Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಒಂದೇ ಗೋತ್ರದವನ ಜೊತೆ ಮದ್ವೆ – ರೊಚ್ಚಿಗೆದ್ದು ಮಗಳನ್ನು ಕೊಂದು 80 ಕಿ.ಮೀ ದೂರದಲ್ಲಿ ಎಸೆದ್ರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಒಂದೇ ಗೋತ್ರದವನ ಜೊತೆ ಮದ್ವೆ – ರೊಚ್ಚಿಗೆದ್ದು ಮಗಳನ್ನು ಕೊಂದು 80 ಕಿ.ಮೀ ದೂರದಲ್ಲಿ ಎಸೆದ್ರು

Crime

ಒಂದೇ ಗೋತ್ರದವನ ಜೊತೆ ಮದ್ವೆ – ರೊಚ್ಚಿಗೆದ್ದು ಮಗಳನ್ನು ಕೊಂದು 80 ಕಿ.ಮೀ ದೂರದಲ್ಲಿ ಎಸೆದ್ರು

Public TV
Last updated: February 22, 2020 8:04 pm
Public TV
Share
3 Min Read
sheetal ankith 2 1
SHARE

– 25 ವರ್ಷ ಮಗಳನ್ನು ಹತ್ಯೆಗೈದ ಪೋಷಕರು
– ಪ್ರಿಯಕರನ ಜೊತೆ ರಹಸ್ಯ ವಿವಾಹ
– ಪೋಷಕರು ಸೇರಿದಂತೆ 6 ಮಂದಿಯಿಂದ ಕೃತ್ಯ

ನವದೆಹಲಿ: ಒಂದೇ ಗೋತ್ರದ ಹುಡುಗನನ್ನು ರಹಸ್ಯವಾಗಿ ಮದುವೆಯಾಗಿದ್ದಕ್ಕೆ ಪೋಷಕರೇ ಮಗಳನ್ನು ಕೊಲೆ ಮಾಡಿದ ಪ್ರಕರಣವನ್ನು ದೆಹಲಿ ಪೊಲೀಸರು 20 ದಿನಗಳ ನಂತರ ಬೇಧಿಸಿಸಿದ್ದಾರೆ.

ಶೀತಲ್ ಚೌಧರಿ(25) ಕೊಲೆಯಾದ ಮಹಿಳೆ. ಪೋಷಕರಾದ ರವೀಂದರ್, ಸುಮನ್ ಜೊತೆಗೆ ಕೃತ್ಯಕ್ಕೆ ಸಹಕರಿಸಿದ್ದಕ್ಕೆ ನಾಲ್ವರು ಸಂಬಂಧಿಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

delhi police 1

ಕಿಡ್ನಾಪ್ ದೂರು:
ಜನವರಿ 31ರಂದು ಶೀತಲ್ ಚೌಧರಿ ಕಾಣಿಸದೇ ಇದ್ದಾಗ ಪತಿ ಅಂಕಿತ್ ಭಾಟಿ ಅತ್ತೆ, ಮಾವನ ಮನೆಗೆ ಹೋಗಿ ವಿಚಾರಿಸಿದ್ದಾರೆ. ಶೀತಲ್ ಚೌಧರಿಯ ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿದಾಗಲೂ ಎಲ್ಲೂ ಪತ್ತೆಯಾಗದೇ ಇದ್ದಾಗ ಫೆ.17 ರಂದು ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪತಿ ಅಂಕಿತ್ ಭಾಟಿ ಅಪಹರಣ ದೂರು ದಾಖಲಿಸುತ್ತಾರೆ.

ಜನವರಿ 20 ರಂದು ಪತ್ನಿಯ ತಾನು ಮದುವೆಯಾದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ಈ ವಿಚಾರ ತಿಳಿದು ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

sheeetal ankith

ರಹಸ್ಯ ಮದುವೆ: ಶೀತಲ್ ಚೌಧರಿ ಮತ್ತು ಅಂಕಿತ್ ಭಾಟಿ ಕುಟುಂಬ ಡೈರಿ ಉದ್ಯಮ ನಡೆಸುತ್ತಿದ್ದು ಎರಡು ಕುಟುಂಬಗಳು ಸಮೀಪವೇ ನೆಲೆಸಿತ್ತು. ಇಬ್ಬರು ಪರಿಚಯದಲ್ಲಿದ್ದ ಕಾರಣ ಮೂರು ವರ್ಷದ ಹಿಂದೆ ಶೀತಲ್ ಮತ್ತು ಅಂಕಿತ್ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರು.

ರಹಸ್ಯವಾಗಿ ಸುತ್ತಾಡುತ್ತಿದ್ದ ಇವರಿಬ್ಬರು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮದುವೆಯಾಗಿದ್ದರು. ಮದುವೆಯಾಗಿದ್ದರೂ ದಂಪತಿ ಪ್ರತ್ಯೇಕವಾಗಿ ಪೋಷಕರ ಜೊತೆ ನೆಲೆಸಿದ್ದರು.

ಜನವರಿ 29 ರಂದು ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪಗೊಂಡಾಗ ಶೀತಲ್ ತಾನು ರಹಸ್ಯವಾಗಿ ಮದುವೆಯಾದ ವಿಚಾರವನ್ನು ತಿಳಿಸಿದ್ದಾಳೆ. ಈ ವಿಚಾರ ಕೇಳಿ ಕೋಪಗೊಂಡ ಪೋಷಕರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

Why Marriage is so important 1 1

ಕಾಲುವೆಗೆ ಎಸೆದ್ರು:
ಕೊಲೆ ಮಾಡಿದ ಮೃತದೇಹವನ್ನು ಏನು ಮಾಡುವುದು ತಿಳಿಯದೇ ಇದ್ದಾಗ ಕಾರಿನಲ್ಲಿ ಎಸೆದು ಬರುವ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಎರಡು ಕಾರಿನಲ್ಲಿ 6 ಮಂದಿ 80 ಕಿ.ಮೀ ದೂರ ಪ್ರಯಾಣಿಸಿ ಉತ್ತರ ಪ್ರದೇಶದ ಸಿಕಂದರಾಬಾದ್ ಬಳಿಯ ಕಾಲುವೆಯಲ್ಲಿ ಎಸೆದು ಮನೆಗೆ ಬಂದಿದ್ದಾರೆ.

ಕಾಲುವೆಗೆ ಬಿದ್ದ ಶೀತಲ್ ಮೃತ ದೇಹ ನೀರಿನಲ್ಲಿ ತೇಲಿಕೊಂಡು ಅಲಿಘಢಕ್ಕೆ ಬಂದಿತ್ತು. ಗ್ರಾಮಸ್ಥರು ಶವವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದರು. ಕಾಲುವೆಯಲ್ಲಿ ಅಪರಚಿತ ಮಹಿಳೆಯ ಶವಪತ್ತೆಯಾದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಹೆಣವನ್ನು ಸುಟ್ಟಿದ್ದರು. ಈ ವೇಳೆ ಶವದಲ್ಲಿದ್ದ ಉಡುಪು ಮತ್ತು ಆಕೆ ದೇಹದಲ್ಲಿದ್ದ ಇತರೇ ವಸ್ತುಗಳನ್ನು ರಕ್ಷಿಸಿಟ್ಟಿದ್ದರು.

love hand wedding valentine day together holding hand 38810 3580

ಫೆ.17 ರಂದು ಪ್ರಕರಣ ದಾಖಲಿಸಿದ ನಂತರ ದೆಹಲಿ ಪೊಲೀಸರು ಶೀತಲ್ ಆಪ್ತರನ್ನು ಸ್ನೇಹಿತರನ್ನು ವಿಚಾರಿಸಿದ್ದಾರೆ. ಬಳಿಕ ಪೋಷಕರನ್ನು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದಾರೆ. ಅನುಮಾನ ಬಂದು ಮತ್ತಷ್ಟು ವಿಚಾರಿಸಿದಾಗ ಪುತ್ರಿಯನ್ನು ಸಂಬಂಧಿಕರ ಜೊತೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಶೀತಲ್ ಕುಟುಂಬದ ಒಬ್ಬ ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದೆವು. ಈ ವೇಳೆ ಒಬ್ಬರ ಹೇಳಿಕೆಗೂ ಮತ್ತೊಬ್ಬರ ಹೇಳಿಕೆಗೂ ತಾಳೆ ಆಗುತ್ತಿರಲಿಲ್ಲ. ಒಬ್ಬ ಸಂಬಂಧಿ ಅವಳು ಈಗಾಗಲೇ ಸತ್ತಿದ್ದಾಳೆ, ಅವಳು ಬರುವುದಿಲ್ಲ ಎಂದು ಬಾಯಿಬಿಟ್ಟಿದ್ದ. ಈ ಹೇಳಿಕೆ ಬರುತ್ತಿದ್ದಂತೆ ಆಕೆಯನ್ನು ಕೊಲೆ ಮಾಡಿರುವುದು ದೃಢವಾಯಿತು ಎಂದು ತಿಳಿಸಿದ್ದಾರೆ.

Police Jeep 1 1

ಒಂದೇ ಗೋತ್ರ:
ಮಗಳ ಮತ್ತು ಆಕೆಯ ಪತಿ ಗೋತ್ರ ಒಂದೇ ಆಗಿದೆ. ಈ ಕಾರಣಕ್ಕೆ ನಾವು ಕೊಲೆ ಮಾಡಿ ಸಂಬಂಧಿಕರ ಸಹಾಯದಿಂದ ಕಾಲುವೆಗೆ ಶವವವನ್ನು ಎಸೆದಿದ್ದೆವು ಎಂದು ತಿಳಿಸಿದ್ದಾರೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ನೆಟ್‍ವರ್ಕ್ ಪರಿಶೀಲನೆ ವೇಳೆ ಜ.29 ರಂದು ಕೊಲೆ ಮಾಡಿದ ಸ್ಥಳದಲ್ಲೇ ಆರೋಪಿಗಳು ಓಡಾಡಿದ್ದರು ಎನ್ನುವುದಕ್ಕೆ ಮೊಬೈಲ್ ಟವರ್ ಲೋಕೇಶನ್ ಸಾಕ್ಷ್ಯ ಸಿಕ್ಕಿತ್ತು.

love 1 2

TAGGED:canaleuthanasiamarriageriverTribalಕಾಲುವೆಗೋತ್ರನದಿಮದುವೆಮರ್ಯಾದಾ ಹತ್ಯೆ
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

siddaramaiah dk shivakumar car
Bengaluru City

ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

Public TV
By Public TV
2 minutes ago
SN Narayanaswamy Bangarpet MLA
Bengaluru City

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
21 minutes ago
Madhu Bangarappa 1
Bagalkot

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

Public TV
By Public TV
21 minutes ago
R Ashok 1
Bengaluru City

ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ – ಅಶೋಕ್‌ ವಾಗ್ದಾಳಿ

Public TV
By Public TV
38 minutes ago
Suhas Sudhakar H.D Kumaraswamy
Chitradurga

ಹೆಚ್‌ಡಿಕೆ ʻಹೆಬ್ಬೆಟ್ಟು’ ಹೇಳಿಕೆಯಿಂದ ನೋವಾಗಿದೆ – ಬೇಸರ ಹೊರಹಾಕಿದ ಡಿ.ಸುಧಾಕರ್ ಪುತ್ರ

Public TV
By Public TV
39 minutes ago
DK Shivakumar Iqbal Hussain
Districts

ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಫಿಕ್ಸ್, ಇದೇ ನನ್ನ ಅಂತಿಮ ದಿನಾಂಕ: ಇಕ್ಬಾಲ್ ಹುಸೇನ್

Public TV
By Public TV
60 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?