ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲಿನ ಸಂತೆ ಸುತ್ತಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಬಂಡೂರು ತಳಿಯ ಟಗರನ್ನು ಖರೀದಿ ಮಾಡಿದ್ದಾರೆ.
ಇಂದು ಕಿರುಗಾವಲಿನಲ್ಲಿ ನಡೆದ ಬಂಡೂರು ಕುರಿ ಖರೀದಿಗೆಂದು ಸಂತೆಗೆ ಬಂದಿದ್ದ ರಮೇಶ್ಕುಮಾರ್ ಅವರು, ಮೊದಲು ಕುರಿಗಾಗಿ ಸಂತೆ ಸುತ್ತಿದ್ದಾರೆ. ನಂತರ ದಳ್ಳಾಳಿಗಳ ಮೊರೆ ಹೋಗದ ರಮೇಶ್ಕುಮಾರ್ ಅವರು ನೇರವಾಗಿ ರೈತರ ಬಳಿ ಹೋಗಿ ಕುರಿ ಬಗ್ಗೆ ವಿಚಾರಿಸಿದ್ದಾರೆ.
ರೈತ ಸ್ವಾಮಿ ಎಂಬವರ ಬಳಿ ಇದ್ದ ಬಂಡೂರು ತಳಿಯ ಟಗರನ್ನು 25 ಸಾವಿರ ರೂ. ಗೆ ಖರೀದಿಸಿದ್ದಾರೆ. ಬಂಡೂರು ತಳಿಯ ರಕ್ಷಣೆಗಾಗಿ ರಮೇಶ್ಕುಮಾರ್ ಬಂಡೂರು ಟಗರನ್ನು ಖರೀದಿ ಮಾಡಿದ್ದಾರೆ.
ಈ ಹಿಂದೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಆಂಧ್ರದ ಮದನಪಲ್ಲಿಯ ಅಂಗಲಾ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿ ಸಂತೆಗಳಿಗೆ ಭೇಟಿ ನೀಡಿ ಕುರಿಗಳನ್ನು ಖರೀದಿಸಿದ್ದರು. ಈ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಕೂಡ ಕುರಿಗಳನ್ನು ಖರೀದಿಸಿದ್ದರು.