ತೆಲುಗು ನಟ ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ದುಬೈನಲ್ಲಿ ಒಟ್ಟಿಗೆ ಓಡಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಸುಚೇಂದ್ರ ಪ್ರಸಾದ್ (Suchendra Prasad) ಹೇಳಿದ್ದಾರೆ ಎನ್ನಲಾದ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮಾಜಿ ಪತ್ನಿ ಪವಿತ್ರಾ ಲೋಕೇಶ್ ದುಡ್ಡಿಗಾಗಿ ಏನೆಲ್ಲ ಮಾಡುತ್ತಾಳೆ. ನರೇಶ ಹಿಂದೆ ಬಿದ್ದಿರುವ ಕಾರಣವೂ ಅದೆ. ಆಕೆಗೆ ದುಡ್ಡಿನ ದಾಹ ಎಂದು ಆಡಿಯೋದಲ್ಲಿ ಹೇಳಿದ್ದು, ಆಡಿಯೋ ಕೇಳಿದ ಅನೇಕರು ನಾನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ.
ಪವಿತ್ರಾ ಲೋಕೇಶ್ ಮತ್ತು ನರೇಶ್ ದುಬೈನಲ್ಲಿ (Dubai) ಜೋಡಿಯಾಗಿ ಕಾಣಿಸಿಕೊಂಡ ಮೂರು ದಿನಗಳ ಮುಂಚೆ ಇಬ್ಬರೂ ಮದುವೆಯಾಗಿದ್ದಾರೆ (Wedding) ಎನ್ನುವ ವಿಡಿಯೋವನ್ನು ಸ್ವತಃ ನರೇಶ್ ಪೋಸ್ಟ್ ಮಾಡಿಕೊಂಡಿದ್ದರು. ಈ ವಿಡಿಯೋ ರಿಲೀಸ್ ಆದ ಬೆನ್ನಲ್ಲೇ ದುಬೈ ಟ್ರೀಪ್ ಫೋಟೋಗಳು ಕೂಡ ವೈರಲ್ ಆದವು. ಮದುವೆ ಮುಗಿಸಿಕೊಂಡು ಇಬ್ಬರೂ ಹನಿಮೂನ್ ಗೆ (Honeymoon) ಹೋಗಿದ್ದಾರೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ
ನರೇಶ್ ಅವರ ಆಪ್ತರ ಪ್ರಕಾರ ಸಿನಿಮಾ ಮತ್ತು ಮದುವೆ ಎರಡನ್ನೂ ಮಿಕ್ಸ್ ಮಾಡಿ ಅಭಿಮಾನಿಗಳಲ್ಲಿ ಮತ್ತು ಸ್ವತಃ ಅವರ ಕುಟುಂಬಸ್ಥರಿಗೆ ಗೊಂದಲ ಮೂಡಿಸುತ್ತಿದ್ದಾರಂತೆ ನರೇಶ್. ವಿಡಿಯೋದಿಂದ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ತಗೆದುಕೊಂಡು ಒಂದು ರೀತಿಯಲ್ಲಿ ನರೇಶ್ ಪತ್ನಿಯ ಜೊತೆ ಭಾವನಾತ್ಮಕವಾಗಿ ಆಟವಾಡುತ್ತಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.
ಈ ಮದುವೆ, ಹನಿಮೂನ್ ಬಗ್ಗೆ ಮಾಧ್ಯಮಗಳಿಗೆ ಯಾವುದೇ ರೀತಿಯಲ್ಲಿ ಸ್ಪಷ್ಟನೆ ನೀಡಿಲ್ಲ ನರೇಶ್. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳುವ ಮೂಲಕ ಮಾಧ್ಯಮಗಳಿಂದ ನರೇಶ್ ಜಾರಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಸುದ್ದಿಗಳು ಹರಿದಾಡಿದರೂ, ಪವಿತ್ರಾ ಲೋಕೇಶ್ ಕೂಡ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಅಚ್ಚರಿ ತಂದಿದೆ.