ತುಮಕೂರು: ತಬ್ಲಿಘಿ ಸಭೆಗೆ ತೆರಳಿದ್ದವರಿಗೆ ಕ್ವಾರಂಟೈನ್ ನಲ್ಲಿರುವಂತೆ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.
ತುಮಕೂರು ಕಾಂಗ್ರೆಸ್ ಹೆಲ್ಪ್ ಲೈನ್ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ಮುಸ್ಲಿಮರು ಯಾರು ತಬ್ಲಿಘಿ ಸಭೆ ಹೋಗಿದ್ದೀರೋ ಅವರು ತಕ್ಷಣ ಹೆಲ್ತ್ ಆಫೀಸರನ್ನು ಸಂಪರ್ಕ ಮಾಡುವಂತೆ ಸಲಹೆ ನೀಡಿದ್ದಾರೆ.
ಆರೋಗ್ಯ ಅಧಿಕಾರಿಗಳು ನಿಮ್ಮ ರಕ್ತದ ಸ್ಯಾಂಪಲ್ ಪಡೆದು ಹಾಸನ ಅಥವಾ ಬೆಂಗಳೂರಿಗೆ ಕಳಿಸ್ತಾರೆ. ಅದಕ್ಕಾಗಿ ಯಾವುದೇ ಆತಂಕಪಡಬಾರದು ಎಂದರು.
ಮೈನಾರಿಟಿ ಸ್ನೇಹಿತರು ಹೋಗಬಾರದಾಗಿತ್ತು, ಸಭೆ ಮಾಡಬಾರದಾಗಿತ್ತು ಅನ್ನೊದೆಲ್ಲಾ ಈಗ ಬೇಡ. ದೆಹಲಿ ಸರ್ಕಾರ ಅನುಮತಿ ಇಲ್ಲದ ಸಭೆ ಮಾಡಿದ್ದರೆ ಅವರು ಕಾನೂನು ಕ್ರಮ ಕೈಗೊಳ್ತಾರೆ. ಆ ತಲೆ ನೋವು ನಮಗೆ ಬೇಡ ಎಂದು ಅಲ್ಪಸಂಖ್ಯಾತರ ಪರ ಬ್ಯಾಟ್ ಬೀಸಿದರು.
ಯಾರು ನಮ್ಮ ಜಿಲ್ಲೆಗೆ ಬಂದಿದ್ದಾರೆ ಅವರು ಮಾಹಿತಿಕೊಡದೇ ಇದ್ದರೆ ತಪ್ಪಾಗುತ್ತೆ. ದಯವಿಟ್ಟು ನೀವು ಮಾಹಿತಿ ಕೊಟ್ಟು ಐಸೋಲೇಷನ್ ಆಗಬೇಕು. ರೋಗದ ಲಕ್ಷಣ ಕಂಡು ಬಂದ್ರೆ ತಕ್ಷಣ ಆರೋಗ್ಯಾಧಿಕಾರಿ ಭೇಟಿ ಮಾಡುವಂತೆ ಇದೇ ವೇಳೆ ತಿಳಿಸಿದರು.