ಬೆಂಗಳೂರು: ಅಸಮಾಧಾನಿತ ಶಾಸಕರು ರಹಸ್ಯ ಸಭೆಗಳ ನಡೆಸುವ ವಿಚಾರ ತಿಳಿದ ಸಿಎಂ ಯಡಿಯೂರಪ್ಪ, ಜುಲೈನಲ್ಲಿ ಬಂಫರ್ ಗಿಫ್ಟ್ ನೀಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೈಯಲ್ಲಿ ಬಂಡಾಯದ ಬಾವುಟ ಹಿಡಿಯಲು ಸಿದ್ಧರಾಗಿರುವ ತ್ರಿಮೂರ್ತಿ(ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ)ಗಳ ಪೈಕಿ ಒಬ್ಬರನ್ನು ಕರೆಸಿ ಮುಖ್ಯಮಂತ್ರಿಗಳು ಮಾತನಾಡಿದ್ದಾರಂತೆ. ಜುಲೈನಲ್ಲಿ ನಿಮಗೆ ಬಂಫರ್ ಗಿಫ್ಟ್ ಸಿಗಲಿದ್ದು, ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಎಂದು ಹೇಳಿದರಂತೆ. ಸಿಎಂ ಭರವಸೆಗೆ ಓಕೆ ಅಂದು, ಈಗ ಸಮಾಧಾನ ಏಕೆ ಮಾಡುತ್ತಿದ್ದೀರಿ ಎಂದು ಹೇಳಿ ಹೊರ ಬಂದಿದ್ದರಿಂದ ಸಿಎಂ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.
ದೆಹಲಿಗೆ ಹೋಗಲು ಪ್ಲಾನ್: ಯಶವಂತಪುರದ ಅಪಾರ್ಟ್ ಮೆಂಟ್ ನಲ್ಲಿ ಸಭೆ ಸೇರಿದ್ದ ಅಸಮಾಧಾನಿತ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಮುಂದೆ ಯಡಿಯೂರಪ್ಪನವರ ವಿರುದ್ಧವೇ ದೂರು ಸಲ್ಲಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಈ ಸಭೆಯಲ್ಲಿ ಭಾಗಿಯಾಗಿದ್ದ 15ಕ್ಕೂ ಅಧಿಕ ಶಾಸಕರದ್ದು, ಯಡಿಯೂರಪ್ಪರನ್ನ ಕೆಳಗೆ ಇಳಿಸಬೇಕು, ಬಿಸಿಮುಟ್ಟಿಸಬೇಕು ಎಂಬುದು ಒಂದೇ ಅಜೆಂಡಾ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.