ವಿವಾದಿತ ತಾರೆ ಪೂನಂ ಪಾಂಡೆ ಅನಾರೋಗ್ಯದ ಕಾರಣದಿಂದಾಗಿ ಕಂಗನಾ ರಣಾವತ್ ನಡೆಸಿಕೊಡುತ್ತಿದ್ದ ‘ಲಾಕ್ ಅಪ್’ ಶೋನಿಂದ ಹೊರಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಅವರ ಆರೋಗ್ಯ ಸುಧಾರಿಸಿದ್ದು, ಈ ಹೊತ್ತಿನಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಮತ್ತೊಂದು ಅಚ್ಚರಿಯ ಸಂಗತಿಯನ್ನು ಹೊರ ಹಾಕಿದ್ದಾರೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?
ಪೂನಂ ಪಾಂಡೆ ಅವರಿಗೆ ವಾಸನೆ ಗ್ರಹಿಸುವ ಶಕ್ತಿ ಇಲ್ಲವಂತೆ. ಪತಿ ಪದೇ ಪದೇ ತಲೆಗೆ ಹೊಡೆಯುತ್ತಿದ್ದರಿಂದ ಮೆದುಳಿನಲ್ಲಿ ರಕ್ತಸ್ರಾವವಾಗಿ ವಾಸನೆ ಗ್ರಹಿಸುವ ಶಕ್ತಿಯನ್ನೇ ಅವರು ಕಳೆದುಕೊಂಡಿದ್ದಾರಂತೆ. ವಾಸನೆ ಗ್ರಹಿಕೆಗೆ ಅವರು ಬೇರೆಯವರನ್ನು ಅವಲಂಬಿಸಬೇಕಾಗಿದೆಯಂತೆ. ಈ ಸ್ಥಿತಿಯು ಯಾರಿಗೂ ಬರಬಾರದು ಎಂದು ನೋವಿನಿಂದಲೇ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್
ಸ್ಯಾಮ್ ಜೊತೆ ಮದುವೆಯಾದಾಗ ಬದುಕು ತುಂಬಾ ಸುಂದರವಾಗಿರುತ್ತದೆ ಎಂದು ಕನಸು ಕಂಡಿದ್ದರಂತೆ. ಆದರೆ ,ಇಷ್ಟೊಂದು ನರಕವಾಗುತ್ತದೆ ಎಂದು ಕನಸಲ್ಲೂ ಎನಿಸಿರಲಿಲ್ಲ. ಸ್ಯಾಮ್ ಮತ್ತು ಕುಟುಂಬ ಸಿಕ್ಕಾಪಟ್ಟೆ ಹಿಂಸೆ ಮಾಡಿತು. ಹಾಗಾಗಿ ನಾನು ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಬೇಕಾಯಿತು ಎಂದು ಅವರು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ : ಹಾಲಿವುಡ್ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್
ಸದ್ಯ ಪೂನಂ ಪಾಂಡೆ ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಗೊಂಡಿದ್ದು, ಬದುಕನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರಂತೆ. ಮೊದಲಿನಂತೆ ನೋವಿನಲ್ಲೂ ನಗುವುದಕ್ಕೆ ಅವರು ಸಿದ್ಧರಿಲ್ಲವಂತೆ. ನೋವು ಮತ್ತು ನಲಿವು ಎರಡನ್ನೂ ಎರಡೂ ರೀತಿಯಲ್ಲೇ ತೋರಿಸಲು ಇಷ್ಟಪಡುತ್ತಾರಂತೆ ಪೂನಂ.