್ಜೀವಿ ಸರ್ಕಾರದಿಂದ ಆತ್ಮನಿರ್ಭರ ಮಾತು ಎಂದು ಮಾಜಿ ಸಚಿವೆ ಉಮಾಶ್ರೀ ವ್ಯಂಗ್ಯ ಮಾಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು ಏನು ಇಲ್ಲ. ಬೆಂಗಳೂರಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ. ಆಸ್ಪತ್ರೆಯವರು ರೋಗಿಗಳನ್ನು ಮುಟ್ಟುವದಿಲ್ಲ. ರಸ್ತೆಯ ಮೇಲೆ ಹೆಣಗಳು ಬೀಳೂತ್ತಿದ್ದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಬಿಜೆಪಿ ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ ಎಂದು ಕಿಡಿಕಾರಿದರು.
ಕೋವಿಡ್ ಉಪಕರಣಗಳಲ್ಲಿ ದೊಡ್ಡ ಹಗರಣ ನಡೆದಿದ್ದು, ಈ ಸಂಬಂಧ ತನಿಖೆ ಆಗಬೇಕಿದೆ. ತನಿಖೆಗೆ ಒಳಪಡಿಸದಿದ್ರೆ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇವೆ. ಅಧಿವೇಶನದ ಸಂದರ್ಭದಲ್ಲಿ ಇವರ ಮುಖವಾಡವನ್ನು ಕಳಚುತ್ತೇವೆ ಎಂದು ಕಿಡಿಕಾರಿದರು.