ದೆಹಲಿ: ರಣಜಿ ಟೂರ್ನಿಯ ನಾಕೌಟ್ ಹಂತಕ್ಕೆ ತೆರಳಲು ಗೆಲುವು ಅನಿವಾರ್ಯವಾಗಿರೋ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ದಿನ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದೆ. ಮೊದಲ ದಿನವೇ ರೈಲ್ವೇಸ್ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದು, ಗೆಲುವಿನ ಕನಸು ಚಿಗುರಿದೆ.
ದೆಹಲಿಯ ಕರ್ನೈಲ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಾರಂಭದಿಂದಲೂ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ತೋರಿದ ಕರ್ನಾಟಕ ಬೌಲರ್ ಗಳು ರೈಲ್ವೇಸ್ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ ಪರೇಡ್ ಮಾಡಿಸಿದ್ರು. ಪರಿಣಾಮ ಮಂದ ಬೆಳಕಿನಿಂದ ಮೊದಲ ದಿನದ ಆಟ ಮುಕ್ತಾಯಕ್ಕೆ ರೈಲ್ವೇಸ್ ತಂಡ 6 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದೆ.
ರೈಲ್ವೇಸ್ ಪರ ಅರಿಂದಮ್ ಘೋಷ್ 33 ರನ್ (88 ಎಸೆತ, 4 ಬೌಂಡರಿ), ಅವಿನಾಶ್ ಯಾದವ್ 29* (92 ಎಸೆತ, 4 ಬೌಂಡರಿ) ಗಳಿಸಿದರು. ಉಳಿದ ಯಾವ ಬ್ಯಾಟ್ಸ್ ಮನ್ಗಳು ಉತ್ತಮ ಪ್ರದರ್ಶನ ತೋರಲು ವಿಫಲರಾದರು.
ಕರ್ನಾಟಕದ ಪರ ಪ್ರತೀಕ್ ಜೈನ್ 4 ವಿಕೆಟ್ ಗಳಿಸಿ ಮಿಂಚಿದರೆ, ಅಭಿಮನ್ಯು ಮಿಥುನ್ 2 ವಿಕೆಟ್ ಪಡೆದು ರೈಲ್ವೇಸ್ ಬ್ಯಾಟ್ಸ್ ಮನ್ ಗಳನ್ನ ಕಾಡಿದರು. ಮಂದ ಬೆಳಕಿನ ಕಾರಣ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯ್ತು. ಮೊದಲ ದಿನದಾಟದಲ್ಲಿ ಕೇವಲ 49 ಓವರ್ ಮಾತ್ರ ಮಾಡಲು ಸಾಧ್ಯವಾಯ್ತು. ಪಂದ್ಯ 2ನೇ ದಿನದಾಟಕ್ಕೆ ಮುಂದೂಡಿದ ಪರಿಣಾಮ ಮೊದಲ ದಿನವೇ ರೈಲ್ವೇಸ್ ತಂಡವನ್ನು ಆಲ್ಔಟ್ ಮಾಡುವ ಅವಕಾಶ ಕರ್ನಾಟಕಕ್ಕೆ ಮಿಸ್ ಆಯ್ತು. 6 ವಿಕೆಟ್ ಕಳೆದುಕೊಂದು ಸಂಕಷ್ಟಕ್ಕೆ ಸಿಲುಕಿದ್ದ ರೈಲ್ವೇಸ್ಗೆ ಮಂದ ಬೆಳಕು ವರದಾನವಾಯ್ತು. ರೈಲ್ವೇಸ್ ಪರ ನಾಯಕ ಅರಿಂದಮ್ ಘೋಷ್ 32 ರನ್, ಅವಿನಾಶ್ ಯಾದವ್ 29 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.