ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ (Janardhana Reddy) ಅಭಿಮಾನಿಗಳು ನಾಣ್ಯದ ತುಲಾಭಾರ (Tulabhara) ಮಾಡಿದ್ದಾರೆ.
ಬಳ್ಳಾರಿ (Bellary) ಜಿಲ್ಲೆಯ ಕೃಷ್ಣಾನಗರ ಕ್ಯಾಂಪಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಲಾಭಾರ ಮಾಡಿದ್ದಾರೆ. ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಗಣಪತಿ ಹೋಮ ಮತ್ತು ತುಲಾಭಾರ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎರಡು ಗಂಟೆಗಳ ಕಾಲ ಜನಾರ್ದನ ರೆಡ್ಡಿ ಹಾಗೂ ಅವರ ಧರ್ಮ ಪತ್ನಿ ಹೋಮದಲ್ಲಿ ಪಾಲ್ಗೊಂಡರು. ರೆಡ್ಡಿ ಅವರ ಅಭಿಮಾನಿ, ರೈತ ಆಲಪಾಟಿ ಶ್ರೀನಿವಾಸನಿಂದ ಅವರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದನ್ನೂ ಓದಿ: ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್
ಹೋಮದ ನಂತರ ಜನಾರ್ದನ ರೆಡ್ಡಿಯವರ ತುಲಾಭಾರ ಮಾಡಿದ್ದು, ಮಂತ್ರ ಘೋಷಗಳ ಮಧ್ಯೆ ನಡೆದ ಹೋಮ ಮತ್ತು ತುಲಾಭಾರ ಮಾಡಿ ಅಭಿಮಾನಿಗಳು ಸಂತೋಷ ಪಟ್ಟರು. ಬಳಿಕ ಕಾರ್ಯಕ್ರಮದ ನಂತರ ರೆಡ್ಡಿ ಅವರ ಜೊತೆಯಲ್ಲಿ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಇದನ್ನೂ ಓದಿ: ನಿನ್ಮನೆ ಕಾಯ್ವಾಗ ನಿಂಗೆ NDRF ಯಾವ್ದು, SDRF ಯಾವ್ದು ಗೊತ್ತಿಲ್ಲ – ಅಧಿಕಾರಿ ವಿರುದ್ಧ ಸೋಮಣ್ಣ ಗರಂ