ಕರಾವಳಿಯಲ್ಲಿ ಸಮುದ್ರದ ಅಬ್ಬರ
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಬ್ಬರದ ಗಾಳಿ ಜೊತೆ ಮಳೆ ಸುರಿಯುತ್ತಿದ್ದು ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ತೀರದಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ಗೂ ಹೆಚ್ಚು ವೇಗದಲ್ಲಿ ಗಾಳಿ ಬೀಸುತ್ತಿದ್ದು ಇದರಿಂದಾಗಿ ಕಡಲ ಭಾಗದಲ್ಲಿ ಕಡಲ ಕೊರೆತ ಪ್ರಾರಂಭವಾಗಿದೆ.
ಅಂಕೋಲ ತಾಲೂಕಿನ ಹಾರವಾಡ ಭಾಗದ ತರಂಗಮೇಟ್ ಭಾಗದಲ್ಲಿ ಕಡಲ ಕೊರೆತದಿಂದ ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಒಂದು ಮನೆ ಸಂಪೂರ್ಣ ಬಿದ್ದುಹೋಗಿದ್ದು, ಐವತ್ತಕ್ಕೂ ಹೆಚ್ಚು ತೆಂಗಿನಮರಗಳು ಧರೆಗುರುಳಿದಿವೆ.
Karnataka Rains Live Updates | ರಾಜ್ಯದ ಜಲಾಶಯಗಳಿಗೆ ಜೀವಕಳೆ – ಯಾವ ಡ್ಯಾಂ ನೀರಿನ ಮಟ್ಟ ಎಷ್ಟಿದೆ?
- ಕೆಆರ್ಎಸ್ ಜಲಾಶಯ
ಗರಿಷ್ಠ ಮಟ್ಟ: 124.80 ಅಡಿ
ನೀರಿನ ಮಟ್ಟ : 80.90 ಅಡಿ
ಒಳಹರಿವು : 4291 ಕ್ಯೂಸೆಕ್
ಹೊರಹರಿವು : 764 ಕ್ಯೂಸೆಕ್
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ : 11.487 ಟಿಎಂಸಿ - ಹೇಮಾವತಿ ಜಲಾಶಯ
ಜಲಾಶಯದ ಗರಿಷ್ಠ ನೀರಿನ ಮಟ್ಟ – 2,922.00 ಅಡಿ
ಜಲಾಶಯದ ಇಂದಿನ ನೀರಿನ ಮಟ್ಟ – 2,894.60 ಅಡಿ
ಹೇಮಾವತಿ ಜಲಾಶಯಕ್ಕೆ ಒಳಹರಿವು – 6,294 ಕ್ಯೂಸೆಕ್
ಜಲಾಶಯದಿಂದ ಹೊರಹರಿವು – 300 ಕ್ಯೂಸೆಕ್
ಗರಿಷ್ಠ ಮಟ್ಟ: 37.103 ಟಿಎಂಸಿ
ನೀರಿನ ಮಟ್ಟ : 16.641 ಟಿಎಂಸಿ - ಕಬಿನಿ ಜಲಾಶಯ
ಗರಿಷ್ಠ ಮಟ್ಟ : 2284 (19.52 ಟಿಎಂಸಿ)
ಇಂದಿನ ಮಟ್ಟ : 2258 (6.74 ಟಿಎಂಸಿ)
ಕಳೆದ ವರ್ಷ ಇದೇ ದಿನ: 2,280 (17.28 ಟಿಎಂಸಿ)
ಒಳ ಹರಿವು: 5,774 ಕ್ಯೂಸೆಕ್
ಹೊರ ಹರಿವು: 500 ಕ್ಯೂಸೆಕ್. - ಹಾರಂಗಿ ಜಲಾಶಯ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ – 2,859 ಅಡಿ
ಇಂದಿನ ನೀರಿನ ಮಟ್ಟ – 2,835.92 ಅಡಿಗಳು.
ಇಂದಿನ ನೀರಿನ ಒಳಹರಿವು – 1,344 ಕ್ಯೂಸೆಕ್
ಇಂದಿನ ನೀರಿನ ಹೊರ ಹರಿವು – 180 ಕ್ಯೂಸೆಕ್
ಒಟ್ಟು ಸಂಗ್ರಹ ಮಟ್ಟ – 8.5 ಟಿಎಂಸಿ
ಇಂದಿನ ಸಂಗ್ರಹ ಮಟ್ಟ – 2.9 ಟಿಎಂಸಿ - ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ – 1633 ಅಡಿ
ಇಂದಿನ ಮಟ್ಟ – 1587.92 ಅಡಿ
ಗರಿಷ್ಠ ಸಾಮರ್ಥ್ಯ – 105 ಟಿಎಂಸಿ
ಇಂದಿನ ಸಾಮರ್ಥ್ಯ – 9.379 ಟಿಎಂಸಿ
ಒಳ ಹರಿವು – 1550 ಕ್ಯೂಸೆಕ್
ಹೊರ ಹರಿವು – 140 ಕ್ಯೂಸೆಕ್ - ಆಲಮಟ್ಟಿ ಲಾಲ್ಬಹದ್ದೂರ್ ಶಾಸ್ತ್ರಿ ಜಲಾಶಯ
ಗರಿಷ್ಠ ಮಟ್ಟ : 519.60 ಮೀಟರ್
ಇಂದಿನ ಮಟ್ಟ: 507.69 ಮೀಟರ್
ಗರಿಷ್ಠ ಮಟ್ಟ : 123.081 ಟಿಎಂಸಿ
ಇಂದಿನ ಮಟ್ಟ : 20.654 ಟಿಎಂಸಿ
ಒಳಹರಿವು: 1,239 ಕ್ಯುಸೆಕ್ಸ್
ಹೊರಹರಿವು: 822 ಕ್ಯೂಸೆಕ್ಸ್ - ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ : 1819 ಅಡಿ
ಇಂದಿನ ಮಟ್ಟ : 1751.60 ಅಡಿ
ಗರಿಷ್ಠ ಸಾಮರ್ಥ್ಯ : 151.64 ಟಿಎಂಸಿ.
ಇಂದಿನ ಸಂಗ್ರಹ : 19.61 ಟಿಎಂಸಿ
ಒಳ ಹರಿವು : 18,486 ಕ್ಯೂಸೆಕ್
ಹೊರ ಹರಿವು : 507 ಕ್ಯೂಸೆಕ್ - ಭದ್ರಾ ಜಲಾಶಯ
ಗರಿಷ್ಠ ಮಟ್ಟ : 186 ಅಡಿ.
ಇಂದಿನ ಮಟ್ಟ : 139.6 ಅಡಿ
ಗರಿಷ್ಠ ಸಾಮರ್ಥ್ಯ : 71.53 ಟಿಎಂಸಿ.
ಇಂದಿನ ಸಂಗ್ರಹ : 26.20 ಟಿಎಂಸಿ
ಒಳ ಹರಿವು: 4135 ಕ್ಯೂಸೆಕ್
ಹೊರ ಹರಿವು: 212 ಕ್ಯೂಸೆಕ್ - ತುಂಗಾ ಜಲಾಶಯ
ಗರಿಷ್ಠ ಮಟ್ಟ : 588.24 ಮೀ.
ಇಂದಿನ ಮಟ್ಟ : 587.86 ಮೀ.
ಗರಿಷ್ಠ ಸಾಮರ್ಥ್ಯ : 3.24 ಟಿಎಂಸಿ
ಇಂದಿನ ಸಂಗ್ರಹ : 2.411 ಟಿಎಂಸಿ
ಒಳ ಹರಿವು : 21747 ಕ್ಯೂಸೆಕ್
ಹೊರ ಹರಿವು : 23784 ಕ್ಯೂಸೆಕ್

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆ – ಬೃಹತ್ ಗಾತ್ರದ ಮರ ನೆಲಸಮ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆ
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ಕ್ಕೆ ಬಿದ್ದ ಮರ
ಮರಗಳನ್ನು ತೆರವುಗೊಳಿಸಲು ಮುಂದಾದ ಕಾರ್ಮಿಕರು
ಬೀಳುವ ರೀತಿ ಇರುವ ಮರಗಳನ್ನೂ ತೆರವುಗೊಳಿಸುತ್ತಿರುವ ಕಾರ್ಮಿಕರು
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಶೀಲ್ದಾರ್ ಸುಪ್ರಿತಾ
ಮುಂಗಾರು ಮಳೆ ಅಬ್ಬರಕ್ಕೆ ಸಕಲೇಶಪುರ ಭಾಗದಲ್ಲಿ ಹಲವು ಅನಾಹುತ ಸೃಷ್ಟಿ

ಮಳೆಗಾಗಿ ಇಳಕಲ್ ರೈತರಿಂದ `ಗುರ್ಜಿ’ ಆಚರಣೆ – ಕಪ್ಪೆ ಮೆರವಣಿಗೆ, ಹೆಣ್ಣು ವೇಷ ಧರಿಸಿದ ಗಂಡುಮಕ್ಕಳು
ಮಹಾರಾಷ್ಟ್ರದಲ್ಲಿ ರಣಭೀಕರ ಮಳೆಯಿಂದ ಬಾಗಲಕೋಟೆಯ ನದಿಗಳಿಗೆ ನೀರು
ಆದ್ರೆ ಜಿಲ್ಲಾದ್ಯಂತ ಸುರಿಯದ ಮಳೆ – ಮಳೆಗಾಗಿ ದೇವರ ಮೊರೆ ಹೋದ ಜನ
ಬರದ ನಡುವೆ ಸಾಂಪ್ರದಾಯಕ್ಕೆ ಮೊರೆ – ಮಳೆಗಾಗಿ ಇಳಕಲ್ ರೈತರಿಂದ ʻಗುರ್ಜಿʼ ಆಚರಣೆ
ನಗರದ ಕಿಲ್ಲಾ ಓಣಿಯಲ್ಲಿ ನಡೆದ ಗುರ್ಜಿ ಆಚರಣೆ
ತವೆ ಮೇಲೆ ಮಣ್ಣು ಹಾಕಿ, ಮಣ್ಣಿನಲ್ಲಿ ಕಪ್ಪೆ ಇಟ್ಟು ಊರಲ್ಲಿ ಮೆರವಣಿಗೆ
ಗಂಡು ಮಕ್ಕಳು ಹೆಣ್ಣು ಮಕ್ಕಳ ವೇಷ ಧರಿಸಿ ಮನೆಮನೆಗೆ ಹೋಗಿ ರೊಟ್ಟಿ-ಪಲ್ಲೆ ಸಂಗ್ರಹ
ಸಂಗ್ರಹಿಸಿದ ಆಹಾರವನ್ನ ಕಿಲ್ಲಾ ಹನುಮಂತ ದೇವರ ಗುಡಿಯಲ್ಲಿ ಸಾಮೂಹಿಕವಾಗಿ ಊಟ
ಬರ ಬಂದಾಗ ಮಳೆರಾಯನನ್ನ ಕರೆಯುವ ವಿಧಾನ; ವರುಣದೇವ ಕೃಪೆ ತೋರುತ್ತಾನೆ ಎಂಬ ನಂಬಿಕೆ

ಮೈದುಂಬಿ ಹರಿದ ಕೃಷ್ಣಾ, ದೂದಗಂಗಾ ವೇದಗಂಗಾ ನದಿಗಳು; 2 ದಿನದಲ್ಲಿ 7 ಸಂಪರ್ಕ ಸೇತುವೆ ಮುಳುಗಡೆ
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮುಂದುವರೆದ ಮಳೆ; ಕೃಷ್ಣಾ ನದಿ ಒಳಹರಿವಿನಲ್ಲಿ ಮತ್ತೆ ಹೆಚ್ಚಳ
ಕಳೆದ ಒಂದೇ ರಾತ್ರಿಯಲ್ಲಿ 25,000 ಕ್ಯೂಸೆಕ್ ನೀರು ಹೆಚ್ಚಳ
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಒಟ್ಟು 70 ಸಾವಿರ ಕ್ಯೂಸೆಕ್ ನೀರಿನ ಒಳಹರಿವು
ಮೈದುಂಬಿ ಹರಿಯುತ್ತಿರುವ ಕೃಷ್ಣಾ, ದೂದಗಂಗಾ ವೇದಗಂಗಾ ನದಿಗಳು
ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ ಯಡುವ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆ
ನಿಪ್ಪಾಣಿ ತಾಲೂಕಿನ 6 ಕೆಳ ಹಂತದ ಸೇತುವೆ ಮುಳುಗಡೆ
ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಜಲಾವೃತ
ವೇದಗಂಗಾ ನದಿಗೆ ಅಡ್ಡಲಾಗಿರುವ ಸೇತುವೆ ಅಕ್ಕೋಳ-ಸಿದ್ನಾಳ,
ಜತ್ರಾಟ್-ಭೀವಶಿ, ಬಾರವಾಡ-ಕನ್ನೂರ,ಬೋಜವಾಡಿ-ಗಜವರವಾಡಿ ಸೇತುವೆ ಮುಳುಗಡೆ
ಬೆಳಗಾವಿ ಜಿಲ್ಲೆಯಲ್ಲಿ ಎರಡೇ ದಿನದಲ್ಲಿ 7 ಸಂಪರ್ಕ ಸೇತುವೆಗಳು ಮುಳುಗಡೆ
ಪರ್ಯಾಯ ಮಾರ್ಗದ ಮೂಲಕ ಜನರ ಸಂಚಾರ

ಸೋಮವಾರಪೇಟೆಯಲ್ಲಿ ಗಾಳಿ ಮಳೆ ಅರ್ಭಟ; ಮನೆ ಮುಂಭಾಗದ ತಡೆಗೋಡೆ ಕುಸಿತ
ಕೊಡಗಿನ ಸೋಮವಾರಪೇಟೆ ಭಾಗದಲ್ಲಿ ಗಾಳಿ ಮಳೆ ಅರ್ಭಟ
ಮನೆ ಮುಂಭಾಗದ ತಡೆಗೋಡೆ ಕುಸಿತ; ಮನೆಗೂ ಕಾದಿರುವ ಅಪಾಯ
ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟನೆ
ಗ್ರಾಮದ ಬೆಳಿಕಿಕೊಪ್ಪದ ಲೀಲಾ ಎಂಬುವವರ ಮನೆಯ ಮುಂಭಾಗದ ತಡೆ ಗೋಡೆ ಕುಸಿತ
ಸ್ಥಳಕ್ಕೆ ಗ್ರಾಮ ಪಂಚಾಯತಿ ಅಧಿಕಾರಿಗಳ ಭೇಟಿ, ಪರಿಶೀಲನೆ
ಹಾಸನದ ಮಲೆನಾಡು ಭಾಗದಲ್ಲಿ ಭಾರೀ ಮಳೆ – ಸಕಲೇಶಪುರ ತಾಲ್ಲೂಕಿನ ಶಾಲಾ- ಕಾಲೇಜುಗಳಿಗೆ ರಜೆ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ
ಸಕಲೇಶಪುರ ತಾಲ್ಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಕಾಲೇಜುಗಳಿಗೆ ಇಂದು ರಜೆ ಘೋಷಣೆ
ರಜೆ ಘೋಷಿಸಿ ತಹಶೀಲ್ದಾರ್ ಸುಪ್ರಿತಾ ಆದೇಶ
ಭಾರೀ ಮಳೆಯ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಿದ ತಾಲ್ಲೂಕು ಆಡಳಿತ
ಹೇಮಾವತಿ ಜಲಾಶಯ ನೀರಿನ ಒಳಹರಿವಿನಲ್ಲಿ ಏರಿಕೆ
ಹಾಸನ ಜಿಲ್ಲೆಯಲ್ಲಿ ಚುರುಕುಗೊಂಡ ಮುಂಗಾರು; ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ
ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಜೋರು ಮಳೆ; ನಿನ್ನೆಯಿಂದ ಮಲೆನಾಡು ಭಾಗದಲ್ಲಿ ನಿರಂತರ ಮಳೆ
ಹೇಮಾವತಿ ಜಲಾಶಯಕ್ಕೆ ಒಳಹರಿವಿನಲ್ಲಿ ಏರಿಕೆ
ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯ
37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಹೇಮಾವತಿ ಡ್ಯಾಂ
ಸದ್ಯ ಜಲಾಶಯದಲ್ಲಿರುವ 16.641 ಟಿಎಂಸಿ ನೀರು
12.4269 ಟಿಎಂಸಿ ನೀರು ಬಳಕೆಗೆ ಮಾತ್ರ ಲಭ್ಯ
4.372 ನೀರು ಉಪಯೋಗಕ್ಕೆ ಅಲಭ್ಯ (ಡೆಡ್ ಸ್ಟೋರೇಜ್)
ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯದಲ್ಲಿ ಸಂಗ್ರಹವಾಗಿದ್ದ 34.808 ಟಿಎಂಸಿ ನೀರು
ಬಳಕೆಗೆ ಲಭ್ಯವಿದ್ದ 30.436 ಟಿಎಂಸಿ ನೀರು
ಕಳೆದ ವರ್ಷಕ್ಕಿಂತ ಈ ಬಾರಿ ಅರ್ಧದಷ್ಟು ಕಡಿಮೆಯಿರುವ ನೀರು
ಜಲಾಶಯದ ಗರಿಷ್ಠ ನೀರಿನ ಮಟ್ಟ 2922.00 ಅಡಿ
ಸದ್ಯ 2894.60 ಅಡಿಗಳಷ್ಟಿರುವ ನೀರು
ಹೇಮಾವತಿ ಜಲಾಶಯಕ್ಕೆ ಒಳಹರಿವು 6,294 ಕ್ಯೂಸೆಕ್
ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವು 17,668 ಕ್ಯೂಸೆಕ್
ಜಲಾಶಯದಿಂದ ಹೊರಹರಿವು 300 ಕ್ಯೂಸೆಕ್
ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯದಿಂದ ಇದ್ದ ಹೊರಹರಿವು 9,500
ಕಾವೇರಿಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ

ತುಂಗಭದ್ರಾ ಜಲಾಶಯಕ್ಕೆ ಜೀವಕಳೆ – ಒಳಹರಿವು 2,150 ಕ್ಯೂಸೆಕ್ಗೆ ಏರಿಕೆ
ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಹಿನ್ನೆಲೆ
ತುಂಗಭದ್ರಾ ಜಲಾಶಯಕ್ಕೆ 2,150 ಕ್ಯೂಸೆಕ್ ನೀರು ಒಳಹರಿವು
ಡೆಡ್ ಸ್ಟೋರೇಜ್ ಹಂತಕ್ಕೆ ಬಂದಿದ್ದ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ
133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯ
ಸದ್ಯ ಜಲಾಶಯದಲ್ಲಿ 9.379 ಟಿಎಂಸಿ ನೀರು ಮಾತ್ರ ಸಂಗ್ರಹ
ಕಳೆದ ವರ್ಷದ ಇದೇ ದಿನ ಜಲಾಶಯದಲ್ಲಿ 77.343 ಟಿಎಂಸಿ ನೀರಿನ ಸಂಗ್ರಹ ಇತ್ತು

ಶಿವಮೊಗ್ಗದಲ್ಲಿ ಮುಂದುವರಿದ ಮಳೆ – ಹೊಸನಗರ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
ಮಲೆನಾಡು ಶಿವಮೊಗ್ಗದಲ್ಲಿ ಮುಂದುವರಿದ ಮಳೆ
ಹೊಸನಗರ ತಾಲೂಕಿನಲ್ಲಿ ಭಾರೀ ಮಳೆ ಹಿನ್ನೆಲೆ ಹೊಸನಗರ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
ಅಂಗನವಾಡಿ ಕೇಂದ್ರ, ಶಾಲೆ ಹಾಗೂ ಪಿಯು ಕಾಲೇಜಿಗೆ ರಜೆ ಘೋಷಣೆ
ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ರಜೆ ಘೋಷಿಸಿ, ತಹಶೀಲ್ದಾರ್ ಭರತ್ ರಾಜ್ ರಿಂದ ಆದೇಶ
ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಣೆ
ಹೊಸನಗರ, ನಗರ, ಸಂಪೆಕಟ್ಟೆ, ನಿಟ್ಟೂರು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ಕ್ರಮ

ಮಲೆನಾಡು ಭಾಗದಲ್ಲಿ ಉತ್ತಮ ಮಳೆ – ತುಂಬಿ ಹರಿಯುತ್ತಿದೆ ತುಂಗಾ ಜಲಾಶಯ
ಮಲೆನಾಡು ಭಾಗದಲ್ಲಿ ಉತ್ತಮ ಮಳೆ – ತುಂಬಿ ಹರಿದ ತುಂಗಾ ಜಲಾಶಯ
22 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಯಿಂದ ಹೊರಕ್ಕೆ ಹರಿಸಲಾಗುತ್ತಿದೆ
ದಾವಣಗೆರೆ ಜಿಲ್ಲೆಯ ಹರಿಹರದ ಪಕ್ಕದಲ್ಲೇ ಹರಿಯುತ್ತಿರುವ ತುಂಗಭದ್ರಾ ನದಿ
ಕಳೆದ 2 ದಿನಗಳ ಹಿಂದೆ ನೀರಿಲ್ಲದೇ ಒಣಗಿ ಹೋಗಿದ್ದ ತುಂಗಾಭದ್ರ ನದಿ
ಈಗ ಮೈದುಂಬಿ ಹರಿಯುತ್ತಿದ್ದು ಜನ ನಿಟ್ಟುಸಿರು
ಜಗಳೂರು ಮಾಯಕೊಂಡ ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆ ಸೇರಿದಂತೆ ಹಲವು ಕುಡಿಯುವ ನೀರಿನ ಯೋಜನೆಗಳಿಗೆ ತುಂಗಾಭದ್ರ ನದಿಯೇ ಆಸರೆ

ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಬೃಹತ್ ಮರ – ಮಹಿಳೆಗೆ ಗಾಯ!
ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಚಲಿಸುತ್ತಿದ್ದ ಸ್ಕೂಟರ್ ಮೇಲೆಯೇ ಏಕಾಏಕಿ ಮರ ಬಿದ್ದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ಹೋಬಳಿಯ ಬೇಟೋಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಸಿಂಧು (45) ಎಂಬುವವರು ಸ್ಕೂಟರ್ನಲ್ಲಿ ತಮ್ಮ ಕೆಲಸಕ್ಕೆ ತೆರಳುತ್ತಿದ್ದ ವೇಳೆ, ರಸ್ತೆ ಬದಿಯ ಮರ ಏಕಾಏಕಿ ಅವರ ಮೇಲೆ ಮುರಿದುಬಿದ್ದಿದೆ. ಮರ ಬಿದ್ದ ರಭಸಕ್ಕೆ ಸ್ಕೂಟರ್ ಸಮೇತ ಮಹಿಳೆ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರು ಕೂಡಲೇ ರಕ್ಷಣೆಗೆ ಧಾವಿಸಿ, ಗಾಯಾಳುವನ್ನ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಬೆಳಗಾವಿಯಲ್ಲಿ ಮಳೆಯಬ್ಬರ.. ಸಿಂಗಳಾಪುರ-ಗೋಕಾಕ ಸೇತುವೆ ಜಲಾವೃತ
ರಾಯಚೂರಿನಲ್ಲಿ ಮಳೆಗಾಗಿ ದೇವರ ಮೊರೆ ಹೋದ ರೈತರು – ಗ್ರಾಮದೇವರಿಗೆ 101 ತಂಬಿಗೆ ಜಲಾಭಿಷೇಕ
ರಾಯಚೂರು ಜಿಲ್ಲೆಯಲ್ಲಿ ಮಳೆಗಾಗಿ ರೈತರು ದೇವರ ಮೊರೆ ಹೋಗಿದ್ದಾರೆ. ನಿತ್ಯ ಒಂದಿಲ್ಲೊಂದು ಗ್ರಾಮದಲ್ಲಿ ಭಜನೆ , ಜಲಾಭೀಷೇಕ ಮೂಲಕ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ರಾಯಚೂರು ತಾಲೂಕಿನ ವಡ್ಲೂರು ಗ್ರಾಮಸ್ಥರು ಗ್ರಾಮದ ಎಲ್ಲಾ ದೇವರಿಗೆ 101 ತಂಬಿಗೆ ಜಲಾಭೀಷೇಕ ಮೂಲಕ ವರುಣನ ಪ್ರಾರ್ಥನೆ ನಡೆಸಿದ್ದಾರೆ.
ಪಾದಯಾತ್ರೆ ತೆರಳಿ ಕೃಷ್ಣಾ ನದಿಯಿಂದ ನೀರು ತಂದು ದೇವರಿಗೆ ಜಲಾಭೀಷೇಕ ಮಾಡುತ್ತಿದ್ದಾರೆ. 20 ಕಿ.ಮೀ ನಡೆದು ನೀರು ತಂದು ಗ್ರಾಮದ ಆಂಜನೇಯ ಸ್ವಾಮಿ, ಬಸವಣ್ಣ , ಮಾರೆಮ್ಮ ದೇವಿ, ಈಶ್ವರ ದೇವಸ್ಥಾನ, ದ್ಯಾವಮ್ಮ ದೇವಿ, ಕಂಚು ಮಾರಮ್ಮ ಸೇರಿ ಊರಿನ ಎಲ್ಲಾ ದೇವರುಗಳಿಗೆ ಜಲಾಭೀಷೇಕ ಮೂಲಕ ಪ್ರಾರ್ಥನೆ ಮಾಡುತ್ತಿದ್ದಾರೆ.
ದೇವಸುಗೂರು ಸೂಗುರೇಶ್ವರ ದೇವರಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗ್ರಾಮದ ಎಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಸಿದ್ದಾರೆ. ಮಳೆ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ರೈತರು ಜಿಲ್ಲೆಯಾದ್ಯಂತ ಮೋಡ ಆವರಿಸಿದ್ದರೂ ಧರೆಗಿಳಿಯದ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಇನ್ನೂ ಸರ್ಕಾರ ಮೋಡ ಬಿತ್ತನೆ ಮೂಲಕವಾದ್ರೂ ಮಳೆ ತರಿಸುವ ಪ್ರಯತ್ನಕ್ಕೆ ಮುಂದಾಗಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟೂಬಿಡದ ಮಳೆ; ಬೆಳಗಾವಿ-ಗೋವಾ ಸಂಪರ್ಕ ತಾತ್ಕಾಲಿಕ ಸ್ಥಗಿತ
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿರುವ ಧಾರಾಕಾರ
ರಾಜ್ಯ ಹೆದ್ದಾರಿ ಮೇಲೆಯೇ ಉರಳಿ ಬಿದ್ದ ಬೃಹತ್ ಗಾತ್ರದ ಮರ
ಬೆಳಗಾವಿ-ಗೋವಾ ಸಂಪರ್ಕ ತಾತ್ಕಾಲಿಕ ಸ್ಥಗಿತ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಘಟನೆ
ಮರ ತೆರವು ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಅಧಿಕಾರಿಗಳು
ಹೆದ್ದಾರಿ ಮೇಲೆಯೇ ಸಾಲುಗಟ್ಟಿ ನಿಂತ ಗೋವಾ ಹೋಗುವ ವಾಹನಗಳು

ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ – ಅಪಾಯ ಮಟ್ಟ ಮೀರಿದ ನೀರು
ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ
ಕೃಷ್ಣಾ ನದಿಗೆ 70,000 ಕ್ಯೂಸೆಕ್ ನೀರು ಒಳ ಹರಿವು
ಒಂದೇ ದಿನಕ್ಕೆ 25,000 ಕ್ಯೂಸೆಕ್ ನೀರು ಹೆಚ್ಚಳ
ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಕೃಷ್ಣಾ ನದಿಯ ಒಳ ಹರಿವು
ನದಿ ಉಕ್ಕಿ ಹರಿಯತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ
ಕೇವಲ ಎಚ್ಚರಿಕೆ ಫಲಕ ಅಳವಡಿಸಿ ಕೈ ತೊಳೆದುಕೊಂಡ ಬೆಳಗಾವಿ ಜಿಲ್ಲಾಡಳಿತ
ಅಪಾಯ ಮಟ್ಟ ನೀರು ಹರಿಯತ್ತಿದ್ದರೂ ನದಿ ತೀರದಲ್ಲಿ ಜನರ ಹುಚ್ಚಾಟ
ನದಿಗೆ ಇಳಿದು ಬೈಕ್ ತೊಳೆಯುತ್ತಿರುವ ಯುವಕರು
ನದಿಯಲ್ಲಿ ಇಳಿದು ಬಟ್ಟೆ ತೊಳೆಯುತ್ತಿರುವ ಮಹಿಳೆಯರು
ನದಿ ತೀರದಲ್ಲಿ ನೋಡಲ್ ಅಧಿಕಾರಿ ಹಾಗೂ ಪೊಲೀಸರ ನಿಯೋಜನೆ ಮಾಡದ ಬೆಳಗಾವಿ ಜಿಲ್ಲಾಡಳಿತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆ ಅಬ್ಬರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಗಾಳಿ ಸಹಿತ ಅಬ್ಬರದ ಮಳೆ
ಮಳೆಯಿಂದ ಕಾರವಾರದ ಜಿಲ್ಲಾ ನ್ಯಾಯಾಲಯದ ಸಹಾಯಕ ಅಭಿಯಂತರ ಕಚೇರಿ ಮೇಲೆ ಮರ ಬಿದ್ದು ಕಟ್ಟಡ ದ್ವಂಸ
ಮರದ ಟೊಂಕೆ ಕುಸಿದು ಕಟ್ಟಡದ ಮೇಲ್ಚಾವಣಿ ಸಂಪೂರ್ಣ ಹಾನಿ
ಮರ ಬಿದ್ದ ಪರಿಣಾಮ ದಾಖಲೆಪತ್ರಗಳು ನಾಶ
ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್ಎಸ್ ಜಲಾಶಯಕ್ಕೆ (KRS Dam) ಬರೊಬ್ಬರಿ ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಒಳಹರಿವು ಹರಿದುಬಂದಿದೆ ಹೆಚ್ಚಾಗಿದೆ.
ನಿನ್ನೆ 1,449 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ ಇಂದು 4,291 ಕ್ಯೂಸೆಕ್ಗೆ ಏರಿಕೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದ ಕೆಲವೆಡೆ ಮಳೆ ಚುರುಕುಗೊಂಡ ಹಿನ್ನೆಲೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಂತಾಗಿದೆ.
124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಸದ್ಯ 81.55 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯದಿಂದ 764 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಕೆಆರ್ಎಸ್ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ: 124.80 ಅಡಿ.
ನೀರಿನ ಮಟ್ಟ : 80.90 ಅಡಿ.
ಒಳಹರಿವು : 4291 ಕ್ಯೂಸೆಕ್
ಹೊರಹರಿವು : 764 ಕ್ಯೂಸೆಕ್
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ : 11.487 ಟಿಎಂಸಿ
