ಚೆನ್ನೈ: ರೈತನೊಬ್ಬ (Farmer) ಜ್ಯೋತಿಷಿಯೊಬ್ಬರ (Astrologer) ಸಲಹೆಯ ಮೇರೆಗೆ ಕೊಳಕು ಮಂಡಲ ಹಾವಿನಿಂದ (Snake) ನಾಲಿಗೆಯನ್ನು (Tongue) ಕಚ್ಚಿಸಿಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ (Tamil Nadu) ಈರೋಡ್ನಲ್ಲಿ ನಡೆದಿದೆ.
ಕಾಪಿಚೆಟ್ಟಿ ಪಾಳ್ಯಂನ ನಿವಾಸಿ ರಾಜಾ (54) ಎಂಬಾತನಿಗೆ ಆಗಾಗ ಹಾವು ಕಚ್ಚುವ ಕನಸು ಬೀಳುತ್ತಿತ್ತು. ಇದರಿಂದಾಗಿ ರಾಜ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಜ್ಯೋತಿಷಿ ರಾಜನಿಗೆ ಹಾವಿನ ದೇವಸ್ಥಾನಕ್ಕೆ ಹೋಗಿ ಕೆಲವು ಆಚರಣೆಗಳನ್ನು ಮಾಡಲು ತಿಳಿಸಿದ್ದಾರೆ. ಆ ಆಚರಣೆಗಳಲ್ಲಿ ಹಾವಿನ ಬಳಿ ನಾಲಿಗೆ ಚಾಚುವುದು ಒಂದಾಗಿತ್ತು. ಜ್ಯೋತಿಷಿಗಳ ಸಲಹೆಯ ಮೇರೆಗೆ ರಾಜ ದೇವಸ್ಥಾನಕ್ಕೆ ಹೋಗಿ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ. ಅದಾದ ಬಳಿಕ ರಾಜ ಕೊಳಕುಮಂಡಲದ ಮುಂದೆ ಮೂರು ಬಾರಿ ನಾಲಿಗೆಯನ್ನು ಚಾಚಿದ್ದಾನೆ. ಈ ವೇಳೆ ಆ ಹಾವು ರಾಜನ ನಾಲಿಗೆಯನ್ನು ಕಚ್ಚಿದೆ.
ರಾಜನಿಗೆ ಹಾವು ಕಚ್ಚಿದ್ದನ್ನು ಕಂಡ ದೇವಸ್ಥಾನದ ಅರ್ಚಕರು ಕೂಡಲೇ ಆತನನ್ನು ಈರೋಡ್ ಮಣಿಯನ್ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಲ್ಲಿ ರಾಜನ ನಾಲಿಗೆಯನ್ನು ತುಂಡರಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಶಿವಲಿಂಗದ ಮೇಲೆ ಮೂಡಿದ ಕಣ್ಣಿನ ಆಕೃತಿ – ವಿಸ್ಮಯ ನೋಡಲು ಮುಗಿಬಿದ್ದ ಜನ
ಈ ಬಗ್ಗೆ ಮಣಿಯನ್ ಮೆಡಿಕಲ್ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಸೆಂಥಿಲ್ ಕುಮಾರನ್ ಮಾತನಾಡಿ, ವೈದ್ಯರು ರಾಜಾನ ನಾಲಿಗೆ ಕತ್ತರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಜೊತೆಗೆ ಹಾವಿನ ವಿಷಕ್ಕೆ ಪ್ರತಿವಿಷವನ್ನೂ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ – ಮಹಾರಾಷ್ಟ್ರದ 42 ಗ್ರಾಮಗಳ ಒಕ್ಕೊರಲಿನ ಮನವಿ