ಹೊಸಕೋಟೆ ಅಖಾಡಕ್ಕೆ ಕಾಂಗ್ರೆಸ್ ಜೋಡೆತ್ತುಗಳು ಲಗ್ಗೆ

Public TV
1 Min Read
DK SIDDU 1

ಬೆಂಗಳೂರು: ಹೊಸಕೋಟೆ ಅಖಾಡದಲ್ಲಿ ಇಂದು ನಿಜವಾದ ರಣಕಹಳೆ ಮೊಳಗಲಿದೆ. ಮಾಜಿ ರಾಜಕೀಯ ಗುರು ಹಾಗೂ ಮಾಜಿ ಸ್ನೇಹಿತ ಇಬ್ಬರು ಒಟ್ಟೊಟ್ಟಿಗೆ ಹೊಸಕೋಟೆಗೆ ಬಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ತೊಡೆ ತಟ್ಟಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ಹೊಸಕೋಟೆಯ ಎಂಟಿಬಿ ಕೋಟೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಜೋಡೆತ್ತುಗಳ ರೀತಿ ಆಗಮಿಸಲಿದ್ದು, ಬೆಳಗ್ಗೆಯಿಂದ ಸಂಜೆ 6 ಗಂಟೆಯವರೆಗೂ ಪದ್ಮಾವತಿ ಸುರೇಶ್ ಪರ ಕ್ಷೇತ್ರದಾದ್ಯಂತ ಪ್ರಚಾರ ನಡೆಸಲಿದ್ದಾರೆ. ಮಾಜಿ ಗುರು ಹಾಗೂ ಮಾಜಿ ಸ್ನೇಹಿತರಿಗೆ ಎಂಟಿಬಿ ನಾಗರಾಜ್ ತಮ್ಮ ಅಖಾಡದಲ್ಲಿ ಟಕ್ಕರ್ ಕೊಡ್ತಾರಾ? ಅಥವಾ ಹೊಸ ಜೋಡೆತ್ತು ಸೇರಿಕೊಂಡು ಎಂಟಿಬಿ ನಾಗರಾಜ್‍ಗೆ ಸವಾಲು ಹಾಕಿ ಸಂಕಷ್ಟ ತಂದಿಡ್ತಾರಾ ಅನ್ನೋದು ಸದ್ಯದ ಕುತೂಹಲವಾಗಿದೆ.

MTB

ಈ ಹಿಂದೆ ಹೊಸಕೋಟೆ ಅಖಾಡದಲ್ಲಿ ಸಿಗೋಣ ಅಂತ ಎಂಟಿಬಿಗೆ ಡಿಕೆಶಿ ಸವಾಲ್ ಕೂಡ ಹಾಕಿದ್ದರು. ಹೀಗಾಗಿ ಇಂದು ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರದ ಕಾವು ಹೆಚ್ಚಾಗಲಿದ್ದು, ಕಾಂಗ್ರೆಸ್ ಜೋಡೆತ್ತುಗಳ ಲಗ್ಗೆಯಿಂದ ಎಂಟಿಬಿಗೆ ಕ್ಷೇತ್ರದಲ್ಲಿ ರಾಜಕೀಯವಾಗಿ ಹೊಡೆತ ಬೀಳಲಿದೆಯಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *