ಕಾರವಾರ: ಈ ಬಾರಿಯ ಚುನಾವಣೆ ಸಾವರ್ಕರ್ ಹಾಗೂ ಅಂಬೇಡ್ಕರ್ ಸಿದ್ಧಾಂತದ ನಡುವೆ ನಡೆಯುತ್ತದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ತಿಳಿಸಿದರು.
ಶಿರಸಿಯ ಅಕ್ಷಯ್ ಗಾರ್ಡನ್ನಲ್ಲಿ ನಡೆದ ಪ್ರಜಾಪ್ರತಿಧ್ವನಿ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋಡ್ಸೆ ಸಂತತಿ ಸೋಲಿಸುವ ಪ್ರಯತ್ನವನ್ನು ಕಾಂಗ್ರೆಸ್ (Congress) ಮಾಡುತ್ತಿದೆ. ಬಿಜೆಪಿಯವರು (BJP) ರಾಮನನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಬಿಜೆಪಿ ಅವುರ ಮಾಡುವ ರಾಮನಿಗೂ, ಗಾಂಧೀಜಿ ಹೇಳಿದ ರಾಮನಿಗೂ ಬಹಳ ವ್ಯತ್ಯಾಸವಿದೆ. ಗಾಂಧೀಜಿ ಅವರು ಹೇಳಿದ ರಾಮರಾಜ್ಯದ ಕನಸಿನಲ್ಲಿ, ಎಲ್ಲರೂ ಭಯಭೀತಿಯಿಲ್ಲದೇ ದೇಶದಲ್ಲಿ ಓಡಾಡಬೇಕು ಎಂದು, ಆದರೆ ಬಿಜೆಪಿ ಅವರು ನೀಡುತ್ತಿರುವುದು ಭಯೋತ್ಪಾದಕೀಯ ಭಯದ ಆಡಳಿತವಾಗಿದೆ ಎಂದು ಕಿಡಿಕಾರಿದರು.
- Advertisement 2
- Advertisement 3
ಇತ್ತೀಚೆಗೆ ಶಿವಮೊಗ್ಗದಲ್ಲಿ (Shivamogga) ಭಾಷಣ ಮಾಡಿದ ಪ್ರಜ್ಞಾಸಿಂಗ್ ಠಾಕೂರ್ ಮನೆಯಲ್ಲಿರುವ ಚಾಕು, ಚೂರು, ತಲ್ವಾರ್ಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದ್ದರು. ಆದರೆ ಇಂತಹ ಆಡಳಿತ ನಮಗೆ ಬೇಕಿಲ್ಲ. ಈ ಬಾರಿಯ ಚುನಾವಣೆ ಟಿಪ್ಪು v/s ಸಾವರ್ಕರ್ ಅಲ್ಲ, ಸಾವರ್ಕರ್ v/s ಅಂಬೇಡ್ಕರ್ ಚುನಾವಣೆಯಾಗಿದೆ ಎಂದು ನಳೀನ್ ಕುಮಾರ್ ಹೇಳಿಕೆಗೆ ಟಾಂಗ್ ನೀಡಿದರು. ಇದನ್ನೂ ಓದಿ: 7ನೇ ವೇತನ ಆಯೋಗ ಜಾರಿ, ನೌಕರರಿಗೆ ಸಕಾಲಕ್ಕೆ ಸಂಬಳ: ಜೆಪಿ ನಡ್ಡಾ ಭರವಸೆ
- Advertisement 4
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ತರಾತುರಿ ಟೆಂಡರ್ನಲ್ಲಿ ಮಾತ್ರವಲ್ಲ, ಸರ್ಕಾರದ ಎಲ್ಲ ಟೆಂಡರ್ಗಳಲ್ಲೂ 40% ಕಮಿಷನ್ ಇದೆ. 40% ಕಮಿಷನ್ ಬಗ್ಗೆ ಜಗಜ್ಜಾಹೀರಾತಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನರೇಂದ್ರ ಮೋದಿ ಅವರ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಸನದಲ್ಲಿ ಸೊಸೈಟಿ ಗೋದಾಮಿಗೆ ನುಗ್ಗಿ 13 ಚೀಲ ಅಕ್ಕಿ ತಿಂದ ಆನೆ!
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k