ದಾವಣಗೆರೆ: ಖಾಲಿ ನಿವೇಶನಗಳಲ್ಲಿ ಟನ್ ಗಟ್ಟಲ್ಲೆ ಮೆಡಿಕಲ್ ವೇಸ್ಟ್ ಹಾಕಿ ಸುಡಲು ಮುಂದಾದ ಘಟನೆ ದಾವಣಗೆರೆಯ ರಾಮನಗರದಲ್ಲಿ ನಡೆದಿದೆ.
ಪ್ರತಿನಿತ್ಯ ಅನೈಸರ್ಗಿಕವಾಗಿ ಮೆಡಿಕಲ್ ವೇಸ್ಟ್ ಸುಡುತ್ತಿದ್ದು, ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು. ಇಂದು ಸಹ ವೇಸ್ಟ್ ಮೆಡಿಸಿನ್ ಸುಡಲು ಬಂದ ವಾಹನವನ್ನು ಅಲ್ಲಿನ ನಿವಾಸಿಗಳು ತಡೆದು ತಂದವರಿಗೆ ಛೀಮಾರಿ ಹಾಕಿದ್ದಾರೆ.
ಮೆಡಿಕಲ್ ವೇಸ್ಟ್ ಸುಡುವುದರಿಂದ ಪರಿಸರ ಮತ್ತು ನಾಗರಿಕರ ಮೇಲೆ ದುಷ್ಪರಿಣಾಮ ಬೀರುತ್ತೆ ಅಂತ ಗೊತ್ತಿದ್ದರೂ ಸಹ ಅದನ್ನು ಲೆಕ್ಕಿಸದೆ ಫಾರ್ಮಸಿ ಮಾಲೀಕರು ಜನರ ಆರೋಗ್ಯದ ಜೊತೆ ಅಟವಾಡುತ್ತಿದ್ದಾರೆ.
ವೇಸ್ಟ್ ಮೆಡಿಸಿನ್ ಸುಡಲು ಸರ್ಕಾರದಿಂದ ವ್ಯವಸ್ಥೆ ಮಾಡಿದ್ರು ಅದನ್ನು ಫಾರ್ಮಸಿ ಮಾಲೀಕರು ಉಪಯೋಗಿಸಿಕೊಳ್ಳದೆ ಖಾಲಿ ನಿವೇಶನಗಳಿಗೆ ತಂದು ಸುರಿಯುತ್ತಾರೆ ಎಂದು ಸ್ಥಳೀಯರು ಅರೋಪ ಮಾಡುತ್ತಿದ್ದಾರೆ. ಇನ್ನು ಇಷ್ಟೆಲ್ಲ ಅವಾಂತರ ನಡಿತಾ ಇದ್ರೂ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಆ್ಯಕ್ಟ್ ನ ಉಲ್ಲಂಘನೆ ಮಾಡುತ್ತಿದ್ರೂ ಡ್ರಗ್ ಕಂಟ್ರೋಲರ್ ಅಧಿಕಾರಿಗಳು ಮಾತ್ರ ಯಾವ ಕ್ರಮವನ್ನು ಕೈಗೊಂಡಿಲ್ಲ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.