– ಒಂದು ತಪ್ಪು ಮತ ಹಾಕಿದ್ರೆ ನಿಮಗೆ ಯಮ ಕಾಣಿಸ್ತಾನೆ ಎಂದ ಶಾಸಕ
ರಾಮನಗರ: ನೀವು ಸ್ವರ್ಗಕ್ಕೆ ಹೋಗಬೇಕು ಅಂತ ಆಸೆ ಇದ್ರೆ ಡಾ.ಮಂಜುನಾಥ್ಗೆ (Dr Manjunath) ನಿಮ್ಮ ಮತ ನೀಡಿ. ಒಂದು ತಪ್ಪು ಮತ ಹಾಕಿದ್ರೂ ನಿಮಗೆ ಯಮ ಕಾಣಿಸ್ತಾನೆ. ನರಕದಲ್ಲಿ ಬಿಸಿ ಎಣ್ಣೆಗೆ ಅಜ್ಜುತ್ತಾನೆ ಎಂದು ಕನಕಪುರದಲ್ಲಿ (Kanakapura) ಶಾಸಕ ಮುನಿರತ್ನ (Munirathna) ಹೇಳಿದ್ದಾರೆ.
ಕನಕಪುರದ ಬಿಜೆಪಿ-ಜೆಡಿಎಸ್ ಸಮ್ಮಿಲನ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣಕ್ಕೆ ಬಂದರೆ ಜನಸೇವೆ ಮಾಡಬೇಕು. ಡಾ.ಮಂಜುನಾಥ್ ಬಂದಿರೋದು ಸ್ವಾರ್ಥಕ್ಕಲ್ಲ, ಜನಸೇವೆಗೆ. ಬೇರೆಯವರಿಗೆ ಮತ ಹಾಕಿದರೆ ಅದು ಸ್ವಾರ್ಥಕ್ಕೆ ಹೋಗುತ್ತೆ. ಡಾ.ಮಂಜುನಾಥ್ ಅವರ ಸೇವೆ 140 ಕೋಟಿ ಜನತೆಗೆ ಬೇಕು. ಇದನ್ನು ಬರೆದಿಟ್ಟುಕೊಳ್ಳಿ. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು ಅಷ್ಟೇ ಸತ್ಯ. ಡಾ.ಮಂಜುನಾಥ್ ಅವರು ಮೋದಿ ಸಂಪುಟದಲ್ಲಿ ಸಚಿವರಾಗೋದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯ ನಾಯಕರು ನನಗೆ ಟಿಕೆಟ್ ಭರವಸೆ ಕೊಡಬಾರದಿತ್ತು – ಬಿಜೆಪಿ ಟಿಕೆಟ್ ವಂಚಿತ ಬಿವಿ ನಾಯಕ್ ಅಸಮಾಧಾನ
ಸ್ವರ್ಗಕ್ಕೆ ಹೋದರೆ ರಂಭೆ, ಊರ್ವಶಿ, ಮೇನಕೆ ನೋಡಬಹುದು. ನರಕ್ಕೆ ಯಾಕೆ ಹೋಗುತ್ತೀರಾ. ನಾನೇ ಕಠಾರಿವೀರ ಅಂತ ಒಂದು ಸಿನಿಮಾ ಮಾಡಿದ್ದೇನೆ. ಅದರಲ್ಲಿ ಸ್ವರ್ಗ, ನರಕ ಹೇಗಿರುತ್ತೆ ಅಂತ ನೋಡಿ. ಈ ಚುನಾವಣೆ ರಾಮ-ರಾವಣರ ಯುದ್ಧ. ನಿಮಗೆ ರಾಮಬೇಕಾ? ರಾವಣ ಬೇಕಾ? ನಾವು ಈ ರಾಮನನ್ನು ಪಾರ್ಲಿಮೆಂಟ್ಗೆ ಕಳುಹಿಸಬೇಕು. ಬಿಜೆಪಿ ಹೃದಯದಲ್ಲಿ ಜೆಡಿಎಸ್ ಇದೆ. ಮತ ಹಾಕುವಾಗ ಜೆಡಿಎಸ್ ಇಲ್ಲ ಎಂದು ಗೊಂದಲಕ್ಕೀಡಾಗಬೇಡಿ. ಮಂಜುನಾಥ್ ಹೃದಯದಲ್ಲಿ ಜೆಡಿಎಸ್ ಇದೆ. ಹಾಗಾಗಿ ಬಿಜೆಪಿ ಚಿಹ್ನೆಗೆ ಮತ ಹಾಕಿ ಎಂದರು. ಇದನ್ನೂ ಓದಿ: ರೆಡ್ಡಿ ಮರಳಿದ್ದು ಬಿಜೆಪಿಗೆ ದೊಡ್ಡ ಶಕ್ತಿ – ಮೈತ್ರಿಗೆ ಗೆಲುವು ಖಚಿತ: ವಿಜಯೇಂದ್ರ