ರಾಯಚೂರು : 228 ಚೀಲ ಭತ್ತ ಸಮೇತ ಲಾರಿಯನ್ನ ಕದ್ದಿದ್ದ ಖದೀಮರು ಕೊನೆಗೂ ಸಿಕ್ಕುಬಿದ್ದು, ಧರ್ಮದೇಟು ತಿಂದ ಘಟನೆ ರಾಯಚೂರಿನ ಆಶಿಹಾಳ ತಾಂಡದ ಬಳಿ ನಡೆದಿದೆ.
ಭತ್ತದ ಮಾಲೀಕರಾದ ಯಲ್ಲಪ್ಪ, ವಿರೇಶ್ ಸೇರಿ ನಾಲ್ಕು ಜನ ಲಾರಿ ಕಳ್ಳರು ಸಿಕ್ಕಿಬಿದ್ದಿದ್ದಾರೆ.
ಯಾದಗಿರಿಯ ಸುರಪುರ ತಾಲೂಕಿನ ಸಗರದಲ್ಲಿ ಲಾರಿಗೆ ಭತ್ತವನ್ನ ತುಂಬಿ ಕೊಪ್ಪಳದ ಗಂಗಾವತಿ ಕಡೆಗೆ ಕಳುಹಿಸಲಾಗಿತ್ತು. ಲಿಂಗಸುಗೂರಿನ ಮುದಗಲ್ ಪಟ್ಟಣದ ಹೊರವಲಯದ ಡಾಬಾವೊಂದರಲ್ಲಿ ಚಾಲಕ ಊಟಕ್ಕೆ ತೆರಳಿದ್ದಾಗ ಲಾರಿಯನ್ನ ಕದ್ದೊಯ್ಯಲಾಗಿತ್ತು.
ಲಿಂಗಸುಗೂರಿನ ಆಶಿಹಾಳ ತಾಂಡ ಬಳಿ ಜಮೀನೊಂದರಲ್ಲಿ, ಕದ್ದ ಲಾರಿಯ ಭತ್ತವನ್ನ ಇನ್ನೊಂದು ಲಾರಿಗೆ ತುಂಬಿಸುತಿದ್ದಾಗ ಸಿಕ್ಕಿಬಿದ್ದ ಖದೀಮರು ತಪ್ಪೊಪ್ಪಿಕೊಂಡಿದ್ದಾರೆ. ಸ್ವತಃ ತಮ್ಮ ಭತ್ತವನ್ನ ತಾವೇ ಕದ್ದು ಲಾರಿ ಮಾಲೀಕನಿಗೆ ವಂಚನೆ ಮಾಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ.
ಘಟನೆ ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.