ರಾಮನಗರ: ನೈಸ್ ರಸ್ತೆಯಲ್ಲಿ ಸಿಸಿಬಿ ಪೊಲೀಸರು ಎಂದು ವಾಹನ ಸವಾರರು ಮತ್ತು ಜೋಡಿ ಬಳಿ ಹಣ ದೋಚುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು – ಮೈಸೂರು ಹೆದ್ದಾರಿ ಹಾಗೂ ನೈಸ್ ರಸ್ತೆಯಲ್ಲಿ ವಾಹನ ನಿಲ್ಲಿಸುವವರನ್ನ ತಾವು ಸಿಸಿಬಿ ಪೊಲೀಸರು ಎಂದು ಹೆದರಿಸಿ ಹಣ ವಸೂಲಿ ಮಾಡ್ತಿದ್ದ ಇಬ್ಬರು ಖತರ್ನಾಕ್ ವ್ಯಕ್ತಿಗಳನ್ನು ರಾಮನಗರ ಗ್ರಾಮಾಂತರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
- Advertisement 2
- Advertisement 3
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನರಸಿಂಹಯ್ಯನದೊಡ್ಡಿ ಗ್ರಾಮದ ನಿವಾಸಿ ರಘು (33) ಹಾಗೂ ರಾಮನಗರ ತಾಲೂಕಿನ ತುಂಬೇನಹಳ್ಳಿ ನಿವಾಸಿ ರವೀಶ್ ಬಂಧಿತ ಆರೋಪಿಗಳು. ಬಂಧಿತ ರಘು ತನ್ನ ಸಂಗಡಿಗರಾದ ರವೀಶ್ ಹಾಗೂ ವೆಂಕಟಗಿರಿಗೌಡ ಜೊತೆ ಹೆದ್ದಾರಿ ಹಾಗೂ ನೈಸ್ ರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡಿರುತ್ತಿದ್ದ ವಾಹನಗಳ ಬಳಿ ತೆರಳಿ, ಅದರಲ್ಲೂ ಜೋಡಿಗಳು ಇರುವ ವಾಹನಗಳನ್ನು ಟಾರ್ಗೆಟ್ ಮಾಡಿಕೊಂಡು ದರೋಡೆ ನಡೆಸುತ್ತಿದ್ದರು. ತಾವು ಸಿಸಿಬಿ ಪೊಲೀಸರು ಎಂದು ವಾಹನ ಸವಾರರು, ಜೋಡಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು.
- Advertisement 4
ಇನ್ನೂ ಯಾವಾಗಲೂ ತನ್ನ ಜೊತೆ ಕೈಕೋಳವನ್ನು ಇಟ್ಟುಕೊಂಡು ಇರ್ತಿದ್ದ ರಘು ಹಾಗೂ ಸಂಗಡಿಗರು ವಾಹನ ಸವಾರರಿಗೆ ಹೆದರಿಸುತ್ತಿದ್ರು. ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಸ್ವಲ್ಪ ದೂರ ಕರೆದೊಯ್ದು ಬಳಿಕ ಅವರ ಫೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇವೆ. ನಿಮ್ಮ ಮನೆಯವರಿಗೆ ಕಳುಹಿಸುತ್ತೇವೆ ಎಂದು ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ರಾಮನಗರ ಪೊಲೀಸರು ದಾಳಿ ನಡೆಸಿ ಮೊದಲಿಗೆ ರಘು ಮತ್ತು ರವೀಶ್ ನನ್ನು ಬಂಧಿಸಿದ್ದು ಮತ್ತೋರ್ವ ಪರಾರಿಯಾಗಿದ್ದಾನೆ.
ಪೊಲೀಸರ ಮನವಿ:
ಯಾರೇ ವ್ಯಕ್ತಿಗಳಾಗಲೀ, ಇಲ್ಲವೇ ಪೊಲೀಸರಾಗಲೀ ತಾವು ಪೊಲೀಸರು ಎಂದು ಹೇಳಿಕೊಂಡು ಹಣ ಕೇಳಿದ್ದಲ್ಲಿ ಯಾವುದಕ್ಕೂ ಹೆದರದೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.