– ವಾಟ್ಸಪ್ ಗ್ರೂಪ್ ರಹಸ್ಯ ಮತ್ತು ಪ್ರಚೋಧನಕಾರಿ ಭಾಷಣ!
ಲಕ್ನೋ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ವಿವಿಧ ಖಾಸಗಿ ಕಂಪನಿ ನೌಕರರು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆಸುತ್ತಿದ್ದ ಪ್ರತಿಭಟನೆ (Noida Protest) ಕುರಿತು ಸ್ಫೋಟಕ ರಹಸ್ಯಗಳು ಹೊರ ಬೀಳುತ್ತಿವೆ. ರಾತ್ರೋ ರಾತ್ರಿ ಕಾರ್ಮಿಕರ ಪ್ರತಿಭಟನೆ ರೂಪುಗೊಂಡಿದ್ದು ಹೇಗೆ? ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾ ರೂಪ ಪಡೆದುಕೊಂಡಿದ್ದು ಹೇಗೆ? ಅನ್ನೋ ರಹಸ್ಯ ಬೆಳಕಿಗೆ ಬಂದಿದೆ.
ನೋಯ್ಡಾದ ಕಾರ್ಮಿಕರ ಪ್ರತಿಭಟನೆ (Workers’ protest) ಇಂದೂ ಕೂಡ ಮುಂದುವರಿದಿದೆ. 2 ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ 3ನೇ ದಿನವಾದ ಸೋಮವಾರ (ಏ.13) ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ವಿವಿಧ ಕಾರ್ಖಾನೆಗಳ 40,000 ಕ್ಕೂ ಹೆಚ್ಚು ಕಾರ್ಮಿಕರು 80 ಕ್ಕೂ ಹೆಚ್ಚು ಸ್ಥಳಗಳಲ್ಲಿ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು. ಪ್ರಮುಖ ರಸ್ತೆಗಳನ್ನ ತಡೆದು ಪ್ರತಿಭಟಿಸಿದ್ರು, ಕಲ್ಲು ತೂರಾಟ ನಡೆಸಿ, ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಈ ಘಟನೆ ಬಳಿಕ ಹಿಂಸಾತ್ಮಕ ಕೃತ್ಯ ಎಸಗಿದವರನ್ನ ಬಂಧಿಸಿ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಪೊಲೀಸರ ತನಿಖೆ ವೇಳೆ ಸ್ಫೋಟಕ ರಹಸ್ಯಗಳು ಹೊರಬಿದ್ದಿವೆ.

ವಾಟ್ಸಪ್ ಗ್ರೂಪ್: ಪ್ರತಿಭಟನೆಗೆ ರಾತ್ರೋ ರಾತ್ರಿ ಪ್ಲ್ಯಾನ್
ಪೊಲೀಸರು (Noida Police) ಈವರೆಗೆ ನಡೆಸಿರುವ ತನಿಖೆ ಪ್ರಕಾರ, ವಾಟ್ಸಪ್ ಗ್ರೂಪ್ ಮಾಡಿ ಕ್ಯೂಆರ್ ಕೋಡ್ ಮೂಲಕ ಎಲ್ಲರನ್ನ ಗುಂಪಿಗೆ ಸೇರಿಸಲಾಯಿತು. ವಿವಿಧ ಕಾರ್ಮಿಕ ಸಂಘಟನೆಗಳ ಮೂಲಕ ಸಂದೇಶಗಳನ್ನು ಅದರಲ್ಲಿ ಕಳಿಸಲಾಯಿತು. ಹಲವಾರು ಗುಂಪುಗಳಿದ್ದವು, ಅದರಲ್ಲಿ ಒಂದು ಗುಂಪಿಗೆ ʻಕಾರ್ಮಿಕ ಚಳವಳಿʼ ಎಂದು ಹೆಸರಿಡಲಾಗಿತ್ತು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನ ತೀವ್ರಗೊಳಿಸಲು ಪ್ರಚೋದನಕಾರಿ ಭಾಷಣ, ಸಂದೇಶಗಳನ್ನ ಈ ಗ್ರೂಪ್ಗಳಲ್ಲಿ ಹರಿಬಿಡಲಾಯಿತು. ಮಾರನೇ ದಿನವೇ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪೊಲೀಸರು ಅಶ್ರುವಾಯು ಸಿಡಿಸಿದರು ಮತ್ತು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಇದನ್ನೂ ಓದಿ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿದ್ದ ನೌಕರರ ಪ್ರತಿಭಟನೆ ವೇಳೆ ಹಿಂಸಾಚಾರ – ಪೊಲೀಸರ ವಾಹನಗಳಿಗೆ ಬೆಂಕಿ
300 ಜನ ಅರೆಸ್ಟ್, 100 ಮಂದಿ ವಶಕ್ಕೆ
ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಹಿಂಸಾತ್ಮಕ ಕೃತ್ಯ ಎಸಗಿದ 300 ಜನರನ್ನ ಬಂಧಿಸಲಾಗಿದೆ. ಜೊತೆಗೆ 100 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಹೆಚ್ಚಿನವರನ್ನ ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಆಕ್ರೋಶ – ಹಳೆಯ ವೈಷಮ್ಯ ಮತ್ತೆ ಹೊತ್ತಿ ಉರಿತಿದ್ಯಾ?

ಪಾಕ್ ಲಿಂಕ್ ಬಗ್ಗೆ ತನಿಖೆ
ಇನ್ನೂ ಪ್ರತಿಭಟನೆ ವೇಳೆ ಕಾರ್ಮಿಕರು ಚದುರಿದ ನಂತರ ಹೊರಗಿನ ಕೆಲ ವ್ಯಕ್ತಿಗಳು ಹಿಂಸಾಚಾರವನ್ನ ಪ್ರಚೋದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈ ಪ್ರದೇಶದಲ್ಲಿ ಅನೇಕರನ್ನ ಬಂಧಿಸಲಾಗಿತ್ತು. ಪ್ರತಿಭಟನೆ ಹಿಂಸಾಚಾರದ ವೇಳೆ ಹೊಸ ಮುಖಗಳು ಕಂಡುಬಂದಿದೆ. ಹೀಗಾಗಿ ಪಾಕ್ ಸಂಪರ್ಕದ (WhatsApp Groups) ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ನಕ್ಸಲ್ ಚಳವಳಿಯ ಅಂತ್ಯ – ʻರೆಡ್ ಕಾರಿಡಾರ್ʼ ಇತಿಹಾಸದ ಇನ್ಸೈಡ್ ಸ್ಟೋರಿ!

ಸಮಯ ಇಳಿಕೆ & 20,000 ವೇತನ ಹೆಚ್ಚಳಕ್ಕೆ ಆಗ್ರಹ
ಸದ್ಯ ನೋಯ್ಡಾ ಕಾರ್ಖಾನೆಗಳಲ್ಲಿ ಕಾರ್ಮಿಕರು ನಿತ್ಯ 12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 11,000 ರಿಂದ 15,000 ರೂ. ಮಾತ್ರ ಗಳಿಸುತ್ತಿದ್ದಾರೆ. ಕಂಪನಿಗಳು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ಕನಿಷ್ಠ ವೇತನ ನಿಯಮಗಳನ್ನೂ ಪಾಲಿಸುತ್ತಿಲ್ಲ. ಇನ್ನೂ ಕೆಲವರು 2 ಪಾಳಿಯಲ್ಲಿ ಕೆಲಸ ಮಾಡಲು ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಹೀಗಾಗಿ ಕೆಲಸದ ಸಮಯ 8 ಗಂಟೆಗೆ ನಿಗದಿಪಡಿಸಬೇಕು, ವೇತನ 20 ರಿಂದ 25 ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

