ಹುಬ್ಬಳಿ: ಹಾಡಹಗಲೇ ಮಾರಕಾಸ್ತ್ರದಿಂದ ಅಳಿಯನೊಬ್ಬ ಅತ್ತೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಜಿಲ್ಲೆಯ ನವನಗರ ಪ್ರದೇಶದ ಗಾಮನಗಡ್ಡೆ ಗ್ರಾಮದ ನಿವಾಸಿಯದ ಕರಿಬಸವ್ವಾ ಬೆಂಗೇರಿ (65) ಎಂಬವರೇ ಕೊಲೆಯಾದ ದುರ್ದೈವಿ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕರಿಬಸವ್ವಾರ ಅಳಿಯ ಯಲ್ಲಪ್ಪ ಬೆಂಗೇರಿ ಎಂಬ ವ್ಯಕ್ತಿ ಕೊಲೆ ಮಾಡಿ ಪರಾರಿಯಾದ್ದಾನೆ.
ಇಂದು ಸಂಜೆ ಕರಿಬಸವ್ವಾ ಅವರು ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಅಳಿಯ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಕಾರಣ ಕರಿಬಸವ್ವಾ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಘಟನೆ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.