ಕನ್ನಡದ ನಟಿ ಪವಿತ್ರಾ ಲೋಕೇಶ್ (Pavithra Lokesh) ವಿಷಯದಲ್ಲಿ ಮತ್ತೆ ಗರಂ ಆಗಿದ್ದಾರೆ ತೆಲುಗು ನಟ ನರೇಶ್ (Naresh). ‘ನಾವಿಬ್ಬರೂ ಏನಾದರೂ ಮಾಡ್ಕೊಳ್ತಿವಿ. ಅದನ್ನು ಕೇಳೋಕೆ ನೀವ್ಯಾರು?’ ಎಂದು ಸಾರ್ವಜನಿಕವಾಗಿಯೇ ಪ್ರಶ್ನೆ ಮಾಡಿದ್ದು, ತಮ್ಮ ಮತ್ತು ಪವಿತ್ರಾ ಲೋಕೇಶ್ ಸಂಬಂಧಕ್ಕೆ ಚ್ಯುತಿ ತರುತ್ತಿರುವವರ ಬಗ್ಗೆ ಪೊಲೀಸ್ (police) ಠಾಣೆ ಮೆಟ್ಟಿಲು ಏರಿದ್ದಾರೆ. ಕಾನೂನು ಮೂಲಕವೇ ಅವರಿಗೆಲ್ಲ ಉತ್ತರ ಕೊಡುವುದಾಗಿ ಅಬ್ಬರಿಸಿದ್ದಾರೆ.
ಪವಿತ್ರಾ ಲೋಕೇಶ್ ಮತ್ತು ನರೇಶ್ ಬಗ್ಗೆ ಕೆಲವರು ರಸವತ್ತಾಗಿ ಕಥೆಗಳನ್ನು ಕಟ್ಟಿ ಹೇಳುತ್ತಿದ್ದಾರಂತೆ. ಕೆಟ್ಟದ್ದಾಗಿ ಟ್ರೋಲ್ ಮಾಡುತ್ತಿದ್ದಾರಂತೆ. ಅಲ್ಲದೇ, ಕೆಲವರು ಸುಳ್ಳು ಸುದ್ದಿಗಳನ್ನೂ ಪ್ರಕಟಿಸುತ್ತಿದ್ದಾರೆ. ಇದರಿಂದ ಬೇಸತ್ತು ಹೋಗಿರುವ ನರೇಶ್, ತಮ್ಮ ಮಾನಹಾನಿ ಮಾಡುವವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಪೊಲೀಸರಿಗೆ ಮೊರೆ ಹೋಗಿದ್ದಾರೆ. ಅವರ ವಿರುದ್ಧ ದೂರು (complaint) ಕೂಡ ನೀಡಿದ್ದಾರೆ.
ನರೇಶ್ ಅವರ ಮಲ ತಂದೆ ಕೃಷ್ಣ ನಿಧನರಾದಾಗ ಪವಿತ್ರಾ ಮತ್ತು ನರೇಶ್ ದೂರದಿಂದ ಮಾಡಿದ ಕಣ್ ಸನ್ನೆಗಳು ಸಖತ್ ಟ್ರೋಲ್ ಆಗಿದ್ದವು. ತಂದೆಯ ಶವದ ಮುಂದೆ ಆ ರೀತಿಯಲ್ಲಿ ನಡೆದುಕೊಂಡಿದ್ದಕ್ಕಾಗಿ ಪವಿತ್ರಾ ಲೋಕೇಶ್ ಮೇಲೆ ಕೃಷ್ಣ ಕುಟುಂಬ ಅಸಮಾಧಾನ ವ್ಯಕ್ತ ಪಡಿಸಿತ್ತು. ಇದು ನರೇಶ್ ಕೋಪಕ್ಕೂ ಕಾರಣವಾಗಿತ್ತು. ಪವಿತ್ರಾ ಮೇಲೆ ಅವರ ಕುಟುಂಬ ಅಸಮಾಧಾನ ವ್ಯಕ್ತ ಪಡಿಸಲು ಕಾರಣ ಟ್ರೋಲ್ ಪೇಜ್ ಗಳು ಎನ್ನುವುದೇ ಈಗಿನ ದೂರಿಗೆ ಕಾರಣ ಎಂದು ಹೇಳಲಾಗುತ್ತಿದೆ.
ನರೇಶ್ ಅವರ ಮಾನಹಾನಿ ಮಾಡುವುದಕ್ಕಾಗಿಯೇ ಕೆಲವರು ನೇಮಕವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರಿಗೆ ಯಾರು ಕುಮ್ಮಕ್ಕು ಕೊಡುತ್ತಿದ್ದಾರೆ ಎನ್ನುವುದು ನರೇಶ್ ಅವರಿಗೆ ಗೊತ್ತಿದೆಯಂತೆ. ಹಾಗಾಗಿ ಸಾಕ್ಷಿ ಸಮೇತವಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ನರೇಶ್.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k