ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮುಂಡಾಜೆಯಲ್ಲಿ (Mundaje) ದಾಖಲೆಯ 348.5 ಮಿ.ಮೀ ಮಳೆಯಾಗಿದ್ದರೆ, ಅದೇ ತಾಲೂಕಿನ ಕಲ್ಮಂಜದಲ್ಲಿ 283.5 ಮಿ.ಮೀ ಮಳೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(KSNDMC) ಆಗಸ್ಟ್ 1 ಶನಿವಾರ ಬೆಳಗ್ಗೆ 8:30 ರಿಂದ ಆಗಸ್ಟ್ 2ರ 7:30ರ ವೇಳೆಗೆ 50 ಮಿ ಮೀಗಿಂತ ಹೆಚ್ಚು ಮಳೆಯಾದ (Rain)ಸ್ಥಳಗಳ ವಿವರವನ್ನು ಪ್ರಕಟಿಸಿದೆ.
ಮುಂಡಾಜೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶನಿವಾರ ಭಾರೀ ಮಳೆಯಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರಮುಖ ನದಿ ಮತ್ತು ತೋಡುಗಳು ಮೈದುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ರಾಜ್ಯಾದ್ಯಂತ 01.08.2026 ರಂದು ಬೆಳಿಗ್ಗೆ 08.30 ರಿಂದ 02.08.2026 ರಂದು ಬೆಳಿಗ್ಗೆ 07.30 ರವರೆಗೆ, 50 ಮಿ.ಮೀ ಗಿಂತ ಹೆಚ್ಚು ಮಳೆಯ ದಾಖಲಿಸಿದ ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರಗಳ ವಿವರಗಳು.#KSNDMC pic.twitter.com/sdgBCc40am
— Karnataka State Natural Disaster Monitoring Centre (@KarnatakaSNDMC) August 2, 2026
ನದಿ-ತೋಡುಗಳ ನೀರು ಸನಿಹದ ಕೃಷಿ ಭೂಮಿಗಳಿಗೆ ನುಗ್ಗಿದ್ದು, ನೂರಾರು ಎಕರೆ ಗದ್ದೆ ಮತ್ತು ಅಡಿಕೆ-ತೆಂಗಿನ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಹಲವಾರು ತೋಟಗಳಿಗೆ ನೀರು ನುಗ್ಗಿರುವ ಪರಿಣಾಮ ಕೃಷಿಕರು ಭಾರೀ ಕೃಷಿ ಹಾನಿಯ ಭೀತಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ, ತಗ್ಗಿನ ಪ್ರದೇಶದಲ್ಲಿದ್ದ ಕೆಲವು ಮನೆಗಳಿಗೂ ಪ್ರವಾಹದ ನೀರು ನುಗ್ಗಿದ್ದು, ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆಯ ತೀವ್ರತೆಗೆ ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ರಸ್ತೆಗೆ ಮಣ್ಣು ಮತ್ತು ಬಂಡೆಗಳು ಕುಸಿದು ಬಿದ್ದಿದ್ದರಿಂದ ಈ ಮಾರ್ಗದಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಪ್ರಸಿದ್ಧ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಪ್ರವಾಹದ ನೀರು ನದಿಯಂತೆ ಹರಿಯುತ್ತಿದ್ದು, ಸಂಚಾರ ತೀವ್ರ ಅಡಚಣೆಗೊಂಡಿದೆ. ವಾಹನ ಸವಾರರು ಮತ್ತು ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳು ಜಾಗರೂಕರಾಗಿರುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.

ಎಲ್ಲಿ ಎಷ್ಟು ಮಳೆ?
ಜಿಲ್ಲೆ- ತಾಲೂಕು- ಮಳೆ (ಮಿ.ಮೀ.)
ದಕ್ಷಿಣ ಕನ್ನಡ – ಬೆಳ್ತಂಗಡಿ – ಮುಂಡಾಜೆ, 348.5
ದಕ್ಷಿಣ ಕನ್ನಡ – ಬೆಳ್ತಂಗಡಿ – ಕಲ್ಮಂಜ, 283.5
ಚಿಕ್ಕಮಗಳೂರು – ಕೊಪ್ಪ – ಶಾನುವಳ್ಳಿ, 281
ಶಿವಮೊಗ್ಗ – ಹೊಸನಗರ – ನಗರ,2 67.25
ಚಿಕ್ಕಮಗಳೂರು – ಶೃಂಗೇರಿ – ಬೆಗಾರ್, 255.5
ಶಿವಮೊಗ್ಗ – ಹೊಸನಗರ – ಯದೂರು,252
ಶಿವಮೊಗ್ಗ – ಹೊಸನಗರ – ಕರಿಮನೆ,250
ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ 1,238.6
ಚಿಕ್ಕಮಗಳೂರು – ಶೃಂಗೇರಿ – ಕಿಗ್ಗ,236.5
ಶಿವಮೊಗ್ಗ – ತೀರ್ಥಹಳ್ಳಿ – ಅರಳಸುರಳಿ, 234
ಚಿಕ್ಕಮಗಳೂರು – ಶೃಂಗೇರಿ – ಅಡ್ಡಗದ್ದೆ, 232
ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ, 227.75
ಚಿಕ್ಕಮಗಳೂರು – ಕೊಪ್ಪ – ಭುವನಕೋಟೆ, 226.5
ಚಿಕ್ಕಮಗಳೂರು – ಶೃಂಗೇರಿ, 221.8
ಶಿವಮೊಗ್ಗ – ಹೊಸನಗರ – ಸುಳಾಗೋಡು, 221.5
ಶಿವಮೊಗ್ಗ – ಹೊಸನಗರ – ಕೈರಾಕುಂದ, 219
ಶಿವಮೊಗ್ಗ – ತೀರ್ಥಹಳ್ಳಿ – ಹೊಸಹಳ್ಳಿ, 217.5
ಉಡುಪಿ – ಕಾರ್ಕಳ – ಮಾಳ, 210.5
ದಕ್ಷಿಣ ಕನ್ನಡ – ಮಂಗಳೂರು – ನೆಲ್ಲಿಕಾರು,207
ಚಿಕ್ಕಮಗಳೂರು – ಕೊಪ್ಪ – ತುಳುವಿನಕೊಪ್ಪ,199.5
ಚಿಕ್ಕಮಗಳೂರು – ಶೃಂಗೇರಿ – ವಿದ್ಯಾರಣ್ಯಪುರ,199.5
ಉತ್ತರ ಕನ್ನಡ – ಸಿದ್ಧಾಪುರ – ದೊಡ್ಡಮನೆ,190.5
ಕೊಡಗು – ಮಡಿಕೇರಿ – ಪೆರಾಜೆ,190
ಶಿವಮೊಗ್ಗ – ಹೊಸನಗರ – ತೃಣಿವೆ,187.5
ಚಿಕ್ಕಮಗಳೂರು – ಕೊಪ್ಪ – ನರಸಿಂಹಪುರ (ನಾರ್ವೆ),187
ಶಿವಮೊಗ್ಗ – ತೀರ್ಥಹಳ್ಳಿ,186.25
ಶಿವಮೊಗ್ಗ – ಹೊಸನಗರ – ನಿಟಿರು,185.5
ಉಡುಪಿ – ಕಾರ್ಕಳ – ಮೂಡಾರು (ಬಾಜೇಗೋಳಿ),185.5
ಚಿಕ್ಕಮಗಳೂರು – ಕೊಪ್ಪ – ಆಸಗೋಡು,183.5
ಉತ್ತರ ಕನ್ನಡ – ಸಿದ್ಧಾಪುರ – ಹಾರ್ಸಿಕಟ್ಟ,183
ದಕ್ಷಿಣ ಕನ್ನಡ – ಬೆಳ್ತಂಗಡಿ,179.6
ಕೊಡಗು – ಮಡಿಕೇರಿ – ಮದೆ,178.5
ಶಿವಮೊಗ್ಗ – ತೀರ್ಥಹಳ್ಳಿ – ಬಸವನಿ,177.5
ಚಿಕ್ಕಮಗಳೂರು – ಶೃಂಗೇರಿ – ಮೆಣಸೆ,177.5
ಶಿವಮೊಗ್ಗ – ಸೊರಬ – ಚಂದ್ರಗುತ್ತಿ,174.75
ಶಿವಮೊಗ್ಗ – ಸಾಗರ – ಕಾನಲೆ,174.5
ದಕ್ಷಿಣ ಕನ್ನಡ – ಸುಳ್ಯ – ಸಂಪಾಜೆ,169
ಶಿವಮೊಗ್ಗ – ತೀರ್ಥಹಳ್ಳಿ – ನೇರಾಟೂರು,168
ಉಡುಪಿ – ಕಾರ್ಕಳ – ನಲ್ಲೂರು,167.5
ಶಿವಮೊಗ್ಗ – ತೀರ್ಥಹಳ್ಳಿ – ಮೇಲಿನಕುರುವಳ್ಳಿ,166.5
ಚಿಕ್ಕಮಗಳೂರು – ಕೊಪ್ಪ – ಕಮ್ಮರಡಿ,166
