ಹಾವೇರಿ: ಚಲಿಸುತ್ತಿದ್ದ ಸಾರಿಗೆ ಬಸ್ನಲ್ಲಿ (Transport Bus) ಹಾಡಹಗಲೆ ದರೋಡೆಕೋರರ ಗ್ಯಾಂಗ್ ಬಸ್ಸಿನ ಚಾಲಕನಿಗೆ ಚಾಕು ತೋರಿಸಿ ಪ್ರಯಾಣಿಕನನ್ನು ದರೋಡೆ (Robbery) ಮಾಡಿದ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಸ್ಮಶಾನದ ಬಳಿ ಈ ಘಟನೆ ನಡೆದಿದೆ. ಹುಬ್ಬಳ್ಳಿ (Hubballi) ಮೂಲದ ಸ್ಟೀಲ್ ಮೆಟಲ್ ವ್ಯಾಪಾರಿಯಿಂದ ದರೋಡೆ ಮಾಡಲಾಗಿದೆ. ವ್ಯಾಪಾರಿಯ ಬ್ಯಾಗ್ನಲ್ಲಿದ್ದ 60 ಸಾವಿರ ರೂಪಾಯಿ ನಗದು ಮತ್ತು 12 ಸಾವಿರ ರೂ. ಮೌಲ್ಯದ ಮೊಬೈಲ್ ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಮರ್ಡರ್ – ಫ್ಲೈಟ್ ಟಿಕೆಟ್ ಬುಕ್ ಮಾಡಿ ಸಿಕ್ಕಿಬಿದ್ದ ಆರೋಪಿ!
- Advertisement 2
- Advertisement 3
ಹಾವೇರಿ-ಹುಬ್ಬಳ್ಳಿ ತಡೆ ರಹಿತ ಬಸ್ ಬಂಕಾಪುರ ಟೋಲ್ಗೇಟ್ ದಾಟಿ ಮುಂದೆ ಬಂದ ನಂತರ ಪ್ರಯಾಣಿಕರ ಸೋಗಿನಲ್ಲಿ ಬಸ್ಸಿನಲ್ಲಿದ್ದ ದರೋಡೆಕೋರರ ಗ್ಯಾಂಗಿನ ಓರ್ವ ಸದಸ್ಯ, ಬ್ಯಾಗ್ ಇಟ್ಕೊಂಡು ಕುಳಿತಿದ್ದ ಪ್ರಯಾಣಿಕ ರಾಕೇಶ ಎಂಬವರ ಷರ್ಟ್ಗೆ ಗುಟ್ಕಾ ಉಗುಳಿದ್ದಾರೆ. ಆಗ ಗುಟ್ಕಾ ಉಗುಳಿರುವುದನ್ನು ರಾಕೇಶ್ ಪ್ರಶ್ನಿಸಿದ್ದಾರೆ. ಅಷ್ಟರಲ್ಲಾಗಲೆ ಬಸ್ಸಿನಲ್ಲೇ ಇದ್ದ ಗ್ಯಾಂಗಿನ ಮೂವರು ಸೇರಿಕೊಂಡು ರಾಕೇಶ ಹೊಟ್ಟೆಗೆ ಚಾಕು ಇಟ್ಟು ಬಸ್ಸಿನ ಚಾಲಕನಿಗೆ ಚಾಕು ತೋರಿಸಿ, ಬಸ್ ನಿಲ್ಲಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ.
- Advertisement 4
ಚಾಕು ಕಂಡು ದಿಕ್ಕು ತೋಚದಂತಾದ ಬಸ್ಸಿನ ಚಾಲಕ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರಲ್ಲಿರುವ ಬಂಕಾಪುರ ಸ್ಮಶಾನದ ಬಳಿ ಬಸ್ ನಿಲ್ಲಿಸಿದ್ದಾನೆ. ಆಗ ದರೋಡೆಕೋರರು, ರಾಕೇಶ ಬಳಿ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿ ಆಗಿದ್ದಾರೆ. ಈ ಕುರಿತು ರಾಕೇಶ, ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ – ಆರೋಪಿ ಆರ್.ಡಿ.ಪಾಟೀಲ್ಗೆ ಸಿಐಡಿ ನೋಟಿಸ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k