ಕಿಸ್, ಕಬ್ಜ ಹಾಗೂ ಬಘೀರ ಸಿನಿಮಾಗಳಿಗೆ ಕ್ಯಾಮೆರಾ ಹಿಡಿದಿರುವ ಎಜೆ ಶೆಟ್ಟಿ, ಭೂರಮೆ ಎಂಬ ಚೆಂದದ ಹಾಡಿನ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಎಜೆ ಶೆಟ್ಟಿ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿಸಿರುವ ಚೊಚ್ಚಲ ಆಲ್ಬಂ ಸಾಂಗ್ ಭೂರಮೆ. ಯುವ ಪ್ರತಿಭೆಗಳಾದ ಅರ್ಥವ ವಿಶ್ವನಾಥ್ ಹಾಗೂ ಸುಷ್ಮಿತಾ ಶೆಟ್ಟಿ ನಟನೆಯ ಈ ಸಾಂಗ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಜರುಗಿತು.
ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ಸ್ ಗಳಾದ ಎಪಿ ಅರ್ಜುನ್, ಚೇತನ್ ಕುಮಾರ್ ಹಾಗೂ ಪವನ್ ಒಡೆಯರ್ ವಿಶೇಷ ಅಥಿತಿಗಳಾಗಿ ಆಗಮಿಸಿ ಹೊಸಬರಿಗೆ ಸಾಥ್ ಕೊಟ್ಟರು. ಈ ಸಂದರ್ಭದಲ್ಲಿ ಯುವ ನಟ ಅಥರ್ವ ವಿಶ್ವನಾಥ್ ಮಾತನಾಡಿ, ಅರ್ಜುನ್ ಸರ್, ಪವನ್ ಸರ್ ಹಾಗೂ ಚೇತನ್ ಸರ್ ಹೊಸಬರಿಗೆ ಈ ರೀತಿ ಸಪೋರ್ಟ್ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಭೂರಮೆ ಇಷ್ಟು ಕ್ವಾಲಿಟಿಯಲ್ಲಿ ಬರಲು ಕಾರಣ ನನ್ನ ಎಲ್ಲಾ ಸ್ನೇಹಿತರು. ನಾನು ಈ ರೀತಿ ಹೆಜ್ಜೆ ಇಟ್ಟಾಗ ನನ್ನ ತಂದೆ, ತಾಯಿ ಜೊತೆಯಾಗಿ ನಿಂತರು. ಭೂರಮೆ ಎನ್ನುವುದು ನಮ್ಮ ಕನಸು. ಸಿನಿಮಾ ಮಾಡಲು ಹೊರಟಿರುವ ನಾವು ತೆಗೆದುಕೊಂಡು ಮೊದಲ ಹೆಜ್ಜೆ ಇದು. ಈ ಸಾಂಗ್ಗಾಗಿ ಎಜೆ ಶೆಟ್ಟಿಯವರು ಸಾಕಷ್ಟು ವರ್ಕ್ ಮಾಡಿದ್ದಾರೆ. ಈಗ ಈ ಭೂರಮೆ ಹಾಡನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ನೋಡಿ, ಹಾರೈಸಿ. ತಪ್ಪಿದರೆ ಅದನ್ನು ಹೇಳಿ ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಪ್ರಭಾಸ್ ಅಭಿನಯದ ಫೌಜಿ ಚಿತ್ರದ ರಿಲೀಸ್ ಡೇಟ್ ಫಿಕ್ಸ್

ನಿರ್ದೇಶಕ ಎಜೆ ಶೆಟ್ಟಿ, ನಾನು ನಿರ್ದೇಶಕ ಆಗಬೇಕು ಎಂಬ ಕನಸ್ಸಿನೊಂದಿಗೆ ಇಂಡಸ್ಟ್ರಿಗೆ ಬಂದೆ. ಅದರ ಮೊದಲ ಹೆಜ್ಜೆ ಈ ಭೂರಮೆ ಹಾಡು. ಪಲ್ಲವಿ ಅನುಪಲ್ಲವಿ ಸಿನಿಮಾ ಫಿಲಿಂಗ್ನಲ್ಲಿ ಸಾಂಗ್ ಮಾಡಬೇಕು ಅಂತಾ ಇಷ್ಟಇತ್ತು. ಪ್ರಿಯಾ ಮಲ್ಲಿ ಎರಡು ನಿಮಿಷದಲ್ಲಿ ಮ್ಯೂಸಿಕ್ ಮಾಡಿದರು. ಅವರು ಸೂಪರ್ ಫಾಸ್ಟ್. ಆರು ನಿಮಿಷದಲ್ಲಿ ಒಂದು ಸ್ಟೋರಿ ಹೇಗೆ ಹೇಳಬಹುದು ಅನ್ನೋದನ್ನು ಈ ಹಾಡಿನ ಮೂಲಕ ಹೇಳಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.
ಪ್ರೀತಿ, ಕನಸುಗಳು, ನೆನಪುಗಳ ಭಾವನಾತ್ಮಕ ಪ್ರಯಾಣವನ್ನು ಭೂರಮೆ ಹಾಡಿನ ಮೂಲಕ ಎಜೆ ಶೆಟ್ಟಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅಲ್ಲದೇ ಸುಂದರವಾಗಿ ಸೆರೆಹಿಡಿದಿದ್ದಾರೆ. ಪೆನ್ ಮತ್ತು ಪೇಪರ್ ಸ್ಟುಡಿಯೋಸ್ ಬ್ಯಾನರ್ನಡಿ ಭೂರಮೆ ಹಾಡು ನಿರ್ಮಾಣಗೊಂಡಿದೆ. ಅಥರ್ವ ವಿಶ್ವನಾಥ್ ಮತ್ತು ಸುಶ್ಮಿತಾ ಶೆಟ್ಟಿ ಅದ್ಭುತವಾಗಿ ಅಭಿನಯಿಸಿದ್ದಾರೆ. ನಾಗಾರ್ಜುನ್ ಶರ್ಮಾ ಹಾಡಿಗೆ ಸಾಹಿತ್ಯ ಬರೆದಿದ್ದು, ಪ್ರಿಯಾ ಮಾಲಿ ಸಂಗೀತ ನಿರ್ದೇಶನ ಮಾಡಿರುವುದರ ಜೊತೆಗೆ ಹರ್ಷ ಜೊತೆಗೆ ಧ್ವನಿಗೂಡಿಸಿದ್ದಾರೆ. ಅಜಯ್ ಕುಮಾರ್ ಸಂಕಲನ ಹಾಡಿಗಿದೆ. ಇದನ್ನೂ ಓದಿ: ದರ್ಶನ್ ಫ್ಯಾನ್ಸ್ ಗೆ ಗುಡ್ ನ್ಯೂಸ್ : ದಿ ಡೆವಿಲ್ ಸಿನಿಮಾ ಸ್ಟ್ರೀಮಿಂಗ್
