ಬೆಂಗಳೂರು: ಪ್ರಿಯತಮೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಪ್ರಿಯಕರ ಪ್ರೇಮಿಗಳ ದಿನವೇ ನೇಣಿಗೆ ಶರಣಾದ ಘಟನೆ ಬನ್ನೇರುಘಟ್ಟ ಬಳಿಯ ಹುಳಿಮಾವಿನಲ್ಲಿ ನಡೆದಿದೆ.
ಕೊಳ್ಳೆಗಾಲ ಮೂಲದ ಮುತ್ತುರಾಜ್(22) ಮೃತ ಪ್ರಿಯಕರ. ಪ್ರಿಯತಮೆ ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಮುತ್ತುರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
- Advertisement 2
- Advertisement 3
ಒಂದು ವರ್ಷದಿಂದ ಮುತ್ತುರಾಜ್ ಮತ್ತು ಯುವತಿ ಪ್ರೀತಿಸುತ್ತಿದ್ದರು. ಈ ನಡುವೆ ಪ್ರಿಯತಮೆಗೆ ಬೇರೊಬ್ಬ ಯುವಕನ ಜೊತೆ ಪ್ರೇಮಾಂಕುರವಾಗಿದೆ. ಈ ವಿಚಾರ ಸಂಬಂಧ ಎರಡು ದಿನದ ಹಿಂದೆ ಇಬ್ಬರು ಪರಸ್ಪರ ಜಗಳವಾಡಿಕೊಂಡಿದ್ದರು. ಮನನೊಂದಿದ್ದ ಮುತ್ತುರಾಜ್ ಇಂದು ನೇಣಿಗೆ ಶರಣಾಗಿದ್ದು, ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement 4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv