ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ (Australia) ಹಿಂದೂ ದೇವಾಲಯವೊಂದನ್ನು (Hindu Temple) ಖಲಿಸ್ತಾನ್ (Khalistan) ಬೆಂಬಲಿಗರು ವಿರೂಪಗೊಳಿಸಿ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚಿರುವ ಘಟನೆ ವರದಿಯಾಗಿದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿರುವ (Melbourne) ಮಿಲ್ ಪಾರ್ಕ್ನ ಸ್ವಾಮಿ ನಾರಾಯಣ ದೇವಾಲಯದ ಗೋಡೆಗಳ ಮೇಲೆ ಹಿಂದೂಸ್ತಾನ್ ಮುರ್ದಾಬಾದ್ ಎಂದು ಬರೆಯಲಾಗಿದೆ. ಈ ದಾಳಿಯನ್ನು ದೇವಾಲಯದ ಆಡಳಿತ ಮಂಡಳಿ ಖಂಡಿಸಿದೆ.
ಈ ವಿಧ್ವಂಸಕ ಕೃತ್ಯಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಹಾಗೂ ಇದನ್ನು ಖಂಡಿಸುತ್ತೇವೆ. ನಾವು ಶಾಂತಿ ಹಾಗೂ ಸೌಹಾರ್ದತೆಗೆ ಪ್ರಾರ್ಥನೆ ಮಾಡುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಮೆಟ್ರೋ ಸುರಂಗ ಕಾಮಗಾರಿ – ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರ್ ಕುಸಿದ ರಸ್ತೆ
ವರದಿಗಳ ಪ್ರಕಾರ ಖಲಿಸ್ತಾನ್ ಗುಂಪು ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರಾವಾಲೆಗೆ ಬೆಂಬಲ ವ್ಯಕ್ತಪಡಿಸಿದೆ. ಆತ ಪ್ರಸ್ತಾವಿತ ಸಿಖ್ ಬಹುಸಂಖ್ಯಾತ ಖಲಿಸ್ತಾನ್ ರಾಜ್ಯವನ್ನು ರಚಿಸಲು ದೊಡ್ಡಮಟ್ಟದಲ್ಲಿ ಪ್ರಯತ್ನ ಪಟ್ಟಿದ್ದ. ಆತ ಆಪರೇಷನ್ ಬ್ಲೂಸ್ಟಾರ್ ಸಮಯದಲ್ಲಿ ಸೇನೆಯಿಂದ ಕೊಲ್ಲಲ್ಪಟ್ಟಿದ್ದ.
ದೇವಾಲಯ ವಿರೂಪಗೊಳಿಸಿರುವ ಘಟನೆ ಬಗ್ಗೆ ಮೆಲ್ಬೋರ್ನ್ನ ಹಿಂದೂ ಸಮುದಾಯ ಪೊಲೀಸರಿಗೆ ದೂರು ನೀಡಿದೆ. ಸಂಸದರಿಗೂ ಈ ಬಗ್ಗೆ ತಿಳಿಸಲಾಗಿದ್ದು, ಸಾಂಸ್ಕೃತಿಕ ಸಚಿವರು ಘಟನಾ ಸ್ಥಳಕ್ಕಾಗಮಿಸಿದ್ದಾರೆ. ಇದನ್ನೂ ಓದಿ: ಗನ್ ಲೈಸನ್ಸ್ ಪಡೆದ ಬಿಜೆಪಿ ಮಾಜಿ ನಾಯಕಿ ನೂಪರ್ ಶರ್ಮಾ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k