ಶೂಟಿಂಗ್‍ಗೂ 9 ತಿಂಗಳ ಹಿಂದೆಯೇ ಪ್ರಿಪರೇಶನ್ ಮಾಡ್ಕೊಂಡೆ: ಸುದೀಪ್

Public TV
3 Min Read
vikranth rona 1 3

ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ಸಿನಿಮಾ ವಿಶೇಷತೆಯನ್ನು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಜೊತೆ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ‘ವಿಕ್ರಾಂತ್ ರೋಣ’ ಹೇಗೆ ಕಥೆಯಲ್ಲಿ ಭಿನ್ನತೆಯನ್ನು ಪಡೆದಿದೆ ಎಂಬುದರ ಪೂರ್ಣ ವಿವರವನ್ನು ಸೂಕ್ಷ್ಮವಾಗಿ ತಿಳಿಸಿದರು.

sudeep ragnath public tv 1

ವಿಕ್ರಾಂತ್ ರೋಣ ಚಿತ್ರದ ರಿಲೀಸ್ ತಯಾರಿ ಇನ್ನೂ ನಡೀತಾ ಇದೆ. ಸಂಪೂರ್ಣವಾಗಿ ಮುಗಿದಿದೆ ಅಂದ್ರೆ ತಪ್ಪಾಗುತ್ತೆ. ಸಿನಿಮಾ ಈಗಾಗಲೇ ರೆಡಿ ಆಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಸ್ವಲ್ಪ ಬಾಕಿ ಇದೆ. ಪ್ರಮೋಷನ್ ಕ್ಯಾಂಪೇನಿಂಗ್ ಪ್ರಾರಂಭ ಆಗಿದೆ. ನಮ್ಮೆಲ್ಲರ ಗಮನ ಅದರತ್ತ ಹೋಗಿದೆ. ಸಿನಿಮಾ ಮಾಡೋದು ಒಂದು ಚಾಲೆಂಜ್ ಆದ್ರೆ ಇವಾಗ ಇಡೀ ಭಾರತ, ಹೊರರಾಜ್ಯ ಹೊರದೇಶ ನೋಡಬೇಕು ಎಂದು ಬಂದಾಗ ಚಾಲೆಂಜಸ್ ಬೇರೆ ಇರ್ತವೆ. ಕ್ಯಾಪೇನಿಂಗ್ ರೂಟ್ಸ್ ಬೇರೆ ಇರ್ತವೆ. ತುಂಬಾ ಜನರ ಸಹಾಯ ಬೇಕಾಗುತ್ತೆ. ಈಗ ನಾವು ಅದೇ ದಾರಿಯಲ್ಲಿ ಇದ್ದೇವೆ. ಇದನ್ನೂ ಓದಿ: ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ: ಸುದೀಪ್

vikranth rona 4 1

ಈ ಪ್ರಾಜೆಕ್ಟ್‌ನಲ್ಲಿ ನಾನು ಇಂಪ್ರುವೈಸ್ಡ್ ಆಗೋದು ಅಂತ ಬರೋದಿಲ್ಲ. ಅದೆಲ್ಲಾ ಟೀಮ್ ಹಾಗೂ ಕ್ಯಾರೆಕ್ಟರ್ ಹೇಗಿದೆ ಅನ್ನೋದ್ರ ಮೇಲೆ ಬರುತ್ತೆ. ಈ ಚಿತ್ರದಲ್ಲಿ ಕಥೆ ಕೇಳ್ದಾಗ ಅದನ್ನ ಜನಗಳಿಗೆ ನಾವು ಯಾವ ರೀತಿ ತಿಳಿಸಬಹುದು? ಯಾವ ರೀತಿ ಸರ್ವ್ ಮಾಡಬಹುದು ಎಂದು ಯೋಚಿಸಿದ್ದೇವೆ. ಹೊಸ ಪ್ರಪಂಚ ಕ್ರಿಯೇಟ್ ಮಾಡಿ ಹೊಸ ಲ್ಯಾಂಡ್‍ನಲ್ಲಿ ಕಥೆ ಹೇಳಿದ್ರೆ ಹೇಗಿರುತ್ತೆ ಅನ್ನೋದ್ರ ಒಳಗೆ ನಾನು ಹೊರಟುಹೋಗಿದ್ದೆ. ನನ್ನ ನಾನು ಕೆದಕೋಕೆ ಹೋಗ್ಲಿಲ್ಲ. ಒಂದ್ಸರ್ತಿ ಆ ಪ್ರಪಂಚದಲ್ಲಿ ಹೋದ ಕೂಡಲೇ ಎಲ್ಲವೂ ಒಟ್ಟೊಟ್ಟಿಗೇ ಬಂದುಬಿಡುತ್ತೆ. ಇದರಲ್ಲಿ ಪಾತ್ರಕ್ಕೆ ತಯಾರಿಗಿಂತ ಸಿನಿಮಾ ತಯಾರಿ ಜಾಸ್ತಿ ಇತ್ತು. ಒಳಗಡೆ ಹೋಗ್ತಿದ್ದಂತೆ ಎಲ್ಲರೂ ಅವವರವ ಪಾತ್ರದೊಳಗೆ ಹೋಗಿಬಿಟ್ವಿ.

vikranth rona 3 1

ಬೇರೆ ಲಾಂಗ್ಲೇಜ್‍ಲ್ಲಿ ರಿಲೀಸ್ ಮಾಡೋ ಉದ್ದೇಶದಿಂದ ಅಪ್‍ಲಿಫ್ಟ್ ಮಾಡೋಕೆ ಹೋಗ್ಲಿಲ್ಲ. ಈ ಫಿಲ್ಮ್ ಕೆಲವು ಸ್ಟಾಂಡರ್ಡ್ ಡಿಮ್ಯಾಂಡ್ ಮಾಡಿತ್ತು. ಅದನ್ನ ನಾವು ಕೊಟ್ಟಿದ್ದೇವೆ. ಅಂಥಹ ಕಂಟೆಂಟ್ ನಮಗೆ ಸಿಕ್ಕಿರೋದ್ರಿಂದ ಅದನ್ನ ನಾವು ಡೆಕೋರೇಟ್ ಮಾಡಿದ್ದೀವಿ. ಸಿನಿಮಾ ಸ್ಕೇಲ್ ಬಗ್ಗೆ ಅನುಮಾನವಿಲ್ಲ. ಅದನ್ನ ನೀವು ಟೀಸರ್‍ನಲ್ಲೇ ನೋಡಬಹುದು.

vikranth rona 1 2

ಹಾಗಂತ ದೊಡ್ಡ ಸ್ಕೇಲ್‍ನಲ್ಲಿ ಸಿನಿಮಾ ಮಾಡಿದ್ದೀವಿ ಅಂದ ಮಾತ್ರಕ್ಕೆ ಎಲ್ಲಾ ರಾಜ್ಯದವರು ಹೊರಗಿನವ್ರು ಸಿನಿಮಾ ನೋಡ್ತಾರೆ ಅನ್ನೋದು ಡೌಟು. ಸ್ಕೇಲ್ ಹೊರತಾಗಿ ನಾವು ಕಂಟೆಂಟ್‍ನ್ನ ಚೆನ್ನಾಗೇ ಕೆತ್ತಿದ್ದೀವಿ. ತ್ರಿಡಿ ಅಂತ ಹೋಗ್ತಿದ್ದ ಹಾಗೆ ನಿರೀಕ್ಷೆ ಜಾಸ್ತಿ ಆಗುತ್ತೆ. ಪ್ರೊಡಕ್ಷನ್ ವ್ಯಾಲ್ಯೂ ಬೇಕಾಗುತ್ತೆ. ರಿಲೀಸ್ ಡೇಟ್ ಟೀಸರ್‍ನಲ್ಲೇ ನಿಮಗದು ಕಾಣುತ್ತೆ.

