ಮಹಾಭಾರತ (Mahabharata) ಧಾರಾವಾಹಿಯಲ್ಲಿ ಕೃಷ್ಣನ (Krishna) ಪಾತ್ರ ಮಾಡುವ ಮೂಲಕ ಜನಪ್ರಿಯರಾಗಿರುವ ನಿತೀಶ್ ಭಾರದ್ವಾಜ್ (Nitish Bhardwaj) ತಮ್ಮ ಮಾಜಿ ಪತ್ನಿ, ಐಎಎಸ್ ಅಧಿಕಾರಿ ಸ್ಮಿತಾ (Smita) ವಿರುದ್ಧ ದೂರು (Complaint) ನೀಡಿದ್ದಾರೆ. ಮಾಜಿ ಪತ್ನಿಯಿಂದ ತಮಗೆ ಮಾನಸಿಕ ಕಿರುಕುಳ ಆಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಐಎಎಸ್ ಅಧಿಕಾರಿಯಾಗಿರುವ ಸ್ಮಿತಾ ಮತ್ತು ನಿತೇಶ್ 2019ರಲ್ಲಿ ಮದುವೆಯಾಗಿದ್ದರು. ಇವರಿಗೆ ಅವಳಿ ಜವಳಿ ಮಕ್ಕಳಿದ್ದಾರೆ. ಮದುವೆಯಾದ 12 ವರ್ಷಗಳ ನಂತರ ಈ ದಂಪತಿ ವಿಚ್ಚೇದನ ಪಡೆದಿದ್ದರು. ಇದೀಗ ತಮ್ಮ ಮಕ್ಕಳನ್ನು ತಮಗೆ ಭೇಟಿ ಆಗಲು ಆಗುತ್ತಿಲ್ಲ. ಮಾಜಿ ಪತ್ನಿ ಅದಕ್ಕೆ ಅವಕಾಶ ಕೊಡದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.
ಭೋಪಾಲ್ ಪೊಲೀಸ್ ಆಯುಕ್ತ ಹರಿನಾರಾಯಣಾಚಾರಿ ಅವರಿಗೆ ದೂರು ನೀಡಿದ್ದು, ಈ ಕುರಿತಂತೆ ಪೊಲೀಸ್ ಆಯುಕ್ತರು ಪ್ರತಿಕ್ರಿಯೆ ನೀಡಿದ್ದಾರೆ. ನಿತೀಶ್ ನೀಡಿರುವ ದೂರನ್ನು ಸ್ವೀಕರಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ತನಿಖೆಯ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಿದ್ದಾರೆ.