ಕೊಪ್ಪಳ: ಜೆಡಿಎಸ್ (JDS), ಕಾಂಗ್ರೆಸ್ (Congress) ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ಮುಸ್ಲಿಂ ಮಹಿಳಾ (Muslim Womens) ಮುಖಂಡರು ಇದೀಗ ಗಾಲಿ ಜನಾರ್ದನ ರೆಡ್ಡಿ (Janardhan Reddy) ಅವರ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಕೊಪ್ಪಳದ (Koppal) ಸ್ಥಳೀಯ ನಿವಾಸಿಗಳಾದ ಗೌಸಿಯಾ ಬೇಗಂ, ಬಿಲ್ಕಿಸ್ ಬೇಗಂ, ಶಂಷಾದ ಬೇಗಂ ಹಾಗೂ ಲತಾ ಟೈಲರ್ ತಮ್ಮ ನೂರಾರು ಬೆಂಬಲಿಗರೊಂದಿಗೆ ಮೊಹಮ್ಮದ್ ಗೌಸ್ ದಫೇದಾರ್ ನೇತೃತ್ವದಲ್ಲಿ ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRP Party) ಕಚೇರಿಯಲ್ಲಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಈ ವೇಳೆ ಗೌಸಿಯಾ ಬೇಗಂ ಮಾತನಾಡಿ, ಗಂಗಾವತಿಯಲ್ಲಿ ಜೆಡಿಎಸ್ (JDS) ಪಕ್ಷವನ್ನ ಬಲಿಷ್ಠವಾಗಿ ಬೆಳೆಸಲು ಸಮರ್ಥ ನಾಯಕರೇ ಇಲ್ಲ. ಹಾಗಾಗಿ ಅಭಿವೃದ್ಧಿಯ ಹರಿಕಾರ, ಬಡವರ ಹಾಗೂ ದೀನ ದಲಿತರ ಆಶಾ ಕಿರಣ ಜನಾರ್ದನ ರೆಡ್ಡಿ ಅವರನ್ನ ಬೆಂಬಲಿಸುತ್ತೇವೆ. ಅವರು ಕೊಟ್ಟ ಜವಾಬ್ದಾರಿ ನಿಭಾಯಿಸಿ ಪಕ್ಷ ಸಂಘಟಿಸುವಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಹಂಪಿ ಉತ್ಸವ: ಗಾಯಕ ಕೈಲಾಶ್ ಕೇರ್ ಮೇಲೆ ಬಾಟಲಿ ಎಸೆದ ಕಿಡಿಗೇಡಿಗಳು
ಪಕ್ಷ ಸೇರ್ಪಡೆ ನಂತರ ಮಹಿಳಾ ಮುಖಂಡೆ ಬಿಲ್ಕಿಸ್ ಬೇಗಂ ಮಾತನಾಡಿ, ಪ್ರತಿ ಮನೆ ಮನೆಗೂ ಅಲೆದು ಕಾಂಗ್ರೆಸ್ ಪಕ್ಷ ಸಂಘಟಿಸುವಲ್ಲಿ ಮಹಿಳೆಯರ ಪಾತ್ರ ಅಪಾರವಾಗಿತ್ತು. ಆದ್ರೆ ನಮ್ಮನ್ನ ಚುನಾವಣೆಯಲ್ಲಿ ಮಾತ್ರ ಬಳಸಿಕೊಂಡು ನಂತರದ ದಿನಗಳಲ್ಲಿ ಕಡೆಗಣಿಸಿದ್ದಾರೆ. ಅದಕ್ಕಾಗಿ ಈ ಬಾರಿ ರೆಡ್ಡಿ ಅವರ ಪಕ್ಷ ಬೆಂಬಲಿಸುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಕ್ಷತ್ರಿಯ ಸಮುದಾಯದ ಬೇಡಿಕೆಗಳನ್ನು ಈಡೇರಿಸುತ್ತೇವೆ: ಸಿಎಂ ಭರವಸೆ
ಜೊತೆಗೆ ಪ್ರತಿಯೊಂದು ಮನೆ-ಮನೆಗೆ ಅಲೆದು ಕೆಆರ್ಪಿ ಪಕ್ಷ ಸಂಘಟಿಸಿ ಜನಾರ್ದನ ರೆಡ್ಡಿಯವರನ್ನ ಗೆಲ್ಲಿಸುತ್ತೇವೆ. ಈ ಮೂಲಕ ಮಹಿಳೆಯರ ಪಾತ್ರ ಏನೆಂಬುದನ್ನು ಸಾಬೀತು ಮಾಡುತ್ತೇವೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಸಾವಿರಾರು ಮಹಿಳಾ ಮುಖಂಡರು ಕೆಆರ್ಪಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k