vikranth rona 1 4

ನಾನು ಅನುಪ್ ಕಥೆಯನ್ನು ಕೇಳಿದ ನಂತರ ಶೂಟಿಂಗ್ ಮೊದಲು 9 ತಿಂಗಳ ಕೆಲಸ ಮಾಡಿದ್ದೇವೆ. ಈ ಕಥೆಯ ಪ್ರತಿಯೊಂದು ಅಂಶವನ್ನು ನಾವು ಕೆತ್ತಿದ್ದೇವೆ. ಅವತ್ತೆ ನಾವು ಈ ಸಿನಿಮಾವನ್ನು ಜಾಗತಿಕ ಸಿನಿಮಾ ಎಂದು ನಿರ್ಧರ ಮಾಡಿದ್ದೆವು. ಇದೇ ನಮ್ಮ ಗುರಿಯಾಗಿತ್ತು. ಆದರೆ ನಮ್ಮ ಮೊದಲ ಅದ್ಯತೆ ಇದ್ದಿದ್ದು, ಕರ್ನಾಟಕ. ಏಕೆಂದರೆ ನಾವು ಬೇರೆಕಡೆ ಗಮನ ಕೊಟ್ಟು ನಮ್ಮ ಕೊರ್ ಬಿಸ್ನೆಸ್ ಮರೆತರೆ ಕಷ್ಟ. ಅದಕ್ಕೆ ನಾವು ಕಥೆ ಬಿಟ್ಟು ಬೇರೆಕಡೆ ಹೆಚ್ಚು ಗಮನಕೊಟ್ಟಿಲ್ಲ. ಇದನ್ನೂ ಓದಿ: ಕೆಜಿಎಫ್ ಸಿನಿಮಾ ಬಗ್ಗೆ ಸುದೀಪ್ ಮಾತು 

vikranth rona 1 5

ಇದರ ಕಂಟೆಂಟ್ ಯೂನಿವರ್ಸಲ್ ಆಗಿದೆ. ಅಪರೂಪಕ್ಕೆ ನಾವು ಎಲ್ಲ ಸಲ ಸಿನಿಮಾ ಮಾಡಬೇಕಾದ್ರೆ ಎಲ್ಲ ಕಥೆಯನ್ನು ಎಲ್ರೂ ನೋಡ್ತಾರೆ ಅಂತ ನಾವ್ ನಿರ್ಣಯಕ್ಕೆ ಬರೋಲ್ಲ. ಕೆಲವು ಕಥೆ ಮಾತ್ರ ಎಲ್ಲ ಜನರನ್ನ ರೀಚ್ ಆಗುತ್ತೆ. ಅಂಥದ್ರಲ್ಲಿ ಒಂದು ಕಥೆ ಇದು. ನಮ್ಮ ಗಮನ ಅದರ ಕಡೆ ಇತ್ತು. ಈ ಕಥೆ ಓಕೆ ಆದ್ಮೇಲೆ ಶೂಟ್ ಫ್ಲೋರ್ ಹೋಗೋಕೆ ಮುನ್ನ 9 ತಿಂಗಳ ಹಿಂದೆ ಪ್ರಿಪರೇಶನ್ ಮಾಡ್ಕೊಂಡೆ. ಇದನ್ನ ನಾನು ‘ಗ್ಲೋಬಲ್ ಸಿನಿಮಾ ಅಂತೀನಿ’ ಯಾವುದನ್ನೋ ಕಾನ್‍ಸ್ಟ್ರೇಟ್ ಮಾಡೋಕೆ ಹೋಗಿ ನಾವು ನಮ್ಮ ನೆಲದ ಬಿಸಿನೆಸ್ ಕಳೆದುಕೊಳ್ಳೋಕೆ ಇಷ್ಟ ಪಡೋಲ್ಲ. ನಾವು ಸ್ಕ್ರಿಪ್ಟ್ ಬಗ್ಗೆ ನ್ಯಾಯವಾಗಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *