– ಶಾಮನೂರು ಹಿರಿಯ ಮುತ್ಸದ್ದಿ ಅಲ್ಲ, ಜಾತಿವಾದಿ ಎಂದು ಕುಕ್ಕಿದ ಹಳ್ಳಿಹಕ್ಕಿ
ಚಾಮರಾಜನಗರ: ಶಾಮನೂರು ಶಿವಶಂಕರಪ್ಪ (Shamanur Shivashankarappa) ಹಿರಿಯ ಮುತ್ಸದ್ದಿಯಲ್ಲ, ಜಾತಿವಾದಿ. ಕಾಂಗ್ರೆಸ್ (Congress) ಜೀವಂತವಾಗಿದ್ದರೆ ಅವನನ್ನು ಸಸ್ಪೆಂಡ್ ಮಾಡಲಿ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ (H Vishwanath) ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಶಾಸಕರಾಗಿ, ಮಗ ಮಂತ್ರಿಯಾಗಿ, ನೀನು ಕಾಂಗ್ರೆಸ್ನಲ್ಲಿದ್ದುಕೊಂಡು ಅಧಿಕಾರ ಅನುಭವಿಸಿ ಬೇರೆ ಪಾರ್ಟಿಗೆ ಕ್ಯಾನ್ವಾಸ್ ಮಾಡ್ತಿಯಲ್ಲ ಏನ್ ಹೇಳ್ಬೇಕು ನಿನಗೆ. ನೀನು ದೇಶವಾದಿನೋ? ಇಲ್ಲ, ಜಾತಿವಾದಿನೊ? ಅವರನ್ನ ಪಕ್ಷದಿಂದ ಈ ಕೂಡಲೇ ಹೊರಹಾಕಬೇಕು. ಅವರೆಲ್ಲ ನೆಂಟರು, ಅವರಿಗೆ ಪಾರ್ಟಿ ಸೋತ್ರು ನೆಂಟಸ್ತಿಕೆ ಸೋಲಬಾರದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಿಗಮ-ಮಂಡಳಿ ಬೇಡವೇ ಬೇಡ, ನನಗೆ ಸಚಿವ ಸ್ಥಾನ ಕೊಡಿ: ಶಾಸಕ ಸುಬ್ಬಾರೆಡ್ಡಿ ಪಟ್ಟು
ನಿಗಮ ಮಂಡಳಿ ವಿಚಾರದಲ್ಲಿ ಶಾಸಕರ ಅಸಮಾಧಾನ ವಿಚಾರವಾಗಿ, ಎಂಎಲ್ಎಗಳಿಗೆ ಬೋಡ್ರ್ಸ್ & ಕಾರ್ಪೋರೇಷನ್ ಕೊಡ್ಬೇಡಿ ಎಂದು ವೀರೇಂದ್ರ ಪಾಟೀಲ್ರ ಕಾಲದಲ್ಲೇ ಹೇಳಿದ್ದೆ ಎಂದಿದ್ದಾರೆ.
ಶಾಮನೂರು ಶಿವಶಂಕರಪ್ಪನವರು, ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ, ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಮತ್ತೊಮ್ಮೆ ಸಂಸದರಾಗಬೇಕು ಎಂದಿದ್ದರು. ಇದಕ್ಕೆ ಕಾಂಗ್ರೆಸ್ನಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇನ್ನೂ ಬಿಜೆಪಿ ನಾಯಕರು ರಾಘವೇಂದ್ರ ಅವರ ಕೆಲಸವನ್ನು ಶಾಮನೂರು ಗುರುತಿಸಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಎಲ್ಲರ ಅಭಿಪ್ರಾಯ ಪಡೆದು, ಸುದೀರ್ಘ ಚರ್ಚೆ ಬಳಿಕವೇ ನಿಗಮ-ಮಂಡಳಿಗಳಿಗೆ ನೇಮಕ ಮಾಡಲಾಗಿದೆ: ಡಿಕೆಶಿ