ಗಾಂಧೀನಗರ: ಕರ್ನಾಟಕದ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ (Randeep Surjewala) ಅವರನ್ನು ಇದೀಗ ಗುಜರಾತ್ (Gujarat) ಉಸ್ತುವಾರಿಯಾಗಿ ನೇಮಕ ಮಾಡಲಾಗಿದ್ದು, ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ವಿವಿಧ ರಾಜ್ಯಗಳಿಗೆ ಜನರಲ್ ಸೆಕ್ರೆಟರಿಗಳು ಮತ್ತು ಉಸ್ತುವಾರಿಗಳ ನೇಮಕ ಮಾಡಿ, ಎಐಸಿಸಿ ಆದೇಶಿಸಿದೆ. ಸದ್ಯ ಕರ್ನಾಟಕದ ಉಸ್ತುವಾರಿ ಜನರಲ್ ಸೆಕ್ರೆಟರಿಯಾಗಿರುವ ಸುರ್ಜೇವಾಲ ಅವರನ್ನು ಗುಜರಾತ್ ಉಸ್ತುವಾರಿಯಾಗಿ ನೇಮಿಸಿ, ಹೆಚ್ಚುವರಿ ಜವಾಬ್ದಾರಿ ನೀಡಿದ್ದಾರೆ. ಇದನ್ನೂ ಓದಿ: ದುಸ್ಸಾಹಸಕ್ಕೆ ಕೈಹಾಕಿದ್ರೆ ಪಾಕಿಸ್ತಾನಕ್ಕೆ ನುಗ್ಗಿ ನಮ್ಮ ಸೇನೆ ಬೇಟೆಯಾಡುತ್ತೆ: ಮೋದಿ
ಇನ್ನೂ ಭೂಪೇಶ್ ಬಘೇಲ್ ಅವರನ್ನು ಆಸ್ಸಾಂ ಉಸ್ತುವಾರಿ ಜನರಲ್ ಸೆಕ್ರೆಟರಿಯಾಗಿ ನೇಮಕ ಮಾಡಲಾಗಿದೆ. ಪಂಜಾಬ್ ರಾಜ್ಯದ ಜನರಲ್ ಸೆಕ್ರೆಟರಿ ಉಸ್ತುವಾರಿಯಾಗಿ ಸಚಿನ್ ಪೈಲಟ್ ಅವರನ್ನು ನೇಮಿಸಿದ್ದಾರೆ. ಛತ್ತೀಸ್ಗಢ ರಾಜ್ಯದ ಉಸ್ತುವಾರಿಯಾಗಿ ಸುಖದೇವ್ ಭಗತ್, ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯಾಗಿ ಸಿರಿವೆಳ್ಳ ಪ್ರಸಾದ್ ಹಾಗೂ ಆಂಧ್ರಪ್ರದೇಶ ಉಸ್ತುವಾರಿಯಾಗಿ ಪಿ. ವಿ. ಮೋಹನ್ ಅವರನ್ನು ನೇಮಕ ಮಾಡಿದ್ದಾರೆ.
