ತುಮಕೂರು: ನಿಶ್ಚಿತಾರ್ಥದ (Engagement) ಉಂಗುರ ಕಳೆದು ಹೋಗಿದ್ದಕ್ಕೆ ಯುವಕನೊಬ್ಬ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವರಾಯಪಟ್ಟಣದಲ್ಲಿ ನಡೆದಿದೆ.
ನಗರದ ಕಮಲೇಶ್ (36) ಮೃತ ದುರ್ದೈವಿ. ಮೃತ ಯುವಕನಿಗೆ ಬೆಂಗಳೂರು ಮೂಲದ ಯುವತಿಯೊಂದಿಗೆ ಮೂರು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ನಿಶ್ಚಿತಾರ್ಥದ ಉಂಗುರ ಕೆಲವು ದಿನಗಳ ಹಿಂದೆ ಸ್ನಾನಕ್ಕೆ ತೆರಳಿದ್ದ ವೇಳೆ ಕಳೆದು ಹೋಗಿತ್ತು. ಬಳಿಕ ಉಂಗುರಕ್ಕಾಗಿ ಯುವಕ ಹುಡುಕಾಟ ನಡೆಸಿದ್ದ, ಆದರೆ ಉಂಗುರ ಸಿಕ್ಕಿರಲಿಲ್ಲ. ಈ ವಿಚಾರವನ್ನು ಮನೆಯವರೊಂದಿಗೆ ಹೇಳಲು ಹೆದರಿ ನ.17 ರಂದು ಯುವಕ ವಿಷ ಸೇವಿಸಿದ್ದ. ಇದನ್ನೂ ಓದಿ: ಮೇಲುಕೋಟೆ ಜಾತ್ರೆಯಲ್ಲಿ ಹೆಜ್ಜೇನು ದಾಳಿ- 30ಕ್ಕೂ ಹೆಚ್ಚು ಜನರಿಗೆ ಗಾಯ, 17 ಮಂದಿ ಅಸ್ವಸ್ಥ
ವಿಷ ಸೇವಿಸಿದ್ದ ಯುವಕನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಮಲೇಶ್ ಇಂದು ಸಾವಿಗೀಡಾಗಿದ್ದಾನೆ. ಕ್ಯಾತ್ಸಂದ್ರ (Kyathsandra) ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ವಿಚ್ಛೇದನ ತೀರ್ಪಿನ ದಿನವೇ ಪತ್ನಿಗೆ ಮಚ್ಚೇಟು – ಆರೋಪಿ ಅರೆಸ್ಟ್