ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿ ತಲೆಮರೆಸಿಕೊಂಡಿದ್ದ ಕ್ರಿಮಿನಲ್ ಪ್ರಕರಣಗಳ (Criminal Case) ಆರೋಪಿ ಸ್ಯಾಂಟ್ರೋ ರವಿ (Santro Ravi) ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ತನ್ನ ವಿರುದ್ಧ ಎಫ್ಐಆರ್ (FIR) ದಾಖಲಾಗ್ತಿದ್ದಂತೆ ಕಾಲ್ಕಿತ್ತಿದ್ದ ಸ್ಯಾಂಟ್ರೋ ರವಿ, ಸಿಕ್ಕಿಬಿದ್ದ ಬಳಿಕ ಪೊಲೀಸರಿಗೆ (Mysuru Police) ಹೇಳಿದ ಒಂದೊಂದೇ ವಿಚಾರಗಳು ರಿವೀಲ್ ಆಗ್ತಿವೆ.
ಅತ್ಯಾಚಾರ, ಜಾತಿ ನಿಂದನೆ, ವೇಶ್ಯಾವಾಟಿಕೆ ದಂಧೆ ಹಾಗೂ ವರ್ಗಾವಣೆ ಕೇಸ್ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ತಡರಾತ್ರಿ ಮೈಸೂರಿಗೆ ಕರೆದೊಯ್ದ ಪೊಲೀಸರು (Police) ಆತನ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇದನ್ನೂ ಓದಿ: ಎರಡು ವಾರಗಳಲ್ಲಿ 2 ಬಾರಿ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ ಲಲಿತ್ ಮೋದಿ
ಎಫ್ಐಆರ್ ದಾಖಲಾಗ್ತಿದ್ದಂತೆ ಎಲ್ಲ ನನಗೆ ಗೊತ್ತಿರೋ ಪೊಲೀಸರೇ ಏನೂ ಮಾಡೋದಿಲ್ಲ ಅಂದುಕೊಂಡಿದ್ದ ರವಿ, ಕೇಸ್ ಗಂಭೀರತೆ ಪಡೆಯುತ್ತಿದ್ದಂತೆ ತಾನು ಬಳಸ್ತಿದ್ದ ಮೊಬೈಲ್ ಗಳಲ್ಲಿನ ಸಿಮ್ ಹಾಗೂ ತಲೆಯಲ್ಲಿದ್ದ ವಿಗ್ ಕಿತ್ತು ಮನೆಯಲ್ಲೆ ಬಿಸಾಡಿ ಕೊಡಗಿನತ್ತ ಕಾಲ್ಕಿತ್ತಿದ್ದ. ಅಲ್ಲಿನ ಹೋಂ ಸ್ಟೇ ಯಲ್ಲಿ ಎರಡು ದಿನ ಕಾಲ ಕಳೆದಿದ್ದ. ಹಳೆ ಫೋನ್ ನಿಂದ ಕಾಪಿ ಮಾಡಿಕೊಂಡಿದ್ದ ಅತ್ಯಾಪ್ತರಿಗೆ ವಾಟ್ಸಾಪ್ ಕಾಲ್ ಗಳ ಮೂಲಕ ಸಂಪರ್ಕದಲ್ಲಿದ್ದು, ಹೆಬ್ರಿ, ಕೇರಳ, ಪುಣೆ, ಗುಜರಾತ್ ಸುತ್ತಾಡಿದ್ದ ಅನ್ನೋ ಮಾಹಿತಿ ಸಿಕ್ಕಿದೆ.
ಸತತ ಕಾರ್ಯಾಚರಣೆ ಮೂಲಕ ರವಿಯನ್ನ ಬಂಧಿಸಿ ಕರೆತಂದ ಪೊಲೀಸರಿಗೆ ಮೈಸೂರು ತಲುಪೋವರೆಗೂ ತುಟುಕ್ ಪಿಟಿಕ್ ಅನ್ನದ ರವಿ, ಬಳಿಕ ತನ್ನ ಬಾಲ ಬಿಚ್ಚಲು ಶುರು ಮಾಡಿದ್ದಾನೆ. ಇದನ್ನೂ ಓದಿ: ಗಂಟೆಗೊಮ್ಮೆ ಇನ್ಸುಲಿನ್ ತಗೋತಿದ್ದಾನೆ – ಸ್ಯಾಂಟ್ರೋ ರವಿ ಕಾಯಿಲೆ ಬಗ್ಗೆ ಮಾಹಿತಿ ನೀಡಿದ ADGP
ಮೈಸೂರು ತಲುಪುತ್ತಿದ್ದಂತೆ, “ಎಲ್ಲರ ಜಾತಕ ನನ್ನ ಕೈಯಲ್ಲಿದೆ ಹುಷಾರ್. ನನಗೆ ಗೊತ್ತು ಏನ್ ಮಾಡ್ಬೇಕು ಅಂತ” ಎಂದು ಅವಾಜ್ ಬಿಟ್ಟಿದ್ದಾನಂತೆ. ಅದೇನ್ ಜಾತಕ ಇಟ್ಕೊಂಡಿದ್ದಾನೊ ಸ್ಯಾಂಟ್ರೋ ರವಿ ಹೊರಗೆ ಬಿಡಬೇಕು. ಸದ್ಯ ಆತನ ಮಾತಿನಿಂದ ಸೂಕ್ಷ್ಮ ತನಿಖೆಗಿಳಿದ ಪೊಲೀಸರು ಆತನ ಮನೆಯಲ್ಲಿ ಸಿಕ್ಕ ಎರಡು ಫೋನ್ ಗಳ ಪರಿಶೀಲನೆ ನಡೆಸಿ ಮಾಹಿತಿಯನ್ನ ಎಫ್ಎಸ್ಎಲ್ ಗೆ ರವಾನಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k