ಬೆಂಗಳೂರು: ತಮಿಳುನಾಡು ಸಿಎಂ (Tamil Nadu) ಆಗಿ ದಳಪತಿ ವಿಜಯ್ (Vijay) ಇಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇದಕ್ಕೆ ಬೆಂಗಳೂರಿನ ವಿಜಯ್ ಫ್ಯಾನ್ಸ್ ಪುಲ್ ಖುಷ್ ಆಗಿದ್ದಾರೆ. ವಿಜಯ್ ಗೆಲುವಿಗೆ ಕಾಯುತ್ತಿದ್ದ ನೂರಾರು ಅಭಿಮಾನಿಗಳ (Vijay Fans) ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ. ವಿಜಯ್ ಸಿಎಂ ಆಗೋದನ್ನು ಕಣ್ತುಂಬಿಕೊಳ್ಳಲು ನೂರಾರು ಅಭಿಮಾನಿಗಳು ಬೆಂಗಳೂರಿನಿಂದ ಚೆನ್ನೈಗೆ ತೆರಳಿದ್ದಾರೆ.
ತಮಿಳುನಾಡು ಚುನಾವಣೆ ಫಲಿತಾಂಶ ಬಂದಾಗಿಂದ, ಅದರಲ್ಲೂ ವಿಜಯ್ ಅವರ ಟಿವಿಕೆ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮ್ಯಾಜಿಕ್ ನಂಬರ್ಗಾಗಿ ಪರದಾಡುವಂತಾಗಿತ್ತು. ಆದರೆ ಈಗ ಕಡೆಗೂ ಟಿವಿಕೆ ಬಹುಮತ ಸಾಬೀತುಪಡಿಸುವಲ್ಲಿ ಸಕ್ಸಸ್ ಆಗಿದೆ. ಈ ಬೆನ್ನಲ್ಲೇ ಸಿಎಂ ಆಗಿ ದಳಪತಿ ವಿಜಯ್ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಇದಕ್ಕಾಗಿ ಕಾಯುತ್ತಿದ್ದ ನೂರಾರು ಅಭಿಮಾನಿಗಳ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ. ವಿಜಯ್ ಸಿಎಂ ಆಗೋದನ್ನು ಕಣ್ತುಂಬಿಕೊಳ್ಳುವ ಸಲುವಾಗಿ ನೂರಾರು ಅಭಿಮಾನಿಗಳು ಚೆನ್ನೈಗೆ (Chennai) ದೌಡಾಯಿಸಿದ್ದಾರೆ. ಇದನ್ನೂ ಓದಿ: ಟಿವಿಕೆಗೆ ನೀಡಿದ್ದು ಬಾಹ್ಯ ಬೆಂಬಲ – ಡಿಎಂಕೆ ಮೈತ್ರಿಯಲ್ಲಿ ಮುಂದುವರಿಯಲಿದೆ ವಿಸಿಕೆ

ದಳಪತಿ ವಿಜಯ್ ಸಿಎಂ ಆಗಬೇಕು ಎಂದು ಕನ್ನಡಿಗ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ವಿಜಯ್ ಸಿಎಂ ಆಗಬೇಕು. 108 ಶಾಸಕರು ಗೆದ್ದಿದ್ದಾರೆ, ವಿಜಯ್ ಅಣ್ಣನಿಗೆ ಜನ ಅವಕಾಶ ಕೊಟ್ಟಿದ್ದಾರೆ. ಅವರು ಸಿನಿಮಾಗಳಲ್ಲಿ ಮಾತ್ರವಲ್ಲ, ನಿಜ ನೀವನದಲ್ಲೂ ವಿಜಯ್ ಅಣ್ಣ ಜನರಿಗಾಗಿ ಉತ್ತಮ ಕೆಲಸ ಮಾಡುತ್ತಾರೆ. ದಳಪತಿ ವಿಜಯ್ ಘೋಷಣೆ ಮಾಡಿರುವಂತೆ ಭರವಸೆಗಳನ್ನ ಈಡೆರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಡಿಸಿದ್ದಾರೆ. ಇದನ್ನೂ ಓದಿ: ಇಂದು ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ
ಒಟ್ಟಾರೆ ನಟ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಜಯ್ ಅಣ್ಣ ಸಿಎಂ ಆಗಬೇಕು ಅಂತ ಹಾರೈಸಿದ್ದಾರೆ. ವಿಜಯ್ ಮೇಲೆ ಭರವಸೆ ಇಟ್ಟು ಜನರ ಭರವಸೆಗಳನ್ನು ಈಡೇರಿಸುತ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಈ ಎಲ್ಲಾ ಕನಸನ್ನು ವಿಜಯ್ ಈಡೇರಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಬಂಗಾಳ ಗೆಲುವಿನ ಸಂಭ್ರಮ: ಇಂದು ಬೆಂಗಳೂರಿಗೆ ಮೋದಿ ಆಗಮನ

