ಹಾಸನ: ಜೆಡಿಎಸ್ (JDS) ಭದ್ರಕೋಟೆ ಹಾಸನ (Hassan) ಜಿಲ್ಲೆಯಲ್ಲಿ ಟಿಕೆಟ್ ಸಂಘರ್ಷ ತಾರಕಕ್ಕೇರಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ (H.D DeveGowda) ಕುಟುಂಬದಲ್ಲಿ ಇದೀಗ ಟಿಕೆಟ್ ಫೈಟ್ ಜೋರಾಗಿದೆ.
ಬಿಜೆಪಿ (BJP) ತೆಕ್ಕೆಯಲ್ಲಿರುವ ಹಾಸನ ವಿಧಾನಸಭಾ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ದಿ.ಎಚ್.ಎಸ್.ಪ್ರಕಾಶ್ ಪುತ್ರ ಹೆಚ್.ಪಿ.ಸ್ವರೂಪ್ಗೆ (H.P Swaroop) ಟಿಕೆಟ್ ನೀಡಲು ಒಲವು ತೋರಿಸಿದ್ದರು. ಭವಾನಿ ರೇವಣ್ಣ (Bhavani Revanna) ಯಾವಾಗ ಬಹಿರಂಗವಾಗಿ ನನ್ನನ್ನೇ ಅಭ್ಯರ್ಥಿ ಮಾಡ್ತಾರೆ ಎಂದು ಸ್ವಯಂ ಘೋಷಣೆ ಮಾಡಿಕೊಂಡರು ಅಲ್ಲಿಂದ ಜೆಡಿಎಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಇದನ್ನೂ ಓದಿ: ಬೆಳಗಾವಿ ನಾಯಕರಿಗೆ ಅಮಿತ್ ಶಾ ಒಗ್ಗಟ್ಟಿನ ಪಾಠ – 15 ಸ್ಥಾನ ಗೆಲ್ಲುವ ಗುರಿ
123 ಸೀಟ್ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಅಂತಿರೋ ಜೆಡಿಎಸ್ನಲ್ಲಿ ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ವಿಚಾರವಾಗಿ ಕುಟುಂಬ ಕದನ ಭುಗಿಲೇಳುವಂತೆ ಮಾಡಿದೆ. ಟಿಕೆಟ್ ಬೇಕೇ ಬೇಕು ಎಂದು ಭವಾನಿ ರೇವಣ್ಣ ಪಟ್ಟು ಹಿಡಿದಿದ್ದಾರೆ. ಆದ್ರೆ ಇದಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅಡ್ಡಿಯಾಗಿರುವುದು ಹೆಚ್.ಡಿ.ರೇವಣ್ಣ (H.D Revanna) ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ. ಆದರೂ ಹಠ ಬಿಡದ ಭವಾನಿ ಹಾಸನ ಕ್ಷೇತ್ರದಾದ್ಯಂತ ಮತ್ತಷ್ಟು ಆಕ್ಟೀವ್ ಆಗಿ ಓಡಾಡ್ತಿದ್ದಾರೆ. ತಾಯಿಗೆ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಎಂಎಲ್ಸಿ ಸೂರಜ್ ರೇವಣ್ಣ (Suraj Revanna) ಬೆನ್ನೆಲುಬಾಗಿ ನಿಂತಿದ್ದಾರೆ.
ಭವಾನಿ ರೇವಣ್ಣ-ಕುಮಾರಸ್ವಾಮಿ ಕಿತ್ತಾಟಕ್ಕೆ ಬ್ರೇಕ್ ಹಾಕಲು, ಕುಟುಂಬದ ಹಿತ ಕಾಯಲು ದೇವೇಗೌಡರ ಮಧ್ಯಪ್ರವೇಶ ಆಗಿದೆ. ನಾನು ಹೇಳೋವರೆಗೂ ಹಾಸನ ಟಿಕೆಟ್ ಕುರಿತು ಯಾರು ಮಾತನಾಡಬಾರದು ಅಂತ ದೇವೇಗೌಡರು ಫರ್ಮಾನು ಹೊರಡಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ದೊಡ್ಡಗೌಡರ ಎಚ್ಚರಿಕೆ ನಡುವೆಯೂ ಚಿಕ್ಕಪ್ಪ ಹೆಚ್ಡಿಕೆಗೆ ಭವಾನಿ ರೇವಣ್ಣ ಪುತ್ರ ಎಂಎಲ್ಸಿ ಸೂರಜ್ ರೇವಣ್ಣ ಟಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ- ದೊಡ್ಡಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್
ಎಚ್ಡಿಕೆ ವಿರೋಧದ ನಡುವೆ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಓಡಾಟ ಜಾಸ್ತಿ ಆಗುತ್ತಿದ್ದಂತೆ ಹೆಚ್.ಪಿ.ಸ್ವರೂಪ್ ಕೂಡ ಹಳ್ಳಿಹಳ್ಳಿಗೆ ತೆರಳಿ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರತಿನಿತ್ಯ ಕಾರ್ಯಕರ್ತರು, ಆಪ್ತರ ಸಭೆ ನಡೆಸಿ ಟಿಕೆಟ್ ಕೈತಪ್ಪಿದ್ರೆ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಹೆಚ್ಡಿಕೆ ಟಿಕೆಟ್ ನೀಡಿದರು ಹೆಚ್.ಡಿ.ರೇವಣ್ಣ ಎದುರು ಹಾಕಿಕೊಂಡು ಚುನಾವಣಾ ಅಖಾಡಕ್ಕೆ ಇಳಿದು ಜಯಗಳಿಸುವುದು ಸ್ವರೂಪ್ಗೆ ಕಷ್ಟಕರವಾಗಿದ್ದು, ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.
ಒಟ್ಟಿನಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಫ್ಯಾಮಿಲಿ ಫೈಟ್ ಆಗಿ ಮಾರ್ಪಟ್ಟಿದೆ. ಭವಾನಿ ರೇವಣ್ಣಗೆ ಟಿಕೆಟ್ ಕೊಡಲು ಹೆಚ್ಡಿಕೆ ವಿರೋಧ ವ್ಯಕ್ತಪಡಿಸುತ್ತಿದ್ದರೂ. ರೇವಣ್ಣ ನಡೆ ಮಾತ್ರ ನಿಗೂಢವಾಗಿದೆ. ಆದ್ರೆ ದೇವೇಗೌಡರು ಯಾರಿಗೆ ಮಣೆ ಹಾಕ್ತಾರೆ ಅನ್ನೋದು ಕುತೂಹಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k