ರಾಯಚೂರು: ಲಾಕ್ಡೌನ್ನಿಂದಾಗಿ ನಗರಪ್ರದೇಶಗಳಿಗೆ ಗುಳೆ ಹೋಗಿದ್ದ ಬಹಳಷ್ಟು ಜನ ಕೂಲಿ ಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲೇ ಉಳಿದುಕೊಂಡಿದ್ದಾರೆ. ಆದರೆ ಈಗ ಕೆಲಸ ಕೊಟ್ಟ ಮಾಲೀಕರು ಕೂಲಿ ಕಾರ್ಮಿಕರನ್ನು ಯಾವುದೇ ಅನುಮತಿ ಪಡೆಯದೇ, ಪರೀಕ್ಷೆಗೆ ಒಳಪಡಿಸಿದೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದೆ.
ರಾಯಚೂರು, ಯಾದಗಿರಿ ಕಾರ್ಮಿಕರನ್ನ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ರಾಯಚೂರಿನಲ್ಲಿ ಲಾರಿಯನ್ನು ತಡೆಹಿಡಿದಿದ್ದಾರೆ. ಈ ವೇಳೆ ಚಿಕ್ಕಮಕ್ಕಳು ಸೇರಿ 50 ಕ್ಕೂ ಹೆಚ್ಚು ಜನರನ್ನು ಸಾಗಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ರಾಮಮೂರ್ತಿ ನಗರ, ಮಾರುತಿ ನಗರ ಸೇರಿ ವಿವಿಧೆಡೆಯಿದ್ದ ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಕರೆದೊಯ್ಯಲಾಗುತ್ತಿತ್ತು. ಕಾರ್ಮಿಕರಿಂದ ಒಂದು ಸಾವಿರ ಪಡೆದು ಊರುಗಳಿಗೆ ಅವರನ್ನು ಲಾರಿಯಲ್ಲಿ ಕಳುಹಿಸುತ್ತಿದ್ದಾರೆ. ಅಕ್ಕಿ ಗಾಡಿ ಎಂದು ಹೇಳಿ ಜನರನ್ನು ಸಾಗಿಸುತ್ತಿರುವ ಲಾರಿ ಚಾಲಕ ಪೊಲೀಸರ ಕೈಗೆ ಸಿಕ್ಕಿಬಿದ್ದು, ಜಿಪಿ ನಗರದ ನಿವಾಸಿ ಪಾಷ ಎಂಬತನಿಗೆ ಜವಾಬ್ದಾರಿ ವಹಿಸಿ ಕೂಲಿಕಾರರನ್ನು ಮಾಲೀಕರು ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ಅಷ್ಟು ಕಾರ್ಮಿಕರನ್ನು ರಾಯಚೂರು ಪೊಲೀಸರು ತಡೆದು ಪರಿಶೀಲನೆಗೆ ಒಳಪಡಿಸಿದ್ದಾರೆ. ರಾಯಚೂರು ಜಿಲ್ಲಾಧಿಕಾರಿ ಬಂಗಲೆ ಬಳಿ ವಾಹನಗಳ ತಪಾಸಣೆ ವೇಳೆ ಕಾರ್ಮಿಕರ ಸಾಗಣೆ ಘಟನೆ ಬಯಲಾಗಿದೆ